ಉತ್ತರ ಗೋಗ್ರಹಣ – ೩

[spacer height=”20px”] ಉತ್ತರ ಗೋಗ್ರಹಣ – ೩ ಅರ್ಜುನ-ಕರ್ಣರ ಯುದ್ಧ ಧನುರ್ಧರರಲ್ಲಿ ಶ್ರೇಷ್ಠ ಅರ್ಜುನನು ಶತ್ರುಸೈನ್ಯವನ್ನು ಕೂಡಲೆ ಚೆಲ್ಲಾಪಿಲ್ಲಿಮಾಡಿ ಆ ಗೋವುಗಳನ್ನು ಗೆದ್ದು ಅನಂತರ ಮತ್ತೆ ಯುದ್ಧದಲ್ಲಿ ಪ್ರಿಯವಾದುದನ್ನು ಮಾಡಬಯಸಿ, ದುರ್ಯೋಧನನತ್ತ ಹೊರಟನು. ಗೋವುಗಳು ವೇಗವಾಗಿ ಮತ್ಸ್ಯನಗರದತ್ತ ಹೋಗುತ್ತಿರಲು ಅರ್ಜುನನು ಕೃತಕೃತ್ಯನಾದನೆಂದು ತಿಳಿದು ಕುರುವೀರರು ದುರ್ಯೋಧನನತ್ತ ಹೋಗುತ್ತಿದ್ದ ಅವನ ಮೇಲೆ ಥಟ್ಟನೆ ಎರಗಿದರು. ಆಗ ದಟ್ಟವಾಗಿ ವ್ಯೂಹಗೊಂಡಿದ್ದ ಬಹಳ ಬಾವುಟಗಳಿಂದ ಕೂಡಿದ್ದ ಅವರ ಬಹುಸೇನೆಯನ್ನು ನೋಡಿ ಶತ್ರುನಾಶಕ ಅರ್ಜುನನು ಮತ್ಸ್ಯರಾಜ…

Continue reading

ಅಭಿಮನ್ಯು ವಿವಾಹ

[spacer height=”20px”] ಅಭಿಮನ್ಯು ವಿವಾಹ ವಿಜಯಶಾಲೀ ಉತ್ತರ ಬೃಹನ್ನಡೆಯರ ಪುರಪ್ರವೇಶ ಸೈನ್ಯಾಧಿಪತಿ ವಿರಾಟನು ಗೋಧನವನ್ನು ಗೆದ್ದು ಹರ್ಷಿತನಾಗಿ ನಾಲ್ವರು ಪಾಂಡವರೊಡನೆ ನಗರವನ್ನು ಪ್ರವೇಶಿಸಿದನು. ಆ ಮಹಾರಾಜನು ಯುದ್ಧದಲ್ಲಿ ತ್ರಿಗರ್ತರನ್ನು ಗೆದ್ದು ಗೋವುಗಳನ್ನೆಲ್ಲ ಮರಳಿಸಿ ತಂದು ಕಾಂತಿಯುತನಾಗಿ ಪಾಂಡವರೊಡನೆ ಶೋಭಿಸಿದನು. ಆಸನದಲ್ಲಿ ಕುಳಿತ, ಸ್ನೇಹಿತರ ಸಂತೋಷವನ್ನು ಹೆಚ್ಚಿಸುವ ಆ ವೀರನ ಬಳಿ ಎಲ್ಲ ಪ್ರಜೆಗಳೂ ಬ್ರಾಹ್ಮಣರೊಡಗೂಡಿ ನಿಂತರು. ಆಗ ಅವರಿಂದ ಸನ್ಮಾನಗೊಂಡ ಸೈನ್ಯಸಹಿತ ಮತ್ಸ್ಯರಾಜನು ಬ್ರಾಹ್ಮಣರನ್ನೂ ಅಂತೆಯೇ ಪ್ರಜೆಗಳನ್ನೂ ಪ್ರತಿಯಾಗಿ ಅಭಿನಂದಿಸಿ…

