ಯಕ್ಷಯುದ್ಧ

ಯಕ್ಷಯುದ್ಧ ರಾಕ್ಷಸ ಜಟಾಸುರನನ್ನು ಕೊಂದನಂತರ ಪ್ರಭು ರಾಜ ಕೌಂತೇಯನು ಪುನಃ ನಾರಾಯಣಾಶ್ರಮಕ್ಕೆ ಹೋಗಿ ಅಲ್ಲಿ ವಾಸಿಸತೊಡಗಿದನು. ಒಂದು ದಿನ ಅವನು ದ್ರೌಪದಿಯ ಸಹಿತ ಎಲ್ಲ ತಮ್ಮಂದಿರನ್ನೂ ಸೇರಿಸಿ, ತಮ್ಮ ಜಯನನ್ನು ನೆನಪಿಸಿಕೊಳ್ಳುತ್ತಾ ಹೇಳಿದನು: “ನಾವು ವನದಲ್ಲಿ ಸಂತೋಷದಿಂದ ತಿರುಗಾಡುತ್ತಾ ನಾಲ್ಕು ವರ್ಷಗಳು ಕಳೆದು ಹೋದವು. ಐದನೆಯ ವರ್ಷದಲ್ಲಿ ತನ್ನ ಉದ್ದೇಶಗಳನ್ನು ಪೂರೈಸಿದ ನಂತರ ಪರ್ವತರಾಜ, ಶ್ರೇಷ್ಠ ಶ್ವೇತಶಿಖರಕ್ಕೆ ಬೀಭತ್ಸುವು ಬರುವವನಿದ್ದಾನೆ. ನಾವೂ ಕೂಡ ಅವನನ್ನು ಭೇಟಿಮಾಡುವ ಉದ್ದೇಶದಿಂದ ಅಲ್ಲಿಗೆ ಹೋಗಿರಬೇಕು.…

Continue reading

ಅರ್ಜುನನಿಂದ ನಿವಾತಕವಚರ ವಧೆ ಮತ್ತು ಹಿರಣ್ಯಪುರಿಯ ನಾಶ

ಅರ್ಜುನನಿಂದ ನಿವಾತಕವಚರ ವಧೆ ಮತ್ತು ಹಿರಣ್ಯಪುರಿಯ ನಾಶ ಇತ್ತ ಇಂದ್ರಲೋಕದಲ್ಲಿ ಅರ್ಜುನನು ಅಸ್ತ್ರಗಳನ್ನು ಕಲಿತು ವಿಶ್ವಾಸಗೊಂಡ ನಂತರ ಹರಿವಾಹನ ಇಂದ್ರನು ಅವನ ನೆತ್ತಿಯ ಮೇಲೆ ತನ್ನ ಎರಡೂ ಕೈಗಳನ್ನಿಟ್ಟು ಹೇಳಿದನು: “ಇಂದು ನಿನ್ನನ್ನು ಸುರಗಣಗಳೂ ಜಯಿಸಲು ಶಕ್ಯವಿಲ್ಲ. ಇನ್ನು ಕೃತಾತ್ಮರಾಗಿರದ ಮನುಷ್ಯಲೋಕದ ಮನುಷ್ಯರೆಲ್ಲಿ? ನೀನು ಅಪ್ರಮೇಯ. ಯುದ್ಧದಲ್ಲಿ ಅಪ್ರತಿಮ ಮತ್ತು ದುರ್ಧರ್ಷನಾಗಿದ್ದೀಯೆ.” ಪುನಃ ಆ ದೇವನು ಮೈನವಿರೇಳಿಸುವಷ್ಟು ಸಂತೋಷಗೊಂಡು ಅರ್ಜುನನಿಗೆ ಹೇಳಿದನು: “ವೀರ! ಅಸ್ತ್ರಯುದ್ಧದಲ್ಲಿ ನಿನಗೆ ಸಮನಾಗಿರುವವರು ಯಾರೂ ಇರುವುದಿಲ್ಲ.…

