ಎರಡನೆಯ ದಿನದ ಯುದ್ಧ

ಎರಡನೆಯ ದಿನದ ಯುದ್ಧ ಮೊದಲನೆಯ ದಿವಸ ಸೈನ್ಯವು ಹಿಂದೆಸರಿಯಲು, ಯುದ್ಧದಲ್ಲಿ ಭೀಷ್ಮನು ಉತ್ಸಾಹಿಯಾಗಿರಲು, ಹಾಗೆಯೇ ದುರ್ಯೋಧನನು ಸಂತೋಷದಿಂದಿರಲು ಧರ್ಮರಾಜನು ತಕ್ಷಣವೇ ಸಹೋದರರೊಂದಿಗೆ, ಎಲ್ಲ ಜನೇಶ್ವರರೊಡಗೂಡಿ ಒಟ್ಟಿಗೇ ಜನಾರ್ದನನ ಬಳಿಸಾರಿದನು. ಭೀಷ್ಮನ ವಿಕ್ರಮವನ್ನು ನೋಡಿ ಚಿಂತಾಕ್ರಾಂತನಾಗಿ ರಾಜನು ಪರಮ ಶುಚಿಯಿಂದ ವಾರ್ಷ್ಣೇಯನಿಗೆ ಹೇಳಿದನು. “ಕೃಷ್ಣ! ಗ್ರೀಷ್ಮದಲ್ಲಿ ಬೆಂಕಿಯು ಒಣಹುಲ್ಲನ್ನು ಸುಡುವಂತೆ ಶರಗಳಿಂದ ನನ್ನ ಸೈನ್ಯವನ್ನು ದಹಿಸುತ್ತಿರುವ ಈ ಭೀಮಪರಾಕ್ರಮಿ ಭೀಷ್ಮನನ್ನು ನೋಡು! ಅಗ್ನಿಯು ಹವಿಸ್ಸುಗಳನ್ನು ನೆಕ್ಕುವಂತೆ ನನ್ನ ಸೈನ್ಯವನ್ನು ನೆಕ್ಕುತ್ತಿರುವ ಈ…

Continue reading

ಐದನೆಯ ದಿನದ ಯುದ್ಧ

ಐದನೆಯ ದಿನದ ಯುದ್ಧ ರಾತ್ರಿಯು ಕಳೆದು ದಿವಾಕರನು ಉದಯಿಸಲು ಎರಡೂ ಸೇನೆಗಳೂ ಯುದ್ಧಕ್ಕೆ ಬಂದು ಸೇರಿದವು. ಅವರೆಲ್ಲರೂ ಒಟ್ಟಿಗೇ ಪರಸ್ಪರರನ್ನು ಸಂಕ್ರುದ್ಧರಾಗಿ ನೋಡುತ್ತಾ, ಪರಸ್ಪರರನ್ನು ಗೆಲ್ಲಲು ಬಯಸಿ ಹೊರಟರು. ಪಾಂಡವರು ಮತ್ತು ಧಾರ್ತರಾಷ್ಟ್ರರು ವ್ಯೂಹಗಳನ್ನು ರಚಿಸಿ ಸಂರಬ್ಧರಾಗಿ ಪ್ರಹರಿಸಲು ಉದ್ಯುಕ್ತರಾದರು. ಭೀಷ್ಮನು ಮಕರವ್ಯೂಹವನ್ನು ರಚಿಸಿ ಸುತ್ತಲೂ ಅದರ ರಕ್ಷಣೆಯನ್ನು ಮಾಡಿದನು. ಹಾಗೆಯೇ ಪಾಂಡವರು ತಮ್ಮ ವ್ಯೂಹದ ರಕ್ಷಣೆಯ ವ್ಯವಸ್ಥೆಯನ್ನು ಮಾಡಿದರು. ರಥಿಗಳಲ್ಲಿ ಶ್ರೇಷ್ಠ ದೇವವ್ರತನು ಮಹಾ ರಥಸಂಕುಲದಿಂದ ಆವೃತನಾಗಿ ರಥಸೇನ್ಯದೊಂದಿಗೆ…

