ಹದಿನಾಲ್ಕನೇ ದಿನದ ಯುದ್ಧ – ೧

ಹದಿನಾಲ್ಕನೇ ದಿನದ ಯುದ್ಧ – ೧ ಹದಿನಾಲ್ಕನೆಯ ದಿನ ಕೌರವ ವ್ಯೂಹ ರಚನೆ ಯುದ್ಧದ ಹದಿಮೂರನೆಯ ರಾತ್ರಿಯು ಕಳೆಯಲು ಶಸ್ತ್ರಭೃತರಲ್ಲಿ ಶ್ರೇಷ್ಠ ದ್ರೋಣನು ತನ್ನ ಸೇನೆಗಳೆಲ್ಲವನ್ನೂ ವ್ಯೂಹದಲ್ಲಿರಿಸಲು ಪ್ರಾರಂಭಿಸಿದನು. ಅಲ್ಲಿ ಪರಸ್ಪರರನ್ನು ವಧಿಸಲು ಬಯಸಿದ್ದ ಸಂಕ್ರುದ್ಧರಾಗಿದ್ದ ಅಸಹನಶೀರ ಶೂರರು ವಿಚಿತ್ರ ಧ್ವನಿಯಲ್ಲಿ ಗರ್ಜಿಸುತ್ತಿರುವುದು ಕೇಳಿ ಬರುತ್ತಿತ್ತು. ಕೆಲವರು ಧನುಸ್ಸನ್ನು ಟೇಂಕರಿಸುತ್ತಿದ್ದರು. ಕೆಲವರು ಶಿಂಜನಿಯನ್ನು ಕೈಗಳಿಂದ ತೀಡುತ್ತಿದ್ದರು. ಕೆಲವರು ನಿಟ್ಟುಸಿರುಬಿಡುತ್ತಾ “ಈಗ ಆ ಧನಂಜಯನೆಲ್ಲಿ?” ಎಂದು ಗಟ್ಟಿಯಾಗಿ ಕೂಗುತ್ತಿದ್ದರು. ಕೆಲವರು ಆಕಾಶದಂತೆ…

Continue reading

ಹದಿನಾಲ್ಕನೇ ದಿನದ ಯುದ್ಧ – ೪

ಹದಿನಾಲ್ಕನೇ ದಿನದ ಯುದ್ಧ – ೪ ಸಾತ್ಯಕಿಯು ದ್ರೋಣನನ್ನು ದಾಟಿ ಮುಂದುವರೆದುದು ಯುದ್ಧಮಾಡಲು ಉತ್ಸಾಹದಿಂದ ಕೌರವ ಸೈನ್ಯದ ಕಡೆ ಯುಯುಧಾನನು ಹೊರಡಲು ಧರ್ಮರಾಜನು ತನ್ನ ಸೇನೆಯಿಂದ ಪರಿವೃತನಾಗಿ ದ್ರೋಣನ ರಥದ ಕಡೆ ಹೊರಟನು. ಆಗ ಪಾಂಚಾಲರಾಜನ ಮಗ ವಸುದಾನನು ಪಾಂಡವರ ಸೇನೆಗೆ ಕೂಗಿ ಹೇಳಿದನು: “ಬೇಗ ಬನ್ನಿ! ಸಾತ್ಯಕಿಯು ಸುಲಭವಾಗಿ ಹೋಗಬಲ್ಲಂತೆ ಮಾಡಲು ವೇಗದಿಂದ ಆಕ್ರಮಿಸಿ! ಅನೇಕ ಮಹಾರಥರು ಅವನನ್ನು ಜಯಿಸಲು ಪ್ರಯತ್ನಿಸುತ್ತಾರೆ!” ಹೀಗೆ ಹೇಳುತ್ತಾ ವೇಗದಿಂದ ಕೌರವ ಸೇನೆಯ…