Continue reading

ಇಂದ್ರಲೋಕದಿಂದ ಅರ್ಜುನನ ಪುನರಾಗಮನ

[spacer height=”20px”] ಇಂದ್ರಲೋಕದಿಂದ ಅರ್ಜುನನ ಪುನರಾಗಮನ ಅರ್ಜುನನನ್ನು ನೋಡುವ ಆಕಾಂಕ್ಷೆಯಿಂದ ಪಾಂಡವರೆಲ್ಲರೂ ಸುಖ-ಸಂತೋಷದಿಂದ ಕುಬೇರನ ಆ ಪರ್ವತದ ಮೇಲೆ ವಾಸಿಸಿದರು. ಅವರನ್ನು ಕಾಣಲು ಅನೇಕ ಗಂಧರ್ವ-ಮಹರ್ಷಿಗಣಗಳು ಅಲ್ಲಿಗೆ ಬಂದವು. ಸ್ವರ್ಗವನ್ನು ಸೇರಿದ ಮರುತ್ಗಣಗಳಂತೆ ಆ ಮಹಾರಥಿ ಪಾಂಡವರು ಹೂಬಿಡುವ ಮರಗಳಿಂದ ಶೋಭಿತವಾದ ಆ ಉತ್ತಮ ಪರ್ವತವನ್ನು ಸೇರಿ ಪರಮ ಪ್ರಶಾಂತ ಮನಸ್ಸನ್ನು ಹೊಂದಿದರು. ನವಿಲು-ಹಂಸಗಳ ಧ್ವನಿಗಳಿಂದ ಕೂಡಿದ್ದ, ಕುಸುಮಗಳು ಹಾಸಿಗೆಯಂತೆ ಹರಡಿದ್ದ ಆ ಮಹಾಗಿರಿಯ ಶಿಖರಗಳನ್ನೂ ಕಣಿವೆಗಳನ್ನೂ ನೋಡಿ ಅವರು…

Continue reading

ಅಜಗರನ ರೂಪದಲ್ಲಿದ್ದ ನಹುಷನನ್ನು ಯುಧಿಷ್ಠಿರನು ಶಾಪಮುಕ್ತನನ್ನಾಗಿಸಿದುದು

[spacer height=”20px”] ಅಜಗರನ ರೂಪದಲ್ಲಿದ್ದ ನಹುಷನನ್ನು ಯುಧಿಷ್ಠಿರನು ಶಾಪಮುಕ್ತನನ್ನಾಗಿಸಿದುದು ಕುಬೇರನ ಪರ್ವತದಿಂದ ಪಾಂಡವರು ನೀಲಾದ್ರಿಗೆ ಬಂದುದು ಇಂದ್ರಸಮಾನ ಅರ್ಜುನನೊಂದಿಗೆ ಪಾಂಡವರು ಧನೇಶ್ವರ ಕುಬೇರನ ಸುರಮ್ಯ ಶೈಲಪ್ರವರದ ಮೇಲೆ ಕ್ರೀಡಾನುಗತರಾಗಿದ್ದರು. ಅಪ್ರತಿಮ ಕಟ್ಟಡಗಳು ಮತ್ತು ನಾನಾ ವೃಕ್ಷಗಳಿಂದ ಕೂಡಿದ್ದ ಆ ಕ್ರೀಡಾಪ್ರದೇಶವನ್ನು ನೋಡಿ ಸತತವೂ ತನ್ನ ಅಸ್ತ್ರಗಳಲ್ಲಿಯೇ ಮಗ್ನನಾಗಿದ್ದ ಕಿರೀಟಿ ಅರ್ಜುನನು ಅಲಲ್ಲಿ ಬಹಳವಾಗಿ ತಿರುಗಾಡಿದನು. ವೈಶ್ರವಣನ ಕೃಪೆಯಿಂದ ಆ ವಾಸಸ್ಥಳವನ್ನು ಪಡೆದಿದ್ದ ಆ ನರದೇವಪುತ್ರರು ಅಲ್ಲಿ ಪ್ರಾಣಿಗಳು ಬಯಸುವ ಸುಖವನ್ನು…

