ಹರಿವಂಶ: ಹರಿವಂಶ ಪರ್ವ
೧೦
ಐಲೋತ್ಪತ್ತಿವರ್ಣನಂ
19010001 ವೈಶಂಪಾಯನ ಉವಾಚ|
19010001a ಮನೋರ್ವೈವಸ್ವತಸ್ಯಾಸನ್ಪುತ್ರಾ ವೈ ನವ ತತ್ಸಮಾಃ |
19010001c ಇಕ್ಷ್ವಾಕುಶ್ಚೈವ ನಾಭಾಗೋ ಧೃಷ್ಣುಃ ಶರ್ಯಾತಿರೇವ ಚ ||
19010002a ನರಿಷ್ಯಂಶ್ಚ ತಥಾ ಪ್ರಾಂಶುರ್ನಾಭಾಗಾರಿಷ್ಟಸಪ್ತಮಾಃ |
19010002c ಕರೂಷಶ್ಚ ಪೃಷಧ್ರಶ್ಚ ನವೈತೇ ಭರತರ್ಷಭ ||
ವೈಶಂಪಾಯನನು ಹೇಳಿದನು: “ವೈವಸ್ವತ ಮನುವಿಗೆ ಅವನ ಸಮರಾದ ಒಂಭತ್ತು ಪುತ್ರರಾದರು. ಭರತರ್ಷಭ! ಇಕ್ಷ್ವಾಕು, ನಾಭಾಗ, ಧೃಷ್ಣು, ಶರ್ಯಾತಿ, ನರಿಷ್ಯ, ಪ್ರಾಂಶು, ಏಳನೇ ನಾಭಾಗಾರಿಷ್ಟ, ಕರೂಷ ಮತ್ತು ಪೃಷದ – ಇವರೇ ಆ ಒಂಭತ್ತು ಮಂದಿ.
19010003a ಅಕರೋತ್ಪುತ್ರಕಾಮಸ್ತು ಮನುರಿಷ್ಟಿಂ ಪ್ರಜಾಪತಿಃ |
19010003c ಮಿತ್ರಾವರುಣಯೋಸ್ತಾತ ಪೂರ್ವಮೇವ ವಿಶಾಂಪತೇ ||
19010004a ಅನುತ್ಪನ್ನೇಷು ನವಸು ಪುತ್ರೇಷ್ವೇತೇಷು ಭಾರತ |
ವಿಶಾಂಪತೇ! ತಾತ! ಭಾರತ! ಈ ಒಂಭತ್ತು ಪುತ್ರರು ಹುಟ್ಟುವುದಕ್ಕೆ ಮೊದಲು ಪ್ರಜಾಪತಿ ಮನುವು ಪುತ್ರರನ್ನು ಬಯಸಿ ಮಿತ್ರಾವರುಣರ ಇಷ್ಟಿಯನ್ನು ನಡೆಸಿದ್ದನು.
19010004c ತಸ್ಯಾಂ ತು ವರ್ತಮಾನಾಯಾಮಿಷ್ಟ್ಯಾಂ ಭರತಸತ್ತಮ ||
19010005a ಮಿತ್ರಾವರುಣಯೋರಂಶೇ ಮುನಿರಾಹುತಿಮಾಜುಹೋತ್ |
ಭರತಸತ್ತಮ! ಆ ಇಷ್ಟಿಯು ನಡೆಯುತ್ತಿರುವಾಗ ಮುನಿಗಳು ಮಿತ್ರಾವರುಣರಿಗೆ ಆಹುತಿಯನ್ನು ಹೋಮಮಾಡಿದರು.
