ಯುಧಿಷ್ಠಿರನ ವೈರಾಗ್ಯ; ತಮ್ಮಂದಿರು, ದ್ರೌಪದಿ, ಋಷಿ ದೇವಸ್ಥಾನ, ವ್ಯಾಸ ಮತ್ತು ಕೃಷ್ಣರು ರಾಜನಾಗಲು ಅವನನ್ನು ಉತ್ತೇಜಿಸಿದುದು

ಯುಧಿಷ್ಠಿರನ ವೈರಾಗ್ಯ; ತಮ್ಮಂದಿರು, ದ್ರೌಪದಿ, ಋಷಿ ದೇವಸ್ಥಾನ, ವ್ಯಾಸ ಮತ್ತು ಕೃಷ್ಣರು ರಾಜನಾಗಲು ಅವನನ್ನು ಉತ್ತೇಜಿಸಿದುದು ಯುಧಿಷ್ಠಿರ ವಾಕ್ಯ ತನ್ನ ಪುತ್ರ-ಪೌತ್ರರನ್ನೂ ಸಂಬಂಧಿ-ಸ್ನೇಹಿತರನ್ನೂ ನೆನಪಿಸಿಕೊಂಡು ರಾಜನು ಉದ್ವಿಗ್ನ ಹೃದಯಿಯಾಗಿ ಅಸ್ವಸ್ಥಚೇತನನಾದನು. ಆಗ ಹೊಗೆಯಿಂದ ತುಂಬಿದ ಅಗ್ನಿಯಂತೆ ಶೋಕಪರೀತಾತ್ಮನಾದ ಆ ಧೀಮಾನ್ ರಾಜನು ಸಂತಾಪಪೀಡಿತನಾಗಿ ವೈರಾಗ್ಯವನ್ನು ತಾಳಿದನು. ಧರ್ಮಾತ್ಮ ಯುಧಿಷ್ಠಿರನಾದರೋ ಶೋಕವ್ಯಾಕುಲ ಚೇತನನಾಗಿ ಮಹಾರಥ ಕರ್ಣನನ್ನು ಸ್ಮರಿಸಿಕೊಂಡು ದುಃಖಸಂತಪ್ತನಾಗಿ ಶೋಕಿಸಿದನು. ದುಃಖ-ಶೋಕಗಳಿಂದ ಆವಿಷ್ಟನಾಗಿ ಪುನಃ ಪುನಃ ನಿಟ್ಟುಸಿರು ಬಿಡುತ್ತಾ ಶೋಕಕರ್ಶಿತನಾಗಿ ಅರ್ಜುನನನ್ನು…

Continue reading

ಯುಧಿಷ್ಠಿರನ ಪಟ್ಟಾಭಿಷೇಕ

[spacer height=”20px”] ಯುಧಿಷ್ಠಿರನ ಪಟ್ಟಾಭಿಷೇಕ ಅನಂತರ ನಕ್ಷತ್ರಗಳಿಂದ ಸುತ್ತುವರೆಯಲ್ಪಟ್ಟ ಚಂದ್ರಮನಂತೆ ರಾಜ ಯುಧಿಷ್ಠಿರನು ಧೃತರಾಷ್ಟ್ರನನ್ನು ಮುಂದೆಮಾಡಿಕೊಂಡು ತನ್ನ ಪುರವನ್ನು ಪ್ರವೇಶಿಸಿದನು. ಪುರ ಪ್ರವೇಶಮಾಡುವಾಗ ಧರ್ಮಜ್ಞ ಕುಂತೀಪುತ್ರ ಯುಧಿಷ್ಠಿರನು ದೇವತೆಗಳನ್ನೂ, ಸಹಸ್ರಾರು ಬ್ರಾಹ್ಮಣರನ್ನೂ ಅರ್ಚಿಸಿದನು. ಅನಂತರ ದೇವ ಸೋಮನು ಅಮೃತಮಯ ರಥವನ್ನು ಏರುವಂತೆ ಅವನು ಹೊಸತಾದ, ಶುಭ್ರವಾದ, ಕಂಬಳಿ-ಜಿನಗಳನ್ನು ಹೊದೆಸಿದ್ದ, ಶುಭಲಕ್ಷಣಗಳುಳ್ಳ ಬಿಳಿಯಾದ ಹದಿನಾರು ಎತ್ತುಗಳನ್ನು ಕಟ್ಟಿದ್ದ, ಮಂತ್ರಗಳಿಂದ ಅರ್ಚಿತಗೊಂಡಿದ್ದ, ಪುಣ್ಯ ಮಹರ್ಷಿಗಳಿಂದ ಸ್ತುತಿಸಲ್ಪಡುತ್ತಿದ್ದ ರಥವನ್ನು ಏರಿದನು. ಕೌಂತೇಯ ಭೀಮಪರಾಕ್ರಮಿ ಭೀಮನು…