Continue reading

ಹದಿನಾರನೇ ದಿನದ ಯುದ್ಧ – ೧: ಕರ್ಣ ಸೇನಾಪತ್ಯಾಭಿಷೇಕ

[spacer height=”20px”] ಹದಿನಾರನೇ ದಿನದ ಯುದ್ಧ – ೧: ಕರ್ಣ ಸೇನಾಪತ್ಯಾಭಿಷೇಕ ಆ ದಿನ ಮಹೇಷ್ವಾಸ ದ್ರೋಣನು ಹತನಾಗಲು, ಮಹಾರಥ ದ್ರೋಣಪುತ್ರನು ಮಾಡಿದ ಸಂಕಲ್ಪವು ವ್ಯರ್ಥವಾಗಲು, ಮತ್ತು ಹಾಗೆ ಕೌರವರ ಸೇನೆಯು ಓಡಿಹೋಗುತ್ತಿರಲು ಪಾರ್ಥ ಯುಧಿಷ್ಠಿರನು ಸಹೋದರರೊಂದಿಗೆ ತನ್ನ ಸೇನೆಯ ವ್ಯೂಹವನ್ನು ರಚಿಸಿ ಸಿದ್ಧನಾದನು. ಅವನು ಹಾಗೆ ಸಿದ್ಧನಾಗಿರುವುದನ್ನು ತಿಳಿದು ದುರ್ಯೋಧನನು ಓಡಿಹೋಗುತ್ತಿರುವ ತನ್ನ ಸೇನೆಯನ್ನು ನೋಡಿ ಪೌರುಷದ ಮಾತುಗಳಿಂದ ತಡೆದನು. ತನ್ನ ಸೇನೆಯನ್ನು ಬಾಹುವೀರ್ಯದಿಂದ ವ್ಯವಸ್ಥಿತವಾಗಿಸಿ ಸ್ಥಾಪಿಸಿಕೊಂಡು ಬಹಳ…

Continue reading

ಹದಿನೇಳನೇ ದಿನದ ಯುದ್ಧ – ೫: ಕರ್ಣನ ಕುರಿತಾಗಿ ಯುಧಿಷ್ಠಿರ-ಅರ್ಜುನರಲ್ಲಿ ಮನಸ್ತಾಪ

[spacer height=”20px”] ಹದಿನೇಳನೇ ದಿನದ ಯುದ್ಧ – ೫: ಕರ್ಣನ ಕುರಿತಾಗಿ ಯುಧಿಷ್ಠಿರ-ಅರ್ಜುನರಲ್ಲಿ ಮನಸ್ತಾಪ ಕೃಷ್ಣಾರ್ಜುನರು ರಣಭೂಮಿಯಿಂದ ಹೊರಟು ಶಿಬಿರದಲ್ಲಿ ಒಬ್ಬನೇ ಮಲಗಿದ್ದ ಯುಧಿಷ್ಠಿರನನ್ನು ತಲುಪಿ ರಥದಿಂದ ಕೆಳಕ್ಕಿಳಿದು ಧರ್ಮರಾಜನ ಪಾದಗಳಿಗೆ ವಂದಿಸಿದರು. ಅಶ್ವಿನೀ ದೇವತೆಗಳು ವಾಸವನನ್ನು ಹೇಗೋ ಹಾಗೆ ಅಭಿನಂದಿಸಿದ ಆ ಇಬ್ಬರು ಪುರುಷವ್ಯಾಘ್ರ ಕುಶಲಿ ಕೃಷ್ಣಾರ್ಜುನರನ್ನು ನೋಡಿ ಯುಧಿಷ್ಠಿರನು ವಿವಸ್ವತನು ಅಶ್ವಿನೀ ದೇವತೆಗಳನ್ನು ಹೇಗೋ ಹಾಗೆ ಮತ್ತು ಮಹಾಸುರ ಜಂಭನು ಹತನಾಗಲು ಗುರು ಬೃಹಸ್ಪತಿಯು ಶಕ್ರ-ವಿಷ್ಣು ಇಬ್ಬರನ್ನೂ…

