Aranyaka Parva: Chapter 6

ಆರಣ್ಯಕ ಪರ್ವ: ಅರಣ್ಯ ಪರ್ವ

ವಿದುರನು ವನದಲ್ಲಿ ಯುಧಿಷ್ಠಿರನ ಬಳಿ ಬರುವುದು

ಕಾಮ್ಯಕದಲ್ಲಿ ಆಗಮಿಸಿದ ವಿದುರನನ್ನು ಸಂಶಯಿಸಿದ ಪಾಂಡವರು ಬರಮಾಡಿಕೊಳ್ಳುವುದು (೧-೧೧). ಧೃತರಾಷ್ಟ್ರನಿಂದ ತ್ಯಕ್ತನಾಗಿ ನಿನ್ನ ಬಳಿ ಬಂದಿದ್ದೇನೆಂದು ವಿದುರನು ಯುಧಿಷ್ಠಿರನಿಗೆ ಹೇಳುವುದು (೧೨-೨೨).

03006001 ವೈಶಂಪಾಯನ ಉವಾಚ|

03006001a ಪಾಂಡವಾಸ್ತು ವನೇ ವಾಸಮುದ್ದಿಶ್ಯ ಭರತರ್ಷಭಾಃ|

03006001c ಪ್ರಯಯುರ್ಜಾಹ್ನವೀಕೂಲಾತ್ಕುರುಕ್ಷೇತ್ರಂ ಸಹಾನುಗಾಃ||

ವೈಶಂಪಾಯನನು ಹೇಳಿದನು: “ಭರತರ್ಷಭ ಪಾಂಡವರಾದರೋ ವನದಲ್ಲಿ ವಾಸಿಸುವ ಉದ್ದೇಶದಿಂದ ಜಾಹ್ನವೀ ತಟದಿಂದ ತಮ್ಮ ಅನುಯಾಯಿಗಳ ಸಹಿತ ಕುರುಕ್ಷೇತ್ರದ ಕಡೆ ಪ್ರಯಾಣಿಸಿದರು.

03006002a ಸರಸ್ವತೀದೃಷದ್ವತ್ಯೌ ಯಮುನಾಂ ಚ ನಿಷೇವ್ಯ ತೇ|

03006002c ಯಯುರ್ವನೇನೈವ ವನಂ ಸತತಂ ಪಶ್ಚಿಮಾಂ ದಿಶಂ||

ಸರಸ್ವತೀ, ದೃಷದ್ವತಿ ಮತ್ತು ಯಮುನೆಯನ್ನು ದಾಟಿ ವನದಿಂದ ವನಕ್ಕೆ ಹೋಗುತ್ತಾ ಸತತವಾಗಿ ಪಶ್ಚಿಮದಿಕ್ಕಿನಲ್ಲಿ ಪ್ರಯಾಣಮಾಡಿದರು.

03006003a ತತಃ ಸರಸ್ವತೀಕೂಲೇ ಸಮೇಷು ಮರುಧನ್ವಸು|

03006003c ಕಾಮ್ಯಕಂ ನಾಮ ದದೃಶುರ್ವನಂ ಮುನಿಜನಪ್ರಿಯಂ||

ಆಗ ಸರಸ್ವತೀ ದಡದಲ್ಲಿ ಮರುಭೂಮಿಯ ಮಧ್ಯದಲ್ಲಿ ಕಾಮ್ಯಕ ಎಂಬ ಹೆಸರಿನ ಮುನಿಜನರಿಗೆ ಪ್ರಿಯವಾದ ವನವನ್ನು ನೋಡಿದರು.

03006004a ತತ್ರ ತೇ ನ್ಯವಸನ್ವೀರಾ ವನೇ ಬಹುಮೃಗದ್ವಿಜೇ|

03006004c ಅನ್ವಾಸ್ಯಮಾನಾ ಮುನಿಭಿಃ ಸಾಂತ್ವ್ಯಮಾನಾಶ್ಚ ಭಾರತ||

ಭಾರತ! ಬಹಳಷ್ಟು ಮೃಗಗಳು ಮತ್ತು ದ್ವಿಜರು ವಾಸಿಸುತ್ತಿದ್ದ ಆ ವನದಲ್ಲಿ ಮುನಿಗಳಿಂದ ಸಾಂತ್ವನವನ್ನು ಪಡೆಯುತ್ತಾ ವೀರರು ನೆಲೆಸಿದರು.