Continue reading

ಪಾಂಡವ-ಕೌರವರು ಸೇನೆಗಳನ್ನು ಒಂದುಗೂಡಿಸಿದುದು

[spacer height=”20px”] ಪಾಂಡವ-ಕೌರವರು ಸೇನೆಗಳನ್ನು ಒಂದುಗೂಡಿಸಿದುದು ವಿರಾಟ ಸಭೆಯಲ್ಲಿ ಪಾಂಡವ ಪಕ್ಷದವರ ಸಮಾಲೋಚನೆ; ಕೃಷ್ಣನಿಂದ ವಿಷಯ ಪ್ರಸ್ತಾವನೆ ಅಭಿಮನ್ಯುವಿನ ವಿವಾಹವನ್ನು ಪೂರೈಸಿ ಆ ಕುರುಪ್ರವೀರರು ತಮ್ಮ ಪಕ್ಷದವರೊಂದಿಗೆ ನಾಲ್ಕು ರಾತ್ರಿಗಳನ್ನು ಸಂತೋಷದಿಂದ ಕಳೆದು ಮಾರನೆಯ ದಿನ ವಿರಾಟನ ಸಭೆಯನ್ನು ಪ್ರವೇಶಿಸಿದರು. ಆ ಮತ್ಸ್ಯಪತಿಯ ಸಭೆಯು ಮಣಿಗಳಿಂದ ತುಂಬಿದ್ದು ಉತ್ತಮ ರತ್ನಗಳಿಂದಲೂ ಬಣ್ಣಬಣ್ಣದ ಮಾಲೆಗಳಿಂದ ಸುಗಂಧಿತ ಆಸನಗಳಿಂದಲೂ ಶೋಭಿಸುತ್ತಿತ್ತು. ಅಲ್ಲಿಗೆ ನರವರ್ಯರೆಲ್ಲರೂ ಆಗಮಿಸಿದರು. ಎದುರಿಗೆ ಆಸನಗಳಲ್ಲಿ ಪೃಥಿವೀಪತಿಗಳಲ್ಲಿಯೇ ಮಾನ್ಯರಾದ ವೃದ್ಧ ವಿರಾಟ-ದ್ರುಪದ…

Continue reading

ಮೊದಲನೆಯ ರಾಯಭಾರ

ಮೊದಲನೆಯ ರಾಯಭಾರ ದ್ರುಪದನು ದೂತನನ್ನು ಕಳುಹಿಸಿದುದು ಯುಧಿಷ್ಠಿರನ ಮತದಂತೆ ಪಾಂಚಲನು ಪ್ರಜ್ಞಾವಂತನೂ ವಯೋವೃದ್ಧನೂ ಆದ ತನ್ನ ಪುರೋಹಿತನನ್ನು ಕುರುಗಳಲ್ಲಿಗೆ ಕಳುಹಿಸಿದನು. ದ್ರುಪದನು ಹೇಳಿದನು: “ಇರುವವುಗಳಲ್ಲಿ ಪ್ರಾಣಿಗಳು ಶ್ರೇಷ್ಠರು; ಪ್ರಾಣಿಗಳಲ್ಲಿ ಬುದ್ಧಿಜೀವಿಗಳು ಶ್ರೇಷ್ಠರು; ಬುದ್ಧಿಯಿರುವವರಲ್ಲಿ ನರರು ಶ್ರೇಷ್ಠರು ಮತ್ತು ನರರಲ್ಲಿ ದ್ವಿಜರು ಶ್ರೇಷ್ಠರು. ದ್ವಿಜರಲ್ಲಿ ವೇದವನ್ನು ತಿಳಿದವರು ಶ್ರೇಯಸ್ಕರು, ವೇದಗಳನ್ನು ತಿಳಿದವರಲ್ಲಿ ಆ ತಿಳುವಳಿಕೆಯನ್ನು ಕಾರ್ಯದಲ್ಲಿ ಅಳವಡಿಸಿಕೊಂಡವರು ಶ್ರೇಯಸ್ಕರು. ಹೀಗೆ ತಿಳುವಳಿಕೆಯನ್ನು ಅಳವಡಿಸಿಕೊಂಡವರಲ್ಲಿ ನೀನು ಪ್ರಧಾನನೆಂದು ನನಗನ್ನಿಸುತ್ತದೆ. ನೀನು ಕುಲದಲ್ಲಿ, ವಯಸ್ಸಿನಲ್ಲಿ…