Continue reading

ಹದಿನೇಳನೇ ದಿನದ ಯುದ್ಧ – ೬: ಕರ್ಣನ ವಧೆಗಾಗಿ ಕೃಷ್ಣಾರ್ಜುನರ ಪ್ರಸ್ಥಾನ

ಹದಿನೇಳನೇ ದಿನದ ಯುದ್ಧ – ೬: ಕರ್ಣನ ವಧೆಗಾಗಿ ಕೃಷ್ಣಾರ್ಜುನರ ಪ್ರಸ್ಥಾನ ದಾರುಕನು ಸಿದ್ಧಗೊಳಿಸಿದ ರಥವನ್ನು ನೋಡಿ ಅರ್ಜುನನು ಧರ್ಮರಾಜನ ಆಶೀರ್ವಾದ ಮತ್ತು ಬ್ರಾಹ್ಮಣರ ಸ್ವಸ್ತಿವಾಚನವನ್ನು ಕೇಳಿಸಿಕೊಂಡು ಆ ಸುಮಂಗಲಯುಕ್ತ ಉತ್ತಮ ರಥವನ್ನೇರಿದನು. ಧರ್ಮರಾಜ ಯುಧಿಷ್ಠಿರನು ಅವನಿಗೆ ಕರ್ಣವಧೆಯ ಕುರಿತು ಪರಮ ಆಶೀರ್ವಚನಗಳನ್ನಿತ್ತನು. ಆ ಮಹೇಷ್ವಾಸನು ಹೋಗುತ್ತಿರುವುದನ್ನು ನೋಡಿ ಭೂತಗಳು ಮಹಾತ್ಮ ಪಾಂಡವನಿಂದ ಕರ್ಣನು ಹತನಾದನೆಂದೇ ಭಾವಿಸಿದವ್ರ. ಎಲ್ಲ ದಿಕ್ಕುಗಳೂ ಸುತ್ತಲೂ ವಿಮಲವಾದವು. ನವಿಲುಗಳೂ, ಸಾರಸಗಳೂ ಮತ್ತು ಕ್ರೌಂಚಪಕ್ಷಿಗಳೂ ಪಾಂಡುನಂದನನ್ನು ಪ್ರದಕ್ಷಿಣೆ…

Continue reading

ಹದಿನೇಳನೇ ದಿನದ ಯುದ್ಧ – ೮: ಕರ್ಣವಧೆ

[spacer height=”20px”] ಹದಿನೇಳನೇ ದಿನದ ಯುದ್ಧ – ೮: ಕರ್ಣವಧೆ ವೃಷಸೇನನು ಹತನಾದುದನ್ನು ಕಂಡು ಕೂಡಲೇ ಶೋಕ-ಕೋಪ ಸಮನ್ವಿತನಾದ ಕರ್ಣನು ಎರಡೂ ಕಣ್ಣುಗಳಿಂದ ಶೋಕೋದ್ಭವ ಕಣ್ಣೀರನ್ನು ಸುರಿಸಿದನು. ಕೋಪದಿಂದ ರಕ್ತಾಕ್ಷನಾಗಿದ್ದ ತೇಜಸ್ವಿ ಕರ್ಣನು ರಥದಲ್ಲಿ ಕುಳಿತು ಶತ್ರುಗಳ ಅಭಿಮುಖವಾಗಿ ತೆರಳಿ ಧನಂಜಯನನ್ನು ಯುದ್ಧಕ್ಕೆ ಆಹ್ವಾನಿಸಿದನು. ವ್ಯಾಘ್ರಚರ್ಮ ಆಚ್ಛಾದಿತ ಸೂರ್ಯಸಂಕಾಶ ರಥಗಳಲ್ಲಿ ಕುಳಿತಿದ್ದ ಅವರಿಬ್ಬರೂ ಎದುರುಬದಿರಾಗಿರುವ ಎರಡು ಸೂರ್ಯರಂತೆ ಕಂಡರು. ಶ್ವೇತಾಶ್ವರಾಗಿದ್ದ ಅವರಿಬ್ಬರು ಪುರುಷಾದಿತ್ಯ ಅರಿಮರ್ದನ ಮಹಾತ್ಮರು ದಿವಿಯಲ್ಲಿ ಚಂದ್ರ-ಆದಿತ್ಯರಂತೆ ಶೋಭಿಸಿದರು.…