03006005a ವಿದುರಸ್ತ್ವಪಿ ಪಾಂಡೂನಾಂ ತದಾ ದರ್ಶನಲಾಲಸಃ|

03006005c ಜಗಾಮೈಕರಥೇನೈವ ಕಾಮ್ಯಕಂ ವನಂ ಋದ್ಧಿಮತ್||

ಆಗ ವಿದುರನೂ ಕೂಡ ಪಾಂಡವರನ್ನು ನೋಡುವ ಇಚ್ಛೆಯಿಂದ ಒಂಟಿ ರಥದಲ್ಲಿ ಸಮೃದ್ಧ ಕಾಮ್ಯಕ ವನಕ್ಕೆ ಆಗಮಿಸಿದನು.

03006006a ತತೋ ಯಾತ್ವಾ ವಿದುರಃ ಕಾನನಂ ತಚ್

         ಚೀಘ್ರೈರಶ್ವೈರ್ವಾಹಿನಾ ಸ್ಯಂದನೇನ|

03006006c ದದರ್ಶಾಸೀನಂ ಧರ್ಮರಾಜಂ ವಿವಿಕ್ತೇ

         ಸಾರ್ಧಂ ದ್ರೌಪದ್ಯಾ ಭ್ರಾತೃಭಿರ್ಬ್ರಾಹ್ಮಣೈಶ್ಚ||

ಶೀಘ್ರ ಅಶ್ವಗಳಿಂದ ಎಳೆಯಲ್ಪಟ್ಟ ವಾಹನದಿಂದ ವಿದುರನು ಆ ಕಾನನಕ್ಕೆ ಬಂದು ಏಕಾಂತ ಸ್ಥಳದಲ್ಲಿ ದ್ರೌಪದಿ, ಸಹೋದರರು ಮತ್ತು ಬ್ರಾಹ್ಮಣರೊಂದಿಗೆ ಕುಳಿತಿದ್ದ ಧರ್ಮರಾಜನನ್ನು ನೋಡಿದನು.

03006007a ತತೋಽಪಶ್ಯದ್ವಿದುರಂ ತೂರ್ಣಮಾರಾದ್

         ಅಭ್ಯಾಯಾಂತಂ ಸತ್ಯಸಂಧಃ ಸ ರಾಜಾ|

03006007c ಅಥಾಬ್ರವೀದ್ಭ್ರಾತರಂ ಭೀಮಸೇನಂ

         ಕಿಂ ನು ಕ್ಷತ್ತಾ ವಕ್ಷ್ಯತಿ ನಃ ಸಮೇತ್ಯ||

ದೂರದಿಂದಲೇ ವಿದುರನನ್ನು ನೋಡಿದ ಆ ಸತ್ಯಸಂಧ ರಾಜನು ಸಹೋದರ ಭೀಮಸೇನನನ್ನು ಹತ್ತಿರ ಕರೆದು ಕೇಳಿದನು: “ಭೇಟಿಯಾದಾಗ ಕ್ಷತ್ತನು ಏನು ಹೇಳಬಹುದು?

03006008a ಕಚ್ಚಿನ್ನಾಯಂ ವಚನಾತ್ಸೌಬಲಸ್ಯ

         ಸಮಾಹ್ವಾತಾ ದೇವನಾಯೋಪಯಾತಿ|

03006008c ಕಚ್ಚಿತ್ ಕ್ಷುದ್ರಃ ಶಕುನಿರ್ನಾಯುಧಾನಿ

         ಜೇಷ್ಯತ್ಯಸ್ಮಾನ್ಪುನರೇವಾಕ್ಷವತ್ಯಾಂ||

ಸೌಬಲನು ಹೇಳಿಕಳುಹಿಸಿದಂತೆ ಇನ್ನೊಮ್ಮೆ ಜೂಜಿಗೆ ಕರೆಯಲು ಇಲ್ಲಿಗೆ ಬಂದಿರಬಹುದೇ? ದುಷ್ಟ ಶಕುನಿಯು ಇನ್ನೊಮ್ಮೆ ಜೂಜಿನಲ್ಲಿ ನಮ್ಮನ್ನು ಸೋಲಿಸಿ ನಮ್ಮ ಆಯುಧಗಳನ್ನು ಪಡೆಯಲು ಬಯಸಿರಬಹುದೇ?