Continue reading

ಎರಡನೆಯ ರಾಯಭಾರ: ಸಂಜಯನು ಪಾಂಡವರಲ್ಲಿಗೆ ಬಂದುದು

[spacer height=”20px”] ಎರಡನೆಯ ರಾಯಭಾರ: ಸಂಜಯನು ಪಾಂಡವರಲ್ಲಿಗೆ ಬಂದುದು ಸಂಜಯನನ್ನು ಪಾಂಡವರಲ್ಲಿಗೆ ಕಳುಹಿಸಿದುದು ಕೌರವ್ಯನು ದ್ರುಪದನ ಪುರೋಹಿತನನ್ನು ಸತ್ಕರಿಸಿ ಪಾಂಡವರಲ್ಲಿಗೆ ಕಳುಹಿಸಿದನು. ಸಭಾಮಧ್ಯದಲ್ಲಿ ಸಂಜಯನನ್ನು ಕರೆಯಿಸಿ ಈ ಮಾತುಗಳನ್ನಾಡಿದನು: “ಸಂಜಯ! ಪಾಂಡುಪುತ್ರರು ಉಪಪ್ಲವ್ಯಕ್ಕೆ ಬಂದಿದ್ದಾರೆಂದು ಹೇಳುತ್ತಾರೆ. ಹೋಗಿ ತಿಳಿದುಕೊಂಡು ಬಾ. ಅಜಾತಶತ್ರುವನ್ನು ಈ ರೀತಿ ಸಂಭೋಧಿಸು: “ಅನಘ! ನೀನು ಗ್ರಾಮಕ್ಕೆ ಬಂದಿರುವುದು ಒಳ್ಳೆಯದೇ ಆಯಿತು.” ಎಲ್ಲರಿಗೂ ಹೇಳಬೇಕು: “ಅನರ್ಹರಾಗಿದ್ದರೂ ವನವಾಸದ ಕಷ್ಟಗಳನ್ನು ಮುಗಿಸಿದ ನೀವು ಚೆನ್ನಾಗಿದ್ದೀರಾ?” ಮೋಸಗೊಂಡಿದ್ದರೂ ಶೀಘ್ರದಲ್ಲಿಯೇ ಅವರು…

Continue reading

ಕುರುಸಭೆಯಲ್ಲಿ ಸಂಜಯನು ತನ್ನ ರಾಯಭಾರವೃತ್ತಾಂತವನ್ನು ತಿಳಿಸಿದುದು

[spacer height=”20px”] ಕುರುಸಭೆಯಲ್ಲಿ ಸಂಜಯನು ತನ್ನ ರಾಯಭಾರವೃತ್ತಾಂತವನ್ನು ತಿಳಿಸಿದುದು ಪಾಂಡವರಿಂದ ಹಿಂದಿರುಗಿದ ಸಂಜಯನು ಕೌರವ ಸಭೆಗೆ ಆಗಮಿಸಿದುದು ಆ ರಾತ್ರಿಯು ಕಳೆಯಲು ಎಲ್ಲ ರಾಜರೂ ಸೂತನನ್ನು ಕೇಳಲು ಸಂತೋಷದಿಂದ ಸಭೆಯನ್ನು ಪ್ರವೇಶಿಸಿದರು. ಪಾರ್ಥರ ಧರ್ಮಾರ್ಥಸಂಹಿತ ಮಾತುಗಳನ್ನು ಕೇಳಲು ಬಯಸಿ ಎಲ್ಲರೂ ಧೃತರಾಷ್ಟ್ರನನ್ನು ಮುಂದಿಟ್ಟುಕೊಂಡು ಶುಭ ರಾಜಸಭೆಯನ್ನು ಪ್ರವೇಶಿಸಿದರು. ಆ ವಿಸ್ತೀರ್ಣ ಸಭೆಗೆ ಬಿಳಿಯ ಬಣ್ಣವನ್ನು ಬಳಿದಿದ್ದರು. ಕನಕರಾಜಿಗಳಿಂದ ಅಲಂಕರಿಸಿದ್ದರು. ಚಂದ್ರನ ಪ್ರಭೆಯಂತೆ ಸುಂದರವಾದ ಬೆಳಕುಗಳನ್ನಿಟ್ಟಿದ್ದರು. ಗಂಧದ ನೀರನ್ನು ಸಿಂಪಡಿಸಿದ್ದರು. ಬಂಗಾರದ…