Continue reading

ಕರ್ಣಾವಸಾನದ ನಂತರ ದುರ್ಯೋಧನನು ಶಲ್ಯನನ್ನು ಸೇನಾಪತಿಯನ್ನಾಗಿ ಅಭಿಷೇಕಿಸಿದುದು

[spacer height=”20px”] ಕರ್ಣಾವಸಾನದ ನಂತರ ದುರ್ಯೋಧನನು ಶಲ್ಯನನ್ನು ಸೇನಾಪತಿಯನ್ನಾಗಿ ಅಭಿಷೇಕಿಸಿದುದು ಕರ್ಣನು ಹತನಾದ ನಂತರ ಕೃಪನು ದುರ್ಯೋಧನನಿಗೆ ಯುದ್ಧವನ್ನು ನಿಲ್ಲಿಸುವ ಸಲಹೆಯನ್ನಿತ್ತಿದುದು ಅರ್ಜುನನಿಂದ ಸೂತಪುತ್ರ ಕರ್ಣನು ಹತನಾಗಲು, ಒಂದುಗೂಡಿಸಲು ಪ್ರಯತ್ನಿಸಿದರೂ, ಸೇನೆಗಳು ಓಡಿಹೋದವು. ಶೋಕದಿಂದ ಚೇತನವನ್ನೇ ಕಳೆದುಕೊಂಡ ದುರ್ಯೋಧನನು ವಿಮುಖನಾಗಿದ್ದನು ಮತ್ತು ಪಾರ್ಥನ ವಿಕ್ರಮವನ್ನು ನೋಡಿ ಸೇನೆಗಳಲ್ಲಿ ತುಂಬಾ ಭಯ-ಉದ್ವೇಗಗಳುಂಟಾಗಿದ್ದವು. ದುಃಖವನ್ನು ಪಡೆದು ಚಿಂತಿಸುತ್ತಿರುವ ಸೇನೆಯನ್ನು ನೋಡಿ, ಸೇನೆಯನ್ನು ಸದೆಬಡಿಯುತ್ತಿರುವವರ ಸಿಂಹನಾದಗಳನ್ನು ಕೇಳಿ, ಯುದ್ಧಭೂಮಿಯಲ್ಲಿ ನರೇಂದ್ರರ ಧ್ವಜಗಳು ಛಿನ್ನವಿಚ್ಛಿನ್ನವಾದುದನ್ನು ನೋಡಿ,…

Continue reading

ಕಾಮ್ಯಕಕ್ಕೆ ಕೃಷ್ಣ, ಮಾರ್ಕಂಡೇಯ ಮತ್ತು ನಾರದರ ಆಗಮನ

[spacer height=”20px”] ಕಾಮ್ಯಕಕ್ಕೆ ಕೃಷ್ಣ, ಮಾರ್ಕಂಡೇಯ ಮತ್ತು ನಾರದರ ಆಗಮನ ಯುಧಿಷ್ಠಿರನ ನಾಯಕತ್ವದಲ್ಲಿ ಕೌಂತೇಯರು ಕಾಮ್ಯಕವನ್ನು ತಲುಪಿದಾಗ ಮುನಿಗಣಗಳಿಂದ ಸ್ವಾಗತಿಸಲ್ಪಟ್ಟು ಕೃಷ್ಣೆಯೊಂದಿಗೆ ಅಲ್ಲಿ ನೆಲೆಸಿದರು. ಆಲ್ಲಿ ಎಲ್ಲ ಕಡೆಗಳಿಂದಲೂ ಬಂದ ಬಹುಮಂದಿ ಬ್ರಾಹ್ಮಣರು ಆ ಪಾಂಡವರನ್ನು ಸುತ್ತುವರೆದು ಸಲಹೆ-ಪ್ರೋತ್ಸಾಹಗಳನ್ನು ನೀಡುತ್ತಿದ್ದರು. ಒಮ್ಮೆ ಒಬ್ಬ ಬ್ರಾಹ್ಮಣನು ಬಂದು ಹೇಳಿದನು: “ಅರ್ಜುನನ ಪ್ರಿಯ ಸಖ, ಮಹಾಬಾಹು ಉದಾರಧೀ ಶೌರಿಯು ಅರ್ಜುನನು ಮರಳಿ ಬಂದಿದ್ದಾನೆಂದು ತಿಳಿದು ಅವನನ್ನು ಕಾಣಲು ಇಲ್ಲಿಗೆ ಬರುತ್ತಿದ್ದಾನೆ. ಹಾಗೆಯೇ ಅನೇಕ…