03006009a ಸಮಾಹೂತಃ ಕೇನ ಚಿದಾದ್ರವೇತಿ

         ನಾಹಂ ಶಕ್ತೋ ಭೀಮಸೇನಾಪಯಾತುಂ|

03006009c ಗಾಂಡೀವೇ ವಾ ಸಂಶಯಿತೇ ಕಥಂ ಚಿದ್

         ರಾಜ್ಯಪ್ರಾಪ್ತಿಃ ಸಂಶಯಿತಾ ಭವೇನ್ನಃ||

ಯಾರಾದರೂ ಇಲ್ಲಿಗೆ ಬಾ ಎಂದು ಆಹ್ವಾನಿಸಿದರೆ ಇಲ್ಲ ಎಂದು ಹೇಳುವುದಕ್ಕೆ ನನಗಾಗುವುದಿಲ್ಲ ಭೀಮಸೇನ! ಆದರೂ ಹೇಗಾದರೂ ಯಾರಾದರೂ ಗಾಂಡೀವವನ್ನು ಪಣವಾಗಿ ಗೆದ್ದರೆ[1] ನಮಗೆ ಪುನಃ ರಾಜ್ಯಪ್ರಾಪ್ತಿಯಾಗುವುದಿಲ್ಲ ಎನ್ನುವುದರಲ್ಲಿ ಸಂಶಯವೇ ಇಲ್ಲ.”

03006010a ತತ ಉತ್ಥಾಯ ವಿದುರಂ ಪಾಂಡವೇಯಾಃ

         ಪ್ರತ್ಯಗೃಹ್ಣನ್ನೃಪತೇ ಸರ್ವ ಏವ|

03006010c ತೈಃ ಸತ್ಕೃತಃ ಸ ಚ ತಾನಾಜಮೀಢೋ

         ಯಥೋಚಿತಂ ಪಾಂಡುಪುತ್ರಾನ್ಸಮೇಯಾತ್||

ನೃಪತೇ! ಪಾಂಡವೇಯರೆಲ್ಲರೂ ಎದ್ದು ನಿಂತು ವಿದುರನನ್ನು ಬರಮಾಡಿಕೊಂಡರು. ಅವರಿಂದ ಸತ್ಕೃತನಾದ ಅಜಮೀಢ[2]ನು ಯಥೋಚಿತವಾಗಿ ಪಾಂಡುಪುತ್ರರೊಡನೆ ಕೂಡಿದನು.

03006011a ಸಮಾಶ್ವಸ್ತಂ ವಿದುರಂ ತೇ ನರರ್ಷಭಾಸ್

         ತತೋಽಪೃಚ್ಚನ್ನಾಗಮನಾಯ ಹೇತುಂ|

03006011c ಸ ಚಾಪಿ ತೇಭ್ಯೋ ವಿಸ್ತರತಃ ಶಶಂಸ

         ಯಥಾವೃತ್ತೋ ಧೃತರಾಷ್ಟ್ರೋಽಂಬಿಕೇಯಃ||

ವಿದುರನು ವಿಶ್ರಾಂತಿ ಪಡೆದ ನಂತರ ಆ ನರರ್ಷಭರು ಅವನು ಬಂದಿರುವ ಕಾರಣವನ್ನು ಕೇಳಿದರು. ಅವನಾದರೋ ಅವರಿಗೆ ಅಂಬಿಕೇಯ ಧೃತರಾಷ್ಟ್ರನು ನಡೆದುಕೊಂಡಿದುದರ ಕುರಿತು ವಿಸ್ತಾರವಾಗಿ ವಿವರಿಸಿದನು.