Continue reading

ಕೃಷ್ಣನು ಯುಧಿಷ್ಠಿರನನ್ನು ಭೀಷ್ಮನ ಬಳಿ ಕರೆದುಕೊಂಡು ಹೋದುದು

[spacer height=”20px”] ಕೃಷ್ಣನು ಯುಧಿಷ್ಠಿರನನ್ನು ಭೀಷ್ಮನ ಬಳಿ ಕರೆದುಕೊಂಡು ಹೋದುದು ಹಾಗೆ ನಗರದಲ್ಲಿ ಸರ್ವರನ್ನೂ ಪ್ರಸನ್ನಗೊಳಿಸಿ ಮಹಾತ್ಮ ಯುಧಿಷ್ಠಿರನು ವಾಸುದೇವನ ಬಳಿಸಾರಿ, ಕೈಮುಗಿದು ನಮಸ್ಕರಿಸಿದನು. ಆಗ ಮಣಿಕಾಂಚನಭೂಷಿತ ಮಹಾ ಪರ್ಯಂಕದ ಮೇಲೆ ಮೋಡಗಳಿಂದ ಕೂಡಿದ ಮೇರು ಪರ್ವತದಂತೆ ನೀಲವರ್ಣದ ಕೃಷ್ಣನು ಕುಳಿತಿರುವುದನ್ನು ಅವನು ನೋಡಿದನು. ದಿವ್ಯಾಭರಣಗಳನ್ನು ಧರಿಸಿದ್ದ, ಹೊಂಬಣ್ಣದ ರೇಷ್ಮೆಯ ವಸ್ತ್ರವನ್ನುಟ್ಟಿದ್ದ, ಸುವರ್ಣದಿಂದ ಸಮಲಂಕೃತವಾದ ನೀಲಮಣಿಯಂತಿದ್ದ ಅವನ ದೇಹವು ಜಾಜ್ವಲ್ಯಮಾನವಾಗಿತ್ತು. ಉದಯಿಸುತ್ತಿರುವ ಸೂರ್ಯನು ಉದಯಾಚಲವನ್ನು ಪ್ರಕಾಶಗೊಳಿಸುವಂತೆ ಅವನ ವಕ್ಷಸ್ಥಳದಲ್ಲಿದ್ದ ಕೌಸ್ತುಭಮಣಿಯು…

Continue reading

ಯುಧಿಷ್ಠಿರ-ಭೀಷ್ಮ ಸಂವಾದ

ಯುಧಿಷ್ಠಿರ-ಭೀಷ್ಮ ಸಂವಾದ ರಾತ್ರಿಯು ಕಳೆಯಲು ಇನ್ನೂ ಅರ್ಧ ಯಾಮವಿರುವಾಗಲೇ ಅವನು ಎದ್ದನು. ಮಾಧವನು ಧ್ಯಾನಮಾರ್ಗವನ್ನಾಶ್ರಯಿಸಿ ಸರ್ವಜ್ಞಾನಗಳನ್ನೂ ಕಂಡು ಅನಂತರ ಸನಾತನಬ್ರಹ್ಮನನ್ನು ಧ್ಯಾನಿಸಿದನು. ಆಗ ಶ್ರುತಿಪುರಾಣಗಳನ್ನು ತಿಳಿದಿದ್ದ, ವಿದ್ಯಾವಂತರಾದ, ಸುಂದರ ಕಂಠವುಳ್ಳವರು ಆ ವಿಶ್ವಕರ್ಮಿ ಪ್ರಜಾಪತಿ ವಾಸುದೇವನನ್ನು ಸ್ತುತಿಸಿದರು. ಕೈಗಳಿಂದ ತಾಳಹಾಕುತ್ತಾ ಭಜನೆ ಮಾಡುತ್ತಿದ್ದರು. ಮಧುರ ಕಂಠದಲ್ಲಿ ಗಾಯನ ಹಾಡುತ್ತಿದ್ದರು. ಸಹಸ್ರಾರು ಶಂಖ-ಆನಕ-ಮೃದಂತಗಳನ್ನು ಮೊಳಗಿಸಿದರು. ಅತಿಮನೋರಮವಾದ ವೀಣೆ-ಪವಣ-ವೇಣುಗಳ ಧ್ವನಿಗಳು, ಅವನ ಭವನವೇ ಸಂತೋಷದಿಂದ ನಗುತ್ತಿದೆಯೋ ಎನ್ನುವಂತೆ ಬಹು ವಿಸ್ತೀರ್ಣದವರೆಗೆ ಕೇಳಿಬರುತ್ತಿತ್ತು. ಹಾಗೆಯೇ…