Continue reading

ಹದಿನಾಲ್ಕನೆಯ ದಿನದ ಯುದ್ಧ – ೫

ಹದಿನಾಲ್ಕನೆಯ ದಿನದ ಯುದ್ಧ – ೫ ಯುಧಿಷ್ಠಿರನು ಭೀಮಸೇನನನ್ನು ಅರ್ಜುನ-ಸಾತ್ಯಕಿಯರಿದ್ದಲ್ಲಿಗೆ ಕಳುಹಿಸಿದುದು ಪಾಂಡವರ ವ್ಯೂಹವು ಅಲ್ಲಲ್ಲಿಯೇ ಅಲ್ಲೋಲಕಲ್ಲೋಲಗೊಳ್ಳುತ್ತಿರಲು ಸೋಮಕ-ಪಾಂಚಾಲರೊಂದಿಗೆ ಪಾರ್ಥರು ದೂರದಲ್ಲಿ ಸೇರಿದರು. ಹಾಗೆ ರೌದ್ರವಾದ, ರೋಮಾಂಚಕಾರೀ ಸಂಗ್ರಾಮವು ನಡೆಯುತ್ತಿರಲು, ಪ್ರಲಯವೋ ಎಂಬಂತೆ ತೀವ್ರವಾಗಿ ಜನರ ನಾಶವಾಗುತ್ತಿರಲು, ಯುದ್ಧದಲ್ಲಿ ಪರಾಕ್ರಾಂತನಾದ ದ್ರೋಣನು ಮತ್ತೆ ಮತ್ತೆ ಗರ್ಜಿಸುತ್ತಿರಲು, ವಧಿಸಲ್ಪಡುತ್ತಿರುವ ಪಾಂಚಾಲ ಮತ್ತು ಪಾಂಡವರ ಸೇನೆಗಳು ಕ್ಷೀಣಿಸುತ್ತಿರಲು, ಮೊರೆಹೊಗಲು ಯಾರನ್ನೂ ಕಾಣದೇ ರಾಜಾ ಯುಧಿಷ್ಠಿರನು ಇದು ಹೇಗಾಗುತ್ತದೆ ಎಂದು ಜಿಂತಿಸತೊಡಗಿದನು. ಸವ್ಯಸಾಚಿಯನ್ನು ಹುಡುಕುತ್ತಾ…

Continue reading

ಹದಿನಾಲ್ಕನೆಯ ದಿನದ ಯುದ್ಧ – ೬: ಜಯದ್ರಥವಧೆ

ಹದಿನಾಲ್ಕನೆಯ ದಿನದ ಯುದ್ಧ – ೬: ಜಯದ್ರಥವಧೆ ಸಾತ್ಯಕಿಯಿಂದ ಅಲಂಬುಸನ ವಧೆ ಹಾಗೆ ವೈಕರ್ತನನಿಂದ ಪೀಡಿತನಾಗಿ ನರವೀರರ ಮಧ್ಯೆ ಹೋಗುತ್ತಿರುವ ಪುರುಷಪ್ರವೀರ ಭೀಮನನ್ನು ನೋಡಿ ಶಿನಿಪ್ರವೀರನು ಅವನನ್ನು ರಥದಲ್ಲಿ ಹಿಂಬಾಲಿಸಿದನು. ಬೇಸಗೆಯ ಅಂತ್ಯದಲ್ಲಿ ವಜ್ರಧರನು ಹೇಗೆ ಗುಡುಗುವನೋ, ಮಳೆಗಾಲದ ಅಂತ್ಯದಲ್ಲಿ ಸೂರ್ಯನು ಹೇಗೆ ಸುಡುವನೋ ಹಾಗೆ ದೃಢವಾದ ಧನುಸ್ಸಿನಿಂದ ಶತ್ರುಗಳನ್ನು ವಧಿಸುತ್ತಾ ಅವನು ದುರ್ಯೋಧನನ ಸೇನೆಯನ್ನು ನಡುಗಿಸಿದನು. ಬೆಳ್ಳಿಯ ಪ್ರಕಾಶದ ಕುದುರೆಗಳೊಂದಿಗೆ ಗರ್ಜಿಸುತ್ತಾ ಬರುತ್ತಿದ್ದ, ರಣದಲ್ಲಿ ಸಂಚರಿಸುತ್ತಿದ್ದ ನರವೀರ ಮಾಧವಾಗ್ರನನ್ನು…