03006012 ವಿದುರ ಉವಾಚ|

03006012a ಅವೋಚನ್ಮಾಂ ಧೃತರಾಷ್ಟ್ರೋಽನುಗುಪ್ತಂ

         ಅಜಾತಶತ್ರೋ ಪರಿಗೃಹ್ಯಾಭಿಪೂಜ್ಯ|

03006012c ಏವಂ ಗತೇ ಸಮತಾಮಭ್ಯುಪೇತ್ಯ

         ಪಥ್ಯಂ ತೇಷಾಂ ಮಮ ಚೈವ ಬ್ರವೀಹಿ||

ವಿದುರನು ಹೇಳಿದನು: “ಅಜಾತಶತ್ರು! ನನ್ನನ್ನು ಪರಿಪಾಲಿಸುವ ಧೃತರಾಷ್ಟ್ರನು ನನ್ನನ್ನು ಸ್ವಾಗತಿಸಿ ಗೌರವಿಸಿ ಹೇಳಿದನು: “ಹೀಗೆಲ್ಲ ನಡೆದುಹೋಗಿರಲು, ಇಬ್ಬರಿಗೂ ಸಮತೆಯನ್ನು ತೋರಿಸಿ, ಅವರಿಗೆ ಮತ್ತು ನಮಗೆ ಸರಿಯಾದುದು ಏನು ಹೇಳು!”

03006013a ಮಯಾಪ್ಯುಕ್ತಂ ಯತ್ ಕ್ಷಮಂ ಕೌರವಾಣಾಂ

         ಹಿತಂ ಪಥ್ಯಂ ಧೃತರಾಷ್ಟ್ರಸ್ಯ ಚೈವ|

03006013c ತದ್ವೈ ಪಥ್ಯಂ ತನ್ಮನೋ ನಾಭ್ಯುಪೈತಿ

         ತತಶ್ಚಾಹಂ ಕ್ಷಮಮನ್ಯನ್ನ ಮನ್ಯೇ||

ನಾನು ಕೌರವರಿಗೆ ಏನು ತಕ್ಕುದಾದುದೋ ಮತ್ತು ಯಾವುದು ಧೃತರಾಷ್ಟ್ರನಿಗೂ ಹಿತವೂ ಸರಿಯೂ ಆದುದೋ ಅದನ್ನು ಹೇಳಿದೆನು. ಆದರೆ ನನ್ನ ಸಲಹೆಯು ಅವನ ಮನಸ್ಸನ್ನು ತಲುಪಲಿಲ್ಲ, ಮತ್ತು ಬೇರೆ ಏನನ್ನು ಹೇಳಲೂ ನನಗೆ ಮನಸ್ಸಾಗಲಿಲ್ಲ.

03006014a ಪರಂ ಶ್ರೇಯಃ ಪಾಂಡವೇಯಾ ಮಯೋಕ್ತಂ

         ನ ಮೇ ತಚ್ಚ ಶ್ರುತವಾನಾಂಬಿಕೇಯಃ|

03006014c ಯಥಾತುರಸ್ಯೇವ ಹಿ ಪಥ್ಯಮನ್ನಂ

         ನ ರೋಚತೇ ಸ್ಮಾಸ್ಯ ತದುಚ್ಯಮಾನಂ||

ಪಾಂಡವೇಯ! ಯಾವುದು ಪರಮ ಶ್ರೇಯವೋ ಅದನ್ನೇ ನಾನು ಹೇಳಿದೆ. ಆದರೆ ಅಂಬಿಕೇಯನು ಅದನ್ನು ಕೇಳಲಿಲ್ಲ. ರೋಗಿಗೆ ಪಥ್ಯ ಆಹಾರವು ರುಚಿಕರವೆನಿಸುವುದಿಲ್ಲದಂತೆ ನನ್ನ ಮಾತುಗಳು ಅವನಿಗೆ ಹಿಡಿಸಲಿಲ್ಲ.