Continue reading

ಶ್ರೀಕೃಷ್ಣ ರಾಯಭಾರ – ೧

ಶ್ರೀಕೃಷ್ಣ ರಾಯಭಾರ – ೧ ಯುಧಿಷ್ಠಿರನು ರಾಯಭಾರಕ್ಕೆ ಕೃಷ್ಣನನ್ನು ಕೇಳಿದ್ದುದು ಸಂಜಯನು ಮರಳಿದ ನಂತರ ಧರ್ಮರಾಜ ಯುಧಿಷ್ಠಿರನು ಸರ್ವ ಸಾತ್ವತರ ವೃಷಭ ದಾಶಾರ್ಹನಿಗೆ ಹೇಳಿದನು: “ಜನಾರ್ದನ! ನನ್ನ ಮಿತ್ರರ ಕಾಲವು ಇಗೋ ಬಂದೊದಗಿದೆ. ಈ ಆಪತ್ತಿನಿಂದ ಉದ್ಧರಿಸುವ ಬೇರೆ ಯಾರನ್ನೂ ನಾನು ಕಾಣಲಾರೆ. ಮಾಧವ! ನಿನ್ನನ್ನೇ ಆಶ್ರಯಿಸಿ ನಾವು ಅಮಾತ್ಯರೊಂದಿಗಿರುವ ಮೋಹದರ್ಪಿತ ಧಾರ್ತರಾಷ್ಟ್ರನಿಂದ ನಮ್ಮ ಭಾಗವನ್ನು ನಿರ್ಭಯದಿಂದ ಕೇಳಬಲ್ಲೆವು. ವೃಷ್ಣಿಯರನ್ನು ಸರ್ವ ಆಪತ್ತುಗಳಿಂದ ಹೇಗೆ ರಕ್ಷಿಸುತ್ತೀಯೋ ಹಾಗೆ ನೀನು ಪಾಂಡವರಾದ…

Continue reading

ಶ್ರೀಕೃಷ್ಣ ರಾಯಭಾರ – ೨

ಶ್ರೀಕೃಷ್ಣ ರಾಯಭಾರ – ೨ ಹಸ್ತಿನಾಪುರಕ್ಕೆ ಶ್ರೀಕೃಷ್ಣನ ಪ್ರಯಾಣ ರಾತ್ರಿಯು ಕಳೆದು ವಿಮಲ ಸೂರ್ಯನು ಉದಯಿಸಲು, ದಿವಾಕರನು ಮೃದುವಾಗಿ ಬೆಳಗುತ್ತಿದ್ದ ಮೈತ್ರ ಮುಹೂರ್ತವು ಸಂಪ್ರಾಪ್ತವಾಗಲು, ಕೌಮುದ ಮಾಸದಲ್ಲಿ, ರೇವತೀ ನಕ್ಷತ್ರದಲ್ಲಿ, ಶರದೃತುವು ಮುಗಿದು ಹೇಮಂತ ಋತುವು ಪ್ರಾರಂಭವಾಗುವಾಗ, ಸಸ್ಯಗಳು ಬೆಳೆಯನ್ನು ಹೊತ್ತು ಸುಖವಾಗಿರುವ ಕಾಲದಲ್ಲಿ ಸತ್ವವತರಲ್ಲಿ ಶ್ರೇಷ್ಠನು ಸಿದ್ಧನಾದನು. ವಾಸವನು ಋಷಿಗಳಿಂದ ಕೇಳುವಂತೆ ಹೊರಡುವಾಗ ಅವನು ಬ್ರಾಹ್ಮಣರ ಮಂಗಳ ಘೋಷಗಳನ್ನೂ, ಪುಣ್ಯಾಹ-ವಾಚನಗಳನ್ನೂ, ಸತ್ಯಗಳನ್ನೂ ಕೇಳಿದನು. ಜನಾರ್ದನನು ಬೆಳಗಿನ ಆಹ್ನೀಕವನ್ನು ಪೂರೈಸಿ,…