Continue reading

ಭೀಷ್ಮಸ್ವರ್ಗಾರೋಹಣ

ಭೀಷ್ಮಸ್ವರ್ಗಾರೋಹಣ ಭೀಷ್ಮಸ್ವರ್ಗಾನುಜ್ಞಾ ಅನಂತರ ರಾಜಾ ಕುಂತೀಸುತನು ಪೌರ-ಜಾನಪದ ಜನರನ್ನು ಯಥಾನ್ಯಾಯವಾಗಿ ಪೂಜಿಸಿ ತಮ್ಮ ತಮ್ಮ ಮನೆಗಳಿಗೆ ಹೋಗಲು ಅನುಮತಿಯನ್ನಿತ್ತನು. ಆಗ ಪಾಂಡುಸುತ ನೃಪನು ವೀರರನ್ನು ಕಳೆದುಕೊಂಡಿದ್ದ ಮತ್ತು ಪತಿಯಂದಿರನ್ನು ಕಳೆದುಕೊಂಡಿದ್ದ ನಾರೀಗಣಗಳಿಗೆ ಅಪಾರ ಐಶ್ವರ್ಯವನ್ನು ದಾನಮಾಡಿ ಸಂತವಿಸಿದನು. ಅಭಿಷಿಕ್ತನಾಗಿ ರಾಜ್ಯವನ್ನು ಪಡೆದ ಮಹಾಪ್ರಾಜ್ಞ ನರಶ್ರೇಷ್ಠ ಧರ್ಮಭೃತರಲ್ಲಿ ಶ್ರೇಷ್ಠ ಯುಧಿಷ್ಠಿರನು ಮಂತ್ರಿಗಳೇ ಮೊದಲಾದ ಸಮಸ್ತ ಪ್ರಕೃತಿಗಣಗಳನ್ನೂ ಅವರವರ ಸ್ಥಾನಗಳಲ್ಲಿ ನಿಯೋಜಿಸಿ ಶಕ್ತಿಯುತ ದ್ವಿಜ ಮುಖ್ಯರಿಂದ ಶ್ರೇಷ್ಠ ಆಶೀರ್ವಾದಗಳನ್ನು ಪಡೆದನು. ಶ್ರೀಮಾನ್ ಪುರುಷರ್ಷಭನು…

Continue reading

ಯುಧಿಷ್ಠಿರ ಸಾಂತ್ವನ; ಅಶ್ವಮೇಧದ ಸೂಚನೆ

ಯುಧಿಷ್ಠಿರ ಸಾಂತ್ವನ; ಅಶ್ವಮೇಧದ ಸೂಚನೆ ಮಹಾಬಾಹು ಯುಧಿಷ್ಠಿರನು ಭೀಷ್ಮನಿಗೆ ಜಲತರ್ಪಣವನ್ನಿತ್ತು ರಾಜಾ ಧೃತರಾಷ್ಟ್ರನನ್ನು ಮುಂದೆಮಾಡಿಕೊಂಡು ವ್ಯಾಕುಲಚಿತ್ತನಾಗಿ ಗಂಗಾನದಿಯ ತಟವನ್ನೇರಿದನು. ಮೇಲೇರುತ್ತಲೇ ಕಣ್ಣೀರಿನವ್ಯಾಕುಲಕಣ್ಣುಗಳ ಆ ಮಹೀಪಾಲನು ಬೇಟೆಗಾರನಿಂದ ಹೊಡೆಯಲ್ಪಟ್ಟ ಆನೆಯಂತೆ ಗಂಗಾನದಿಯ ತೀರದಲ್ಲಿಯೇ ಬಿದ್ದುಬಿಟ್ಟನು. ಕುಸಿಯುತ್ತಿದ್ದ ಅವನನ್ನು ಕೃಷ್ಣನ ಹೇಳಿಕೆಯಂತೆ ಭೀಮನು ಹಿಡಿದುಕೊಂಡನು. ಪರಬಲಾರ್ದನ ಕೃಷ್ಣನು “ಹೀಗಾಗಬೇಡ!” ಎಂದು ಯುಧಿಷ್ಠಿರನಿಗೆ ಹೇಳಿದನು. ಆರ್ತನಾಗಿ ಪುನಃ ಪುನಃ ನಿಟ್ಟುಸಿರು ಬಿಡುತ್ತಾ ನೆಲದ ಮೇಲೆ ಬಿದ್ದ ಧರ್ಮಾತ್ಮ ಯುಧಿಷ್ಠಿರನನ್ನು ಪಾಂಡವರು ನೋಡಿದರು. ಸತ್ವವನ್ನು ಕಳೆದುಕೊಂಡು…