Continue reading

ಕಿರಾತಾರ್ಜುನೀಯ: ಅರ್ಜುನನಿಗೆ ದಿವ್ಯಾಸ್ತ್ರಗಳ ಪ್ರದಾನ

[spacer height=”20px”] ಕಿರಾತಾರ್ಜುನೀಯ: ಅರ್ಜುನನಿಗೆ ದಿವ್ಯಾಸ್ತ್ರಗಳ ಪ್ರದಾನ ಭೀಮಸೇನ-ಯುಧಿಷ್ಠಿರರಿಬ್ಬರೂ ಹೀಗೆ ಪರಸ್ಪರ ಮಾತನಾಡಿಕೊಳ್ಳುತ್ತಿರುವಾಗ ಅಲ್ಲಿಗೆ ಸತ್ಯವತೀ ಸುತ, ಮಹಾಯೋಗಿ ವ್ಯಾಸನು ಆಗಮಿಸಿದನು. ಅವನು ಬರುತ್ತಿದ್ದಂತೇ ಪಾಂಡವರು ಅವನನ್ನು ಯಥಾನ್ಯಾಯವಾಗಿ ಪೂಜಿಸಿದರು. ಅನಂತರ ಆ ಮಾತನಾಡುವರಲ್ಲಿ ಶ್ರೇಷ್ಠನು ಯುಧಿಷ್ಠಿರನಿಗೆ ಈ ಮಾತುಗಳನ್ನಾಡಿದನು: “ಯುಧಿಷ್ಠಿರ! ನಿನ್ನ ಮನಸ್ಸು-ಹೃದಯಗಳಲ್ಲಿರುವ ವಿಷಯವನ್ನು ತಿಳಿದಿದ್ದೇನೆ. ಆದುದರಿಂದಲೇ ನಾನು ಬೇಗನೇ ಇಲ್ಲಿಗೆ ಬಂದಿದ್ದೇನೆ. ಭೀಷ್ಮ, ದ್ರೋಣ, ಕೃಪ, ಕರ್ಣ, ಮತ್ತು ದ್ರೋಣಪುತ್ರರ ಕುರಿತು ನಿನ್ನ ಹೃದಯದವನ್ನು ಆವರಿಸಿರುವ ಭಯವನ್ನು…

Continue reading

ಕಿರ್ಮೀರವಧ

[spacer height=”20px”] ಕಿರ್ಮೀರವಧ ಮೈತ್ರೇಯನು ಹೊರಟುಹೋದ ನಂತರ ಧೃತರಾಷ್ಟ್ರನು ಹೇಳಿದನು: “ಕ್ಷತ್ತ! ಕಿರ್ಮೀರನ ವಧೆಯ ಕುರಿತು ಕೇಳಲು ಬಯಸುತ್ತೇನೆ. ರಾಕ್ಷಸ ಮತ್ತು ಭೀಮಸೇನರ ನಡುವೆ ಸಮಾಗಮವು ಹೇಗೆ ಆಯಿತು ಎನ್ನುವುದನ್ನು ಹೇಳು.” ವಿದುರನು ಹೇಳಿದನು: “ಅವರು ಪುನಃ ಪುನಃ ಹೇಳುತ್ತಿದ್ದುದನ್ನು ಇದಕ್ಕೆ ಮೊದಲೇ ಕೇಳಿದ ಅಮಾನುಷಕರ್ಮಿ ಭೀಮನ ಕೃತ್ಯವನ್ನು ಕೇಳು. ರಾಜೇಂದ್ರ! ದ್ಯೂತದಲ್ಲಿ ಸೋತ ಪಾಂಡವರು ಇಲ್ಲಿಂದ ಹೊರಟು ಮೂರು ಹಗಲು ರಾತ್ರಿ ನಡೆದು ಕಾಮ್ಯಕವೆಂಬ ಹೆಸರಿನ ಆ ವನವನ್ನು…

Continue reading