Continue reading

ಕಾಮ್ಯಕಕ್ಕೆ ಕೃಷ್ಣ, ಮಾರ್ಕಂಡೇಯ ಮತ್ತು ನಾರದರ ಆಗಮನ

[spacer height=”20px”] ಕಾಮ್ಯಕಕ್ಕೆ ಕೃಷ್ಣ, ಮಾರ್ಕಂಡೇಯ ಮತ್ತು ನಾರದರ ಆಗಮನ ಯುಧಿಷ್ಠಿರನ ನಾಯಕತ್ವದಲ್ಲಿ ಕೌಂತೇಯರು ಕಾಮ್ಯಕವನ್ನು ತಲುಪಿದಾಗ ಮುನಿಗಣಗಳಿಂದ ಸ್ವಾಗತಿಸಲ್ಪಟ್ಟು ಕೃಷ್ಣೆಯೊಂದಿಗೆ ಅಲ್ಲಿ ನೆಲೆಸಿದರು. ಆಲ್ಲಿ ಎಲ್ಲ ಕಡೆಗಳಿಂದಲೂ ಬಂದ ಬಹುಮಂದಿ ಬ್ರಾಹ್ಮಣರು ಆ ಪಾಂಡವರನ್ನು ಸುತ್ತುವರೆದು ಸಲಹೆ-ಪ್ರೋತ್ಸಾಹಗಳನ್ನು ನೀಡುತ್ತಿದ್ದರು. ಒಮ್ಮೆ ಒಬ್ಬ ಬ್ರಾಹ್ಮಣನು ಬಂದು ಹೇಳಿದನು: “ಅರ್ಜುನನ ಪ್ರಿಯ ಸಖ, ಮಹಾಬಾಹು ಉದಾರಧೀ ಶೌರಿಯು ಅರ್ಜುನನು ಮರಳಿ ಬಂದಿದ್ದಾನೆಂದು ತಿಳಿದು ಅವನನ್ನು ಕಾಣಲು ಇಲ್ಲಿಗೆ ಬರುತ್ತಿದ್ದಾನೆ. ಹಾಗೆಯೇ ಅನೇಕ…

Continue reading

ದ್ರೌಪದೀ-ಸತ್ಯಭಾಮೆಯರ ಸಂವಾದ

[spacer height=”20px”] ದ್ರೌಪದೀ-ಸತ್ಯಭಾಮೆಯರ ಸಂವಾದ ಮಹಾತ್ಮ ಮಾರ್ಕಂಡೇಯ, ನಾರದ, ಕೃಷ್ಣ ಮತ್ತು ಪಾಂಡವರು ಮಾತುಕಥೆಗಳನ್ನಾಡುತ್ತ ಕುಳಿತಿರಲು, ದ್ರೌಪದೀ-ಸತ್ಯಭಾಮೆಯರು ಆಶ್ರಮವನ್ನು ಪ್ರವೇಶಿಸಿದರು. ಅಲ್ಲಿ ನಗುತ್ತಾ ಸಂತೋಷದಿಂದ ಕಾಲಕಳೆದರು. ಬಹುಕಾಲದ ನಂತರ ನೋಡಿದ ಅವರು ಅನ್ಯೋನ್ಯರೊಂದಿಗೆ ಪ್ರಿಯವಾಗಿ ಮಾತನಾಡುತ್ತಾ ಕುರು ಮತ್ತು ಯದುಗಳ ಕುರಿತಾದ ವಿಚಿತ್ರ ಕಥೆಗಳನ್ನು ಹೇಳತೊಡಗಿದರು. ಆಗ ಕೃಷ್ಣನ ಪ್ರಿಯ ಮಹಿಷಿ ಸತ್ರಾಜಿತನ ಮಗಳು ಸುಮಧ್ಯಮೆ ಸತ್ಯಭಾಮೆಯು ರಹಸ್ಯದಲ್ಲಿ ಯಾಜ್ಞಸೇನಿ ದ್ರೌಪದಿಯನ್ನು ಕೇಳಿದಳು: “ದ್ರೌಪದೀ! ಯಾವ ನಡತೆಯಿಂದ ನೀನು ಲೋಕಪಾಲರಂತೆ…