03006015a ನ ಶ್ರೇಯಸೇ ನೀಯತೇಽಜಾತಶತ್ರೋ

         ಸ್ತ್ರೀ ಶ್ರೋತ್ರಿಯಸ್ಯೇವ ಗೃಹೇ ಪ್ರದುಷ್ಟಾ|

03006015c ಬ್ರುವನ್ನ ರುಚ್ಯೈ ಭರತರ್ಷಭಸ್ಯ

         ಪತಿಃ ಕುಮಾರ್ಯಾ ಇವ ಷಷ್ಟಿವರ್ಷಃ||

ಅಜಾತಶತ್ರು! ಪ್ರದುಷ್ಟ ಸ್ತ್ರೀಯೋರ್ವಳನ್ನು ಶ್ರೋತ್ರಿಯ ಕಡೆ ಹೇಗೋ ಹಾಗೆ ಅವನನ್ನು ಶ್ರೇಯಸ್ಸಿನ ಕಡೆ ಕೊಂಡೊಯ್ಯಲು ಸಾಧ್ಯವಿಲ್ಲ. ಅರವತ್ತು ವರ್ಷದವನು ಕುಮಾರಿಗೆ ಪತಿಯಾಗಿ ಹೇಗೆ ಇಷ್ಟವಾಗುವುದಿಲ್ಲವೋ ಹಾಗೆ ನನ್ನ ಮಾತುಗಳು ಭರತರ್ಷಭನಿಗೆ ಇಷ್ಟವಾಗಲಿಲ್ಲ!

03006016a ಧ್ರುವಂ ವಿನಾಶೋ ನೃಪ ಕೌರವಾಣಾಂ

         ನ ವೈ ಶ್ರೇಯೋ ಧೃತರಾಷ್ಟ್ರಃ ಪರೈತಿ|

03006016c ಯಥಾ ಪರ್ಣೇ ಪುಷ್ಕರಸ್ಯೇವ ಸಿಕ್ತಂ

         ಜಲಂ ನ ತಿಷ್ಠೇತ್ಪಥ್ಯಮುಕ್ತಂ ತಥಾಸ್ಮಿನ್||

ನೃಪ! ಕೌರವರ ವಿನಾಶವು ನಿರ್ಧರಿತವಾಗಿದೆ ಮತ್ತು ಧೃತರಾಷ್ಟ್ರನು ಶ್ರೇಯಸ್ಸನ್ನು ಕಾಣುವುದಿಲ್ಲ. ಕಮಲದ ಡಂಟಿಗೆ ನೀರು ಹೇಗೆ ಅಂಟಿಕೊಳ್ಳುವುದಿಲ್ಲವೋ ಹಾಗೆ ಒಳ್ಳೆಯ ಸಲಹೆಯ ಮಾತುಗಳು ಅವನಿಗೆ ತಾಗುವುದಿಲ್ಲ.

03006017a ತತಃ ಕ್ರುದ್ಧೋ ಧೃತರಾಷ್ಟ್ರೋಽಬ್ರವೀನ್ಮಾಂ

         ಯತ್ರ ಶ್ರದ್ಧಾ ಭಾರತ ತತ್ರ ಯಾಹಿ|

03006017c ನಾಹಂ ಭೂಯಃ ಕಾಮಯೇ ತ್ವಾಂ ಸಹಾಯಂ

         ಮಹೀಂ ಇಮಾಂ ಪಾಲಯಿತುಂ ಪುರಂ ವಾ||

ಕೃದ್ಧನಾದ ಧೃತರಾಷ್ಟ್ರನು ನನಗೆ ಹೇಳಿದನು: “ಭಾರತ! ನಿನಗೆ ಎಲ್ಲಿ ಶ್ರದ್ಧೆಯಿದೆಯೋ ಅಲ್ಲಿಗೆ ಹೋಗು. ಈ ಭೂಮಿ ಮತ್ತು ಪುರವನ್ನು ಪಾಲಿಸಲು ಇನ್ನು ನನಗೆ ನಿನ್ನ ಸಹಾಯವು ಅಗತ್ಯವಿಲ್ಲ.”