19010005c ಆಹುತ್ಯಾಂ ಹೂಯಮಾನಾಯಾಂ ದೇವಗಂಧರ್ವಮಾನುಶಾಃ||
19010006a ತುಷ್ಟಿಂ ತು ಪರಮಾಂ ಜಗ್ಮುರ್ಮುನಯಶ್ಚ ತಪೋಧನಾಃ |
19010006c ಅಹೋಽಸ್ಯ ತಪಸೋ ವೀರ್ಯಮಹೋಽಸ್ಯ ಶ್ರುತಮದ್ಭುತಮ್ ||
ಆಹುತಿಯನ್ನು ಹೋಮಮಾಡುತ್ತಿದ್ದಾಗ ದೇವ-ಗಂಧರ್ವ-ಮನುಷ್ಯರು ಪರಮ ತುಷ್ಟರಾದರು. “ಅಹೋ! ಇವನ ತಪಸ್ಸು ವೀರ್ಯಗಳು ಅತಿ ಮಹತ್ತರ!” ಎಂಬ ಅದ್ಭುತ ಘೋಷಗಳನ್ನು ತಪೋಧನ ಮುನಿಗಳು ಕೇಳಿದರು.
19010007a ತತ್ರ ದಿವ್ಯಾಂಬರಧರಾ ದಿವ್ಯಾಭರಣಭೂಷಿತಾ |
19010007c ದಿವ್ಯಸಂಹನನಾ ಚೈವ ಇಲಾ ಜಜ್ಞ ಇತಿ ಶ್ರುತಿಃ ||
ಅಲ್ಲಿ ದಿವ್ಯಾಂಬರಧರೆ, ದಿವ್ಯಾಭರಣಭೂಷಿತೆ, ದಿವ್ಯಶರೀರೇ ಇಲೆಯು ಹುಟ್ಟಿದಳೆಂದು ಕೇಳಿದ್ದೇವೆ.
19010008a ತಾಮಿಲೇತ್ಯೇವ ಹೋವಾಚ ಮನುರ್ದಂಡಧರಸ್ತದಾ |
19010008c ಅನುಗಚ್ಛಸ್ವ ಮಾಂ ಭದ್ರೇ ತಮಿಲಾ ಪ್ರತ್ಯುವಾಚ ಹ |
19010008e ಧರ್ಮಯುಕ್ತಮಿದಂ ವಾಕ್ಯಂ ಪುತ್ರಕಾಮಂ ಪ್ರಜಾಪತಿಮ್ ||
ಆಗ ದಂಡಧರ ಮನುವು ಇಲೆಗೆ “ಭದ್ರೇ! ನನ್ನನ್ನೇ ಅನುಸರಿಸಿ ಬಾ!” ಎಂದು ಹೇಳಿದನು. ಪುತ್ರನನ್ನು ಬಯಸಿದ್ದ ಆ ಪ್ರಜಾಪತಿಗೆ ಇಲೆಯು ಧರ್ಮಯುಕ್ತವಾದ ಈ ಮಾತನ್ನಾಡಿದಳು.
19010009 ಇಲೋವಾಚ|
19010009a ಮಿತ್ರಾವರುಣಯೋರಂಶೇ ಜಾತಾಸ್ಮಿ ವದತಾಂ ವರ |
19010009c ತಯೋಃ ಸಕಾಶಂ ಯಾಸ್ಯಾಮಿ ನ ಮಾಂ ಧರ್ಮೋ ಹತೋಽವಧೀತ್||
ಇಲೆಯು ಹೇಳಿದಳು: “ಮಾತನಾಡುವವರಲ್ಲಿ ಶ್ರೇಷ್ಠ! ನಾನು ಧರ್ಮವನ್ನು ನಾಶಗೊಳಿಸುವುದಿಲ್ಲ. ಅದೇ ನನ್ನನ್ನು ಕೊಂದೀತು! ನಾನು ಮಿತ್ರಾವರುಣರ ಅಂಶದಿಂದ ಹುಟ್ಟಿದ್ದೇನೆ. ಅವರ ಬಳಿಯೇ ಹೋಗುತ್ತೇನೆ.”