Continue reading

ಘೋಷಯಾತ್ರೆ: ಪಾಂಡವರನ್ನು ಅಣಕಿಸಲು ಹೋದ ದುರ್ಯೋಧನನು ತಾನೇ ಅಪಮಾನಿತನಾದುದು

[spacer height=”20px”] ಘೋಷಯಾತ್ರೆ: ಪಾಂಡವರನ್ನು ಅಣಕಿಸಲು ಹೋದ ದುರ್ಯೋಧನನು ತಾನೇ ಅಪಮಾನಿತನಾದುದು ಪಾಂಡವರ ವನವಾಸದ ಕುರಿತು ಕೇಳಿದ ಧೃತರಾಷ್ಟ್ರನ ಸಂತಾಪ ಪಾಂಡವರು ವನದಲ್ಲಿ ಸ್ವಾಧ್ಯಾಯ-ತಪಸ್ಸುಗಳಲ್ಲಿ ನಿರತರಾಗಿ ವಾಸಿಸುತ್ತಿರುವಾಗ ಒಂದು ದಿನ ಕಥೆಗಳಲ್ಲಿ ಕುಶಲನಾದ ಓರ್ವ ವಿಪ್ರನು ಕೌರವರ ನಾಡಿಗೆ ಬಂದು ರಾಜಾ ಧೃತರಾಷ್ಟ್ರನನ್ನು ಕಂಡನು. ವೃದ್ಧರಾಜನು ಅವನನ್ನು ಕುಳ್ಳಿರಿಸಿ ಸತ್ಕರಿಸಿ ಪಾಂಡವರ ಕುರಿತು ಕೇಳಲು ಆ ವಿಪ್ರನು ಗಾಳಿಬಿಸಿಲುಗಳಿಂದ ಕೃಶಾಂಗರಾಗಿ ತಮ್ಮ ದುಃಖಿತ ಉಗ್ರ ಮುಖಗಳನ್ನು ಮುಚ್ಚಿಕೊಂಡು ವಾಸಿಸುತ್ತಿದ್ದ ಧರ್ಮ,…

Continue reading

ಘೋಷಯಾತ್ರೆಯಲ್ಲಿ ತನಗಾದ ಅಪಮಾನದಿಂದ ಹತಾಶನಾದ ದುರ್ಯೋಧನನಿಗೆ ದಾನವರು ಆಶ್ವಾಸನೆಯನ್ನಿತ್ತಿದುದು

ಘೋಷಯಾತ್ರೆಯಲ್ಲಿ ತನಗಾದ ಅಪಮಾನದಿಂದ ಹತಾಶನಾದ ದುರ್ಯೋಧನನಿಗೆ ದಾನವರು ಆಶ್ವಾಸನೆಯನ್ನಿತ್ತಿದುದು ದುರ್ಯೋಧನನ ಪ್ರಾಯೋಪವೇಶ ಧರ್ಮರಾಜನಿಂದ ಕಳುಹಿಸಲ್ಪಟ್ಟ ದುರ್ಯೋಧನನು ಲಜ್ಜೆಯಿಂದ ತಲೆತಗ್ಗಿಸಿಕೊಂಡು ದುಃಖಿತನಾಗಿ ಎಲ್ಲವನ್ನೂ ಕಳೆದುಕೊಂಡವನಂತೆ ನಿಧಾನವಾಗಿ ನಡೆದನು. ಚತುರಂಗಬಲವು ಅವನನ್ನು ಹಿಂಬಾಲಿಸುತ್ತಿರಲು, ಆ ರಾಜನು ಶೋಕದಿಂದ ಸೋತು, ಪರಾಭವದ ಕುರಿತು ಚಿಂತಿಸುತ್ತಾ ತನ್ನ ಪುರಕ್ಕೆ ಪ್ರಯಾಣ ಬೆಳೆಸಿದನು. ಮಾರ್ಗದಲ್ಲಿ ವಿಪುಲ ಹುಲ್ಲು-ನೀರಿರುವ ಪ್ರದೇಶದಲ್ಲಿ ವಾಹನಗಳನ್ನು ವಿಸರ್ಜಿಸಿ, ಬೀಡುಬಿಟ್ಟನು. ಉರಿಯುತ್ತಿರುವ ಬೆಂಕಿಯಂತೆ ಹೊಳೆಯುವ ಪರ್ಯಂಕದಲ್ಲಿ ರಾಹುವಿನ ಗ್ರಹಣಕ್ಕೊಳಗಾದ ಚಂದ್ರನಂತೆ ಕುಂದಿ ಕುಳಿತು ರಾತ್ರಿಯನ್ನು…