03006018a ಸೋಽಹಂ ತ್ಯಕ್ತೋ ಧೃತರಾಷ್ಟ್ರೇಣ ರಾಜಂಸ್

         ತ್ವಾಂ ಶಾಸಿತುಮುಪಯಾತಸ್ತ್ವರಾವಾನ್|

03006018c ತದ್ವೈ ಸರ್ವಂ ಯನ್ಮಯೋಕ್ತಂ ಸಭಾಯಾಂ

         ತದ್ಧಾರ್ಯತಾಂ ಯತ್ಪ್ರವಕ್ಷ್ಯಾಮಿ ಭೂಯಃ||

ರಾಜನ್! ಧೃತರಾಷ್ಟ್ರನಿಂದ ತ್ಯಕ್ತನಾದ ನಾನು ತ್ವರೆಮಾಡಿ ಸಮಾಲೋಚನೆ ಮಾಡಲು ನಿನ್ನಲ್ಲಿಗೆ ಬಂದಿದ್ದೇನೆ. ಸಭೆಯಲ್ಲಿ ನಾನು ಹೇಳಿದ ಸರ್ವವನ್ನೂ ಮನಸ್ಸಿನಲ್ಲಿಟ್ಟುಕೋ. ಅವನ್ನೇ ಪುನಃ ಹೇಳುತ್ತೇನೆ.

03006019a ಕ್ಲೇಶೈಸ್ತೀವ್ರೈರ್ಯುಜ್ಯಮಾನಃ ಸಪತ್ನೈಃ

         ಕ್ಷಮಾಂ ಕುರ್ವನ್ಕಾಲಮುಪಾಸತೇ ಯಃ|

03006019c ಸಂ ವರ್ಧಯನ್ಸ್ತೋಕಮಿವಾಗ್ನಿಮಾತ್ಮವಾನ್

         ಸ ವೈ ಭುಂಕ್ತೇ ಪೃಥಿವೀಮೇಕ ಏವ||

ತನ್ನ ಪ್ರತಿಸ್ಪರ್ಧಿಗಳಿಂದ ಸಂಪೂರ್ಣವಾಗಿ ಸೋತವನು ಕ್ಷಮಿಸಿ ಕಾಲವನ್ನು ಉಪಾಸಿಸುತ್ತಾನೆ. ಅಗ್ನಿಯನ್ನು ಹೇಗೆ ವೃದ್ಧಿಸುತ್ತೀವೋ ಹಾಗೆ, ನಿಧಾನವಾಗಿ ತನ್ನನ್ನು ತಾನೇ ವೃದ್ಧಿಗೊಳಿಸಿಕೊಂಡು ಏಕೈಕನಾಗಿ ಪೃಥ್ವಿಯನ್ನು ಅನುಭವಿಸುತ್ತಾನೆ.

03006020a ಯಸ್ಯಾವಿಭಕ್ತಂ ವಸು ರಾಜನ್ಸಹಾಯೈಸ್

         ತಸ್ಯ ದುಃಖೇಽಪ್ಯಂಶಭಾಜಃ ಸಹಾಯಾಃ|

03006020c ಸಹಾಯಾನಾಮೇಷ ಸಂಗ್ರಹಣೇಽಭ್ಯುಪಾಯಃ

         ಸಹಾಯಾಪ್ತೌ ಪೃಥಿವೀಪ್ರಾಪ್ತಿಮಾಹುಃ||

ರಾಜನ್! ತನ್ನ ಸಹಾಯಕರೊಂದಿಗೆ ಸಂಪತ್ತನ್ನು ಹಂಚಿಕೊಂಡವನಿಗೆ ಅವನು ದುಃಖದಲ್ಲಿರುವಾಗ ಸಹಾಯಕರಿರುತ್ತಾರೆ. ಇದೊಂದು ಸಹಾಯಕರನ್ನು ಒಟ್ಟುಮಾಡಿಕೊಳ್ಳುವ ಉಪಾಯ. ಸಹಾಯಕರಿಂದ ಪೃಥ್ವಿಯನ್ನೇ ಗೆಲ್ಲಬಹುದು.