Continue reading

ಹದಿನಾಲ್ಕನೆಯ ದಿನದ ರಾತ್ರಿಯುದ್ಧ – ೨

ಹದಿನಾಲ್ಕನೆಯ ದಿನದ ರಾತ್ರಿಯುದ್ಧ – ೨ ಸಾತ್ಯಕಿಯಿಂದ ಸೋಮದತ್ತನ ವಧೆ ಮಹಾಧನುಸ್ಸನ್ನು ಟೇಂಕರಿಸುತ್ತಿದ್ದ ಸೋಮದತ್ತನನ್ನು ನೋಡಿ ಸಾತ್ಯಕಿಯು “ನನ್ನನ್ನು ಸೋಮದತ್ತನಿದ್ದಲ್ಲಿಗೆ ಒಯ್ಯಿ!” ಎಂದು ಸಾರಥಿಗೆ ಹೇಳಿದನು. “ಸೂತ! ಕೌರವಾಧಮ ಶತ್ರು ಬಾಹ್ಲೀಕನನ್ನು ರಣದಲ್ಲಿ ಕೊಲ್ಲದೇ ರಣದಿಂದ ನಾನು ಹಿಂದಿರುಗುವುದಿಲ್ಲ. ನನ್ನ ಈ ಮಾತು ಸತ್ಯ.” ಆಗ ಸಾರಥಿಯು ಸೈಂಧವದೇಶದ, ಮಹಾವೇಗಶಾಲೀ, ಶಂಖವರ್ಣದ, ಸರ್ವ ಶಬ್ಧಗಳನ್ನೂ ಅತಿಕ್ರಮಿಸಬಲ್ಲ ಆ ಕುದುರೆಗಳನ್ನು ರಣದಲ್ಲಿ ಮುಂದೆ ಹೋಗುವಂತೆ ಚಪ್ಪರಿಸಿದನು. ಹಿಂದೆ ದೈತ್ಯರವಧೆಗೆ ಸಿದ್ಧನಾದ ಇಂದ್ರನನ್ನು…

Continue reading

ಹದಿನಾಲ್ಕನೆಯ ದಿನದ ರಾತ್ರಿಯುದ್ಧ-೧

ಹದಿನಾಲ್ಕನೆಯ ದಿನದ ರಾತ್ರಿಯುದ್ಧ-೧ ಹದಿನಾಲ್ಕನೆಯ ದಿನದ ರಾತ್ರಿಯುದ್ಧದಲ್ಲಿ ಕೌರವರ ಪ್ರಚಂಡ ಗಜಸೇನೆಯು ಪಾಂಡವರ ಸೇನೆಗಳನ್ನು ಎಲ್ಲಕಡೆಗಳಿಂದ ಆಕ್ರಮಣಿಸಿ ಯುದ್ಧಮಾಡತೊಡಗಿತು. ಪರಲೋಕದ ದೀಕ್ಷೆಯನ್ನು ತೊಟ್ಟಿದ್ದ ಪಾಂಚಾಲ-ಕುರುಗಳು ಯಮರಾಷ್ಟ್ರವನ್ನು ವರ್ಧಿಸಲು ಪರಸ್ಪರರೊಡನೆ ಯುದ್ಧಮಾಡಿದರು. ಸಮರದಲ್ಲಿ ಶೂರರು ಶೂರರನ್ನು ಎದುರಿಸಿ ಶರ-ತೋಮರ-ಶಕ್ತಿಗಳಿಂದ ಹೊಡೆದು ಬೇಗನೇ ಯಮಕ್ಷಯಕ್ಕೆ ಕಳುಹಿಸುತ್ತಿದ್ದರು. ಪರಸ್ಪರರನ್ನು ಸಂಹರಿಸುವುದರಲ್ಲಿ ತೊಡಗಿದ ರಥಿಗಳು ರಥಿಗಳನ್ನು ಎದುರಿಸಿ ರಕ್ತದ ದಾರುಣ ಕೋಡಿಯನ್ನೇ ಹರಿಸುವ ಮಯಾಯುದ್ಧವು ಪ್ರಾರಂಭವಾಯಿತು. ಮದೋತ್ಕಟ ಸಂಕ್ರುದ್ಧ ಆನೆಗಳು ಪರಸ್ಪರರನ್ನು ಎದುರಿಸಿ ಕೋರೆದಾಡೆಗಳಿಂದ ಇರಿಯುತ್ತಿದ್ದವು.…