Continue reading

ಇಂದ್ರಪ್ರಸ್ಥದಲ್ಲಿ ಕೃಷ್ಣಾರ್ಜುನರ ಸಭಾವಿಹಾರ; ಕೃಷ್ಣನು ದ್ವಾರಕೆಗೆ ತೆರಳಿದುದು

[spacer height=”20px”] ಇಂದ್ರಪ್ರಸ್ಥದಲ್ಲಿ ಕೃಷ್ಣಾರ್ಜುನರ ಸಭಾವಿಹಾರ; ಕೃಷ್ಣನು ದ್ವಾರಕೆಗೆ ತೆರಳಿದುದು ಪಾಂಡವರಿಗೆ ವಿಜಯವಾಗಿ ಅವರು ಪ್ರಶಾಂತರಾಗಲು ವಾಸುದೇವ-ಧನಂಜಯರು ಹರ್ಷಿತರಾದರು. ಮುದಿತರಾಗಿ ಅವನು ತಮ್ಮ ಅನುಯಾಯಿಗಳೊಂದಿಗೆ ದಿವಿಯಲ್ಲಿ ದೇವೇಶ್ವರರಂತೆ ವಿಚಿತ್ರ ವನ-ಪರ್ವತಗಳಲ್ಲಿ ವಿಹರಿಸಿದರು. ಅಶ್ವಿನಿಯರು ನಂದನ ವನದಲ್ಲಿ ಹೇಗೋ ಹಾಗೆ ಅವರಿಬ್ಬರೂ ರಮಣೀಯ ಶೈಲಗಳಲ್ಲಿ ಮತ್ತು ನದಿ-ತೀರ್ಥಗಳಲ್ಲಿ ವಿಹರಿಸುತ್ತಾ ಹರ್ಷಿತರಾದರು. ಮಹಾತ್ಮ ಕೃಷ್ಣ-ಪಾಂಡವರು ಇಂದ್ರಪ್ರಸ್ಥದಲ್ಲಿ ರಮಿಸಿದರು. ಆ ರಮ್ಯ ಸಭೆಯನ್ನು ಪ್ರವೇಶಿಸಿ ವಿಹರಿಸಿದರು. ಅಲ್ಲಿ ಅವರಿಬ್ಬರೂ ವಿಚಿತ್ರ ಯುದ್ಧಕಥೆಗಳನ್ನೂ, ತಮಗಾದ ಪರಿಕ್ಲೇಶಗಳನ್ನೂ…

Continue reading

ಪಾಂಡವರಿಗೆ ಮರುತ್ತನಿಧಿಲಾಭ ಮತ್ತು ಪರೀಕ್ಷಿತ್ಸಂಜೀವನ

ಪಾಂಡವರಿಗೆ ಮರುತ್ತನಿಧಿಲಾಭ ಮತ್ತು ಪರೀಕ್ಷಿತ್ಸಂಜೀವನ ಹಸ್ತಿನಾಪುರ ನಗರದಲ್ಲಿ ಕೂಡ ವೀರ ಪಾಂಡವರು ಅಭಿಮನ್ಯುವು ಇಲ್ಲದೇ ಶಾಂತಿಯನ್ನು ಪಡೆಯಲಿಲ್ಲ. ಪತಿಶೋಕದಿಂದ ಆರ್ತಳಾಗಿದ್ದ ವಿರಾಟನ ಮಗಳು ಉತ್ತರೆಯು ಅನೇಕ ದಿವಸಗಳು ಊಟವನ್ನೇ ಮಾಡಲಿಲ್ಲ. ಅದೊಂದು ಮಹಾ ಕರುಣಾಜನಕ ವಿಷಯವಾಗಿತ್ತು. ಹಾಗೆಯೇ ಅವಳ ಗರ್ಭದಲ್ಲಿದ್ದ ಭ್ರೂಣವೂ ದಿನ-ದಿನಕ್ಕೆ ಕ್ಷೀಣಿಸತೊಡಗಿತು. ತನ್ನ ದಿವ್ಯದೃಷ್ಟಿಯಿಂದ ಇದನ್ನು ತಿಳಿದ ಧೀಮಂತ ಮಹಾತೇಜಸ್ವೀ ವ್ಯಾಸನು ಆಗಮಿಸಿ ಕುಂತಿ ಮತ್ತು ಪೃಥುಲಲೋಚನೆ ಉತ್ತರೆಗೆ ಶೋಕವನ್ನು ಪರಿತ್ಯಜಿಸುವಂತೆ ಹೇಳಿದನು. “ಯಶಸ್ವಿನೀ! ನಿನ್ನಲ್ಲಿ ಮಹಾತೇಜಸ್ವಿಯಾದ…