03006021a ಸತ್ಯಂ ಶ್ರೇಷ್ಠಂ ಪಾಂಡವ ನಿಷ್ಪ್ರಲಾಪಂ

         ತುಲ್ಯಂ ಚಾನ್ನಂ ಸಹ ಭೋಜ್ಯಂ ಸಹಾಯೈಃ|

03006021c ಆತ್ಮಾ ಚೈಷಾಮಗ್ರತೋ ನಾತಿವರ್ತೇದ್

         ಏವಂವೃತ್ತಿರ್ವರ್ಧತೇ ಭೂಮಿಪಾಲಃ||

ಪಾಂಡವ! ಪ್ರಲಾಪವಿಲ್ಲದೇ ಸತ್ಯವನ್ನು ಹೇಳುವುದು ಶ್ರೇಷ್ಠ. ಭೋಜನವನ್ನು ಸಹಾಯಕರೊಂದಿಗೆ ಸಮನಾಗಿ ಹಂಚಿಕೊಳ್ಳುವುದು ಶ್ರೇಷ್ಠ. ಇನ್ನೊಬ್ಬರ ಮೊದಲೇ ಸ್ವಾರ್ಥವು ಬರಬಾರದು. ಅಂಥಹ ನಡತೆಯು ಭೂಮಿಪಾಲನನ್ನು ವೃದ್ಧಿಗೊಳಿಸುತ್ತದೆ.”

03006022 ಯುಧಿಷ್ಠಿರ ಉವಾಚ|

03006022a ಏವಂ ಕರಿಷ್ಯಾಮಿ ಯಥಾ ಬ್ರವೀಷಿ

         ಪರಾಂ ಬುದ್ಧಿಮುಪಗಮ್ಯಾಪ್ರಮತ್ತಃ|

03006022c ಯಚ್ಚಾಪ್ಯನ್ಯದ್ದೇಶಕಾಲೋಪಪನ್ನಂ

         ತದ್ವೈ ವಾಚ್ಯಂ ತತ್ಕರಿಷ್ಯಾಮಿ ಕೃತ್ಸ್ನಂ||

ಯುಧಿಷ್ಠಿರನು ಹೇಳಿದನು: “ವಿದುರ! ನೀನು ಹೇಳಿದಹಾಗೆಯೇ ಮಾಡುತ್ತೇನೆ ಮತ್ತು ನಿನ್ನ ಮಹಾ ವಿವೇಕವನ್ನು ಮನಃಪೂರ್ವಕವಾಗಿ ಮಾಡುತ್ತೇನೆ. ಈ ಕಾಲದೇಶಗಳಿಗೆ ಹೊಂದುವಂಥಹ ಮತ್ತೇನನ್ನಾದರೂ ಹೇಳಬಯಸಿದರೆ ಅದರಂತೆಯೂ ಎಲ್ಲವನ್ನು ಮಾಡುತ್ತೇನೆ.””

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಅರಣ್ಯಪರ್ವಣಿ ವಿದುರನಿರ್ವಾಸೇ ಷಷ್ಠೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಆರಣ್ಯಕಪರ್ವದಲ್ಲಿ ಅರಣ್ಯಪರ್ವದಲ್ಲಿ ವಿದುರನಿರ್ವಾಸ ಎನ್ನುವ ಆರನೆಯ ಅಧ್ಯಾಯವು.

Related image

[1] ಜೂಜಿನಲ್ಲಿ ಗಾಂಡೀವವನ್ನು ಗೆಲ್ಲಲು ಸಾಧ್ಯವೇ? ಸಾಧ್ಯವಾಗಿದ್ದರೆ ಶಕುನಿ-ದುರ್ಯೋಧನಾದಿಗಳು ಇದನ್ನೂ ಪಣವನ್ನಾಗಿಡಲು ಯುಧಿಷ್ಠಿರನಿಗೆ ಏಕೆ ದ್ಯೂತದ ಸಮಯದಲ್ಲಿ ಕೇಳಲಿಲ್ಲ?

[2] ಇಲ್ಲಿ ವಿದುರನನ್ನು ಅಜಮೀಢನೆಂದು ಏಕೆ ಸಂಬೋಧಿಸಲಾಗಿದೆ?

Comments are closed.