Continue reading

ಹದಿನಾಲ್ಕನೆಯ ರಾತ್ರಿಯುದ್ಧ: ಘಟೋತ್ಕಚ ವಧೆ

ಹದಿನಾಲ್ಕನೆಯ ರಾತ್ರಿಯುದ್ಧ: ಘಟೋತ್ಕಚ ವಧೆ ಕೃಷ್ಣನು ಘಟೋತ್ಕಚನನ್ನು ಯುದ್ಧಕ್ಕೆ ಪ್ರೋತ್ಸಾಹಿಸಿದುದು ಆಗ ಪರವೀರಹ ಕರ್ಣನು ಪಾರ್ಷತನನ್ನು ನೋಡಿ ಅವನ ಎದೆಗೆ ಹತ್ತು ಮರ್ಮಭೇದಿಗಳಿಂದ ಹೊಡೆದನು. ಕೂಡಲೆ ಧೃಷ್ಟದ್ಯುಮ್ನನು ಕೂಡ ಅವನನ್ನು ಐದು ಸಾಯಕಗಳಿಂದ ಹೊಡೆದು “ನಿಲ್ಲು! ನಿಲ್ಲು!” ಎಂದು ಕೂಗಿದನು. ಅವರಿಬ್ಬರು ಮಹಾರಥರೂ ಅನ್ಯೋನ್ಯರನ್ನು ರಣದಲ್ಲಿ ಶರಗಳಿಂದ ಮುಚ್ಚಿ ಪೂರ್ಣವಾಗಿ ಸೆಳೆದು ಬಿಟ್ಟ ಬಾಣಗಳಿಂದ ಪುನಃ ಪರಸ್ಪರರನ್ನು ಗಾಯಗೊಳಿಸಿದರು. ಆಗ ಕರ್ಣನು ಧೃಷ್ಟದ್ಯುಮ್ನನ ಸಾರಥಿಯನ್ನೂ ನಾಲ್ಕು ಕುದುರೆಗಳನ್ನೂ ಸಾಯಕಗಳಿಂದ ಹೊಡೆದನು.…

Continue reading

ಹದಿನೆಂಟನೆಯ ದಿನ ಸಾಯಂಕಾಲ ದುರ್ಯೋಧನನ ವಧೆ

ಹದಿನೆಂಟನೆಯ ದಿನದ ಸಾಯಂಕಾಲ ದುರ್ಯೋಧನನ ವಧೆ ಪಾಂಡವರಿಗೆ ದುರ್ಯೋಧನನ ಕುರುಹು ಮಹಾತ್ಮ ಕ್ಷತ್ರಿಯರ ಪತ್ನಿಯರು ಪಲಾಯನ ಮಾಡಿ ಶಿಬಿರವು ಶೂನ್ಯವಾಗಲು, ವಿಜಯಿ ಪಾಂಡುಪುತ್ರರ ಕೂಗನ್ನು ಕೇಳಿ, ಖಾಲಿಯಾದ ಶಿಬಿರವನ್ನು ನೋಡಿ ಆ ರಾತ್ರಿ ಅಲ್ಲಿ ಉಳಿಯಲು ಇಚ್ಛಿಸದೇ ಮಹಾರಥ ಕೃಪ-ಅಶ್ವತ್ಥಾಮ-ಕೃತವರ್ಮರು ತುಂಬಾ ಉದ್ವಿಗ್ನಗೊಂಡು ರಾಜನನ್ನು ನೋಡಬೇಕೆಂದು ಬಯಸಿ ಸರೋವರಕ್ಕೆ ಆಗಮಿಸಿದರು. ಹೃಷ್ಟನಾಗಿದ್ದ ಯುಧಿಷ್ಠಿರನಾದರೋ ದುರ್ಯೋಧನನನ್ನು ವಧಿಸಲು ಬಯಸಿ ಸಹೋದರರೊಂದಿಗೆ ಅವನನ್ನು ರಣದಲ್ಲಿ ಹುಡುಕಾಡಿದನು. ಸಂಕ್ರುದ್ಧರಾಗಿ ದುರ್ಯೋಧನನನ್ನು ಜಯಿಸಲು ಬಯಸಿದ್ದ ಅವರು…