Continue reading

ದುರ್ಯೋಧನನ ವೈಷ್ಣವ ಯಜ್ಞ

ದುರ್ಯೋಧನನ ವೈಷ್ಣವ ಯಜ್ಞ ಪಾಂಡುನಂದನರಿಂದ ಮೋಕ್ಷಿತನಾಗಿ ಹಸ್ತಿನಾಪುರಕ್ಕೆ ಮರಳಿದ ದುರ್ಯೋಧನನಿಗೆ ಭೀಷ್ಮನು ಈ ಮಾತುಗಳನ್ನಾಡಿದನು: “ಮಗನೇ! ಆ ತಪೋವನಕ್ಕೆ ಹೋಗುವ ಮೊದಲೇ ಹೋಗುವುದು ನನಗಿಷ್ಟವಿಲ್ಲವೆಂದು ನಿನಗೆ ಹೇಳಿದ್ದೆ. ಆದರೆ ನೀನು ಅದರಂತೆ ಮಾಡಲಿಲ್ಲ. ಶತ್ರುಗಳ ಬಂಧಿಯಾಗಿ ಧರ್ಮಜ್ಞ ಪಾಂಡವರಿಂದ ಬಿಡಿಸಲ್ಪಟ್ಟ ನಿನಗೆ ನಾಚಿಕೆಯಾಗುತ್ತಿಲ್ಲವೇ? ನಿನ್ನ ಮತ್ತು ನಿನ್ನ ಸೈನ್ಯದ ಪ್ರತ್ಯಕ್ಷದಲ್ಲಿಯೇ ಗಂಧರ್ವರ ಭಯದಿಂದ ಸೂತಪುತ್ರನು ರಣದಿಂದ ಓಡಿಹೋಗಲಿಲ್ಲವೇ? ಆ ನಿನ್ನ ಸೇನೆಯು ಕಷ್ಟದಿಂದ ರೋದಿಸುತ್ತಿದ್ದಾಗ ಮಹಾತ್ಮ ಪಾಂಡವರ ವಿಕ್ರಮವನ್ನು ನೋಡಿದುದರ…

Continue reading

ದ್ರೌಪದೀಹರಣ: ಜಯದ್ರಥನಿಂದ ದ್ರೌಪದಿಯ ಅಪಹರಣ

[spacer height=”40px”] ದ್ರೌಪದೀಹರಣ: ಜಯದ್ರಥನಿಂದ ದ್ರೌಪದಿಯ ಅಪಹರಣ ಮಹಾರಥ ಪಾಂಡವರು ಮೃಗಗಳಿಂದ ತುಂಬಿದ್ದ ಕಾಮ್ಯಕ ವನದಲ್ಲಿ ಅಮರರಂತೆ ವಿಹರಿಸುತ್ತಾ ರಮಿಸುತ್ತಿದ್ದರು. ಆಗ ಒಂದು ದಿನ ಯೋಗವೋ ಎಂಬಂತೆ ಬ್ರಾಹ್ಮಣರಿಗೋಸ್ಕರ ಬೇಟೆಯಾಡಲು ಪಾಂಡವರೆಲ್ಲರೂ ದ್ರೌಪದಿಯನ್ನು ತೃಣಬಿಂದುವಿನ ಆಶ್ರಮದಲ್ಲಿರಿಸಿ, ಪುರೋಹಿತ ಧೌಮ್ಯನ ಅಪ್ಪಣೆಯನ್ನು ಪಡೆದು, ನಾಲ್ಕು ದಿಕ್ಕುಗಳಿಗೆ ಹೋದರು. ಅದೇ ಸಮಯದಲ್ಲಿ ಸಿಂಧುಗಳ ರಾಜ ವೃದ್ಧಕ್ಷತ್ರನ ಮಗ ಜಯದ್ರಥನು ವಿವಾಹಾರ್ಥವಾಗಿ ಶಾಲ್ವದ ಕಡೆ ಪ್ರಯಾಣಮಾಡುತ್ತಿದ್ದನು. ರಾಜನಿಗೆ ಯೋಗ್ಯವಾದ ಅತಿದೊಡ್ಡ ಪರಿಚಾರಕ ಗಣಗಳಿಂದ ಕೂಡಿದವನಾಗಿ…

Continue reading