19010010a ಸೈವಮುಕ್ತ್ವಾ ಮನುಂ ದೇವಂ ಮಿತ್ರಾವರುಣಯೋರಿಲಾ |
19010010c ಗತ್ವಾಂತಿಕಂ ವರಾರೋಹಾ ಪ್ರಾಂಜಲಿರ್ವಾಕ್ಯಮಬ್ರವೀತ್ ||
ದೇವ ಮನುವಿಗೆ ಹೀಗೆ ಹೇಳಿ ವರಾರೋಹೆ ಇಲೆಯು ಮಿತ್ರಾವರುಣರ ಬಳಿಸಾರಿ ಕೈಮುಗಿದು ಈ ಮಾತನ್ನಾಡಿದಳು.
19010011 ಇಲೋವಾಚ|
19010011a ಅಂಶೇಽಸ್ಮಿ ಯುವಯೋರ್ಜಾತಾ ದೇವೌ ಕಿಂ ಕರವಾಣಿ ವಾಮ್|
19010012a ತಾಂ ತಥಾವಾದಿನೀಂ ಸಾಧ್ವೀಮಿಲಾಂ ಧರ್ಮಪರಾಯಣಾಮ್ |
19010012c ಮಿತ್ರಶ್ಚ ವರುಣಶ್ಚೋಭಾವೂಚತುರ್ಯನ್ನಿಬೋಧ ತತ್ ||
ಇಲೆಯು ಹೇಳಿದಳು: “ದೇವತೆಗಳೇ! ನಾನು ನಿಮ್ಮಅಂಶದಿಂದ ಹುಟ್ಟಿದವಳು. ನಾನು ಏನು ಮಾಡಬೇಕು ಹೇಳಿ!” ಹಾಗೆ ಹೇಳಿದ ಆ ಧರ್ಮಪರಾಯಣೇ ಸಾಧ್ವೀ ಇಲೆಗೆ ಮಿತ್ರ-ವರುಣರಿಬ್ಬರೂ ಏನು ಹೇಳಿದರೆನ್ನುವುದನ್ನು ಕೇಳು.
19010013 ಮಿತ್ರಾವರುಣಾವೂಚತುಃ|
19010013a ಅನೇನ ತವ ಧರ್ಮೇಣ ಪ್ರಶ್ರಯೇಣ ದಮೇನ ಚ |
19010013c ಸತ್ಯೇನ ಚೈವ ಸುಶ್ರೋಣಿ ಪ್ರೀತೌ ಸ್ವೋ ವರವರ್ಣಿನಿ ||
ಮಿತ್ರಾವರುಣರು ಹೇಳಿದರು: “ಸುಶ್ರೋಣೀ! ವರವರ್ಣಿನೀ! ನಿನ್ನ ಈ ಧರ್ಮ, ವಿನಯ, ಇಂದ್ರಿಯ ಸಂಯಮ ಮತ್ತು ಸತ್ಯದಿಂದ ನಾವು ಪ್ರಿತರಾಗಿದ್ದೇವೆ.
19010014a ಆವಯೋಸ್ತ್ವಂ ಮಹಾಭಾಗೇ ಖ್ಯಾತಿಂ ಕನ್ಯೇತಿ ಯಾಸ್ಯಸಿ |
19010014c ಮನೋರ್ವಂಶಧರಃ ಪುತ್ರಸ್ತ್ವಮೇವ ಚ ಭವಿಷ್ಯಸಿ ||
ಮಹಾಭಾಗೇ! ನೀನು ನಮ್ಮ ಕನ್ಯೆಯೆಂದು ಖ್ಯಾತಿಯನ್ನು ಹೊಂದುತ್ತೀಯೆ. ಅಲ್ಲದೇ ಭವಿಷ್ಯದಲ್ಲಿ ಮನುವಿನ ವಂಶೋದ್ಧಾರಕ ಪುತ್ರನೂ ಆಗುತ್ತೀಯೆ.
19010015a ಸುದ್ಯುಮ್ನ ಇತಿ ವಿಖ್ಯಾತಸ್ತ್ರಿಷು ಲೋಕೇಷು ಶೋಭನೇ |
19010015c ಜಗತ್ಪ್ರಿಯೋ ಧರ್ಮಶೀಲೋ ಮನೋರ