Continue reading

ಶ್ರೀಕೃಷ್ಣ ರಾಯಭಾರ – ೩

[spacer height=”20px”] ಶ್ರೀಕೃಷ್ಣ ರಾಯಭಾರ – ೩ ಕುರುಸಭೆಗೆ ಶ್ರೀಕೃಷ್ಣನ ಆಗಮನ ಹೀಗೆ ಆ ಬುದ್ಧಿಮತರಿಬ್ಬರ ನಡುವೆ ಮಾತುಕಥೆಯು ನಡೆಯಲು ಮಂಗಳ ನಕ್ಷತ್ರಸಂಪನ್ನ ರಾತ್ರಿಯು ಕಳೆಯಿತು. ಧರ್ಮಾರ್ಥಕಾಮಯುಕ್ತವಾದ, ವಿಚಿತ್ರಾರ್ಥಪದಾಕ್ಷರಗಳಿಂದ ಕೂಡಿದ ವಿವಿಧ ಮಾತುಗಳನ್ನು ಕೇಳುತ್ತಿದ್ದ ಮಹಾತ್ಮ ವಿದುರನಿಗೆ ಮತ್ತು ಅದಕ್ಕೆ ಸಮನಾದ ಮಾತುಗಳನ್ನು ಕೇಳುತ್ತಿದ್ದ ಅಮಿತ ತೇಜಸ್ವಿ ಕೃಷ್ಣನಿಗೆ ಇಷ್ಟವಾಗದೇ ಇದ್ದರೂ ಆ ರಾತ್ರಿಯು ಕಳೆದು ಹೋಯಿತು. ಆಗ ಸ್ವರಸಂಪನ್ನರಾದ ಬಹುಮಂದಿ ಸೂತಮಾಗಧರು ಶಂಖದುಂದುಭಿಗಳ ನಿರ್ಘೋಷಗಳಿಂದ ಕೇಶವನನ್ನು ಎಚ್ಚರಿಸಿದರು. ದಾಶಾರ್ಹ,…

Continue reading

ಶ್ರೀಕೃಷ್ಣ ರಾಯಭಾರ – ೪

[spacer height=”20px”] ಶ್ರೀಕೃಷ್ಣ ರಾಯಭಾರ – ೪ ಕೃಷ್ಣನ ಮೂಲಕ ಕುಂತಿಯು ಪಾಂಡವರಿಗೆ ಕಳುಹಿದ ಸಂದೇಶ ಅವಳ ಮನೆಯನ್ನು ಪ್ರವೇಶಿಸಿ ಚರಣಗಳಿಗೆ ವಂದಿಸಿ ಕುರುಸಂಸದಿಯಲ್ಲಿ ನಡೆದುದನ್ನು ಸಂಕ್ಷಿಪ್ತವಾಗಿ ವರದಿಮಾಡಿದನು: “ಸ್ವೀಕರಿಸಬೇಕಾಗಿದ್ದಂತಹ ಬಹುವಿಧದ ಮಾತುಗಳನ್ನು ಕಾರಣಗಳನ್ನು ಕೊಟ್ಟು ಋಷಿಗಳು ಮತ್ತು ನಾನು ಹೇಳಿದೆವು. ಆದರೆ ಅವುಗಳನ್ನು ಸ್ವೀಕರಿಸಲಿಲ್ಲ. ದುರ್ಯೋಧನನ ವಶಕ್ಕೆ ಬಂದಿರುವ ಮತ್ತು ಅವನನ್ನು ಅನುಸರಿಸುವ ಎಲ್ಲರ ಕಾಲವು ಪಕ್ವವಾಗಿದೆ. ನನಗೆ ಪಾಂಡವರ ಕಡೆ ಶೀಘ್ರವಾಗಿ ಹೋಗಬೇಕಾಗಿದೆ. ಆದುದರಿಂದ ನಿನ್ನಲ್ಲಿ ಕೇಳುತ್ತಿದ್ದೇನೆ.…

Continue reading