Continue reading

ಅಶ್ವಮೇಧ ಯಜ್ಞ

[spacer height=”20px”] ಅಶ್ವಮೇಧ ಯಜ್ಞ ಯುಧಿಷ್ಠಿರನ ಯಜ್ಞದೀಕ್ಷೆ ಅದಾದ ಕೆಲವು ದಿನಗಳ ನಂತರ ಸತ್ಯವತೀ ಸುತ ಮಹಾತೇಜಸ್ವೀ ವ್ಯಾಸನು ನಾಗಸಾಹ್ವಯ ನಗರಕ್ಕೆ ಆಗಮಿಸಿದನು. ಆಗ ಎಲ್ಲ ಕುರೂದ್ವಹರೂ ವೃಷ್ಣಿ-ಅಂಧಕವ್ಯಾಘ್ರರೊಂದಿಗೆ ಅವನಿಗೆ ಯಥಾನ್ಯಾಯವಾಗಿ ಸೇವೆಸಲ್ಲಿಸಿದರು. ಅಲ್ಲಿ ನಾನಾ ವಿಧದ ಮಾತುಕಥೆಗಳು ನಡೆಯುತ್ತಿರಲು ಧರ್ಮಸುತ ಯುಧಿಷ್ಠಿರನು ವ್ಯಾಸನಿಗೆ ಇಂತೆಂದನು: “ಭಗವನ್! ನಿನ್ನ ಅನುಗ್ರಹದಿಂದ ಈ ರತ್ನವನ್ನು ತಂದಿದ್ದೇವೆ. ಇದನ್ನು ಮಹಾಕ್ರತು ವಾಜಿಮೇಧಕ್ಕೆ ಉಪಯೋಗಿಸಲು ಇಚ್ಛಿಸುತ್ತೇನೆ. ನೀನು ನನಗೆ ಅಪ್ಪಣೆಯನ್ನು ಕೊಡಬೇಕು. ನಾವೆಲ್ಲರೂ ನಿನ್ನ…

Continue reading

ಧೃತರಾಷ್ಟ್ರ, ಗಾಂಧಾರಿ, ಕುಂತಿ, ವಿದುರ ಮತ್ತು ಸಂಜಯರ ವನಪ್ರಸ್ಥಾನ

[spacer height=”20px”] ಧೃತರಾಷ್ಟ್ರ, ಗಾಂಧಾರಿ, ಕುಂತಿ, ವಿದುರ ಮತ್ತು ಸಂಜಯರ ವನಪ್ರಸ್ಥಾನ ಧೃತರಾಷ್ಟ್ರ ಶುಶ್ರೂಷಾ ಶತ್ರುಗಳನ್ನು ಸಂಹರಿಸಿ ರಾಜ್ಯವನ್ನು ಪಡೆದುಕೊಂಡ ಮಹಾತ್ಮ ಪಾಂಡವರು ಧೃತರಾಷ್ಟ್ರನನ್ನೇ ಮುಂದೆಮಾಡಿಕೊಂಡು ರಾಜ್ಯಭಾರ ಮಾಡುತ್ತಿದ್ದರು. ವಿದುರ, ಸಂಜಯ ಮತ್ತು ವೈಶ್ಯಾಪುತ್ರ ಯುಯುತ್ಸುವೂ ಕೂಡ ಧೃತರಾಷ್ಟ್ರನ ಸೇವೆಗೈಯುತ್ತಿದ್ದರು. ಪಾಂಡವರು ಸರ್ವಕಾರ್ಯಗಳಲ್ಲಿಯೂ ಆ ನೃಪನ ಸಲಹೆಯನ್ನು ಕೇಳುತ್ತಿದ್ದರು ಮತ್ತು ಅವನ ಅನುಜ್ಞೆಯಂತೆಯೇ ಎಲ್ಲವನ್ನೂ ಮಾಡುತ್ತಿದ್ದರು. ಹೀಗೆ ಅವರು ಹದಿನೈದು ವರ್ಷಗಳನ್ನು ಕಳೆದರು. ಧರ್ಮರಾಜನ ಅಭಿಪ್ರಾಯದಂತೆ ನಿತ್ಯವೂ ಆ ವೀರರು…

Continue reading