Continue reading

ಹದಿನೆಂಟನೆಯ ದಿನದ ಅಪರಾಹ್ಣದ ಯುದ್ಧ; ದುರ್ಯೋಧನನ ಪಲಾಯನ

ಹದಿನೆಂಟನೆಯ ದಿನದ ಅಪರಾಹ್ಣದ ಯುದ್ಧ; ದುರ್ಯೋಧನನ ಪಲಾಯನ-1 ಮದ್ರಸೇನೆಯ ಸಂಹಾರ; ಕೌರವ ಸೇನೆಯ ಪಲಾಯನ ಶಲ್ಯವಧೆಯ ನಂತರ ಯುಧಿಷ್ಠಿರನು ಪ್ರಭೆಯುಳ್ಳ ಧನುಸ್ಸನ್ನೆತ್ತಿಕೊಂಡು ಪಕ್ಷಿರಾಜ ಗರುಡನು ಸರ್ಪಗಳನ್ನು ಹೇಗೋ ಹಾಗೆ ಯುದ್ಧದಲ್ಲಿ ಶತ್ರುಗಳನ್ನು ನಾಶಪಡಿಸಿದನು. ನಿಶಿತ ಭಲ್ಲಗಳಿಂದ ಶತ್ರುಗಳ ಶರೀರಗಳನ್ನು ಕ್ಷಣದಲ್ಲಿ ನಾಶಗೊಳಿಸಿದನು. ಪಾರ್ಥನ ಬಾಣಸಮೂಹಗಳಿಂದ ಆಚ್ಛಾದಿತ ಕೌರವ ಸೈನಿಕರು ಕಣ್ಣುಗಳನ್ನು ಮುಚ್ಚಿಕೊಂಡರು. ಪರಸ್ಪರರ ಸಂಘರ್ಷದಿಂದ ಬಹಳವಾಗಿ ಗಾಯಗೊಂಡರು. ಕವಚಗಳು ಕಳಚಿಕೊಂಡಂತೆ ಶರೀರ-ಆಯುಧ-ಜೀವಗಳನ್ನು ತೊರೆದರು. ಶಲ್ಯನು ಬೀಳಲು ಎಲ್ಲಗುಣಗಳಲ್ಲಿಯೂ ಅಣ್ಣನ ಸಮನಾಗಿದ್ದ…

Continue reading

ಹದಿನೆಂಟನೆಯ ದಿನದ ಪೂರ್ವಾಹ್ಣದಲ್ಲಿ ಶಲ್ಯ ವಧೆ

ಹದಿನೆಂಟನೆಯ ದಿನದ ಪೂರ್ವಾಹ್ಣದಲ್ಲಿ ಶಲ್ಯ ವಧೆ   ಯುದ್ಧಾರಂಭ ರಾತ್ರಿಯು ಕಳೆಯಲು ರಾಜಾ ದುರ್ಯೋಧನನು ಮಹಾರಥರೆಲ್ಲರೂ ಕವಚಗಳನ್ನು ಧರಿಸಿ ಯುದ್ಧಸನ್ನದ್ಧರಾಗುವಂತೆ ನಿನ್ನ ಕಡೆಯವರೆಲ್ಲರಿಗೆ ಹೇಳಿದನು. ರಾಜನ ಅಭಿಪ್ರಾಯವನ್ನು ತಿಳಿದ ಆ ಸೇನೆಯು ಸನ್ನದ್ಧವಾಗತೊಡಗಿತು. ಬೇಗನೆ ರಥವನ್ನು ಸಜ್ಜುಗೊಳಿಸಲು ಸೈನಿಕರು ಅತ್ತಿತ್ತ ಓಡಾಡುತ್ತಿದ್ದರು. ಆನೆಗಳನ್ನು ಸಜ್ಜುಗೊಳಿಸಿದರು. ಪದಾತಿಗಳು ಕವಚಗಳನ್ನು ತೊಟ್ಟುಕೊಂಡರು. ಇನ್ನು ಕೆಲವರು ಸಹಸ್ರಾರು ಕುದುರೆಗಳನ್ನು ಸಜ್ಜುಗೊಳಿಸಿದರು. ವಾದ್ಯಗಳು ಮೊಳಗಿದವು. ಗರ್ಜಿಸುತ್ತಿದ್ದ ಯೋಧ-ಸೇನೆಗಳ ಶಬ್ಧಗಳೂ ಕೇಳಿಬಂದಿತು. ಮೃತ್ಯುವನ್ನೇ ಹಿಂದಿರುಗುವ ಸ್ಥಾನವನ್ನಾಗಿ ಕಲ್ಪಿಸಿಕೊಂಡಿದ್ದ…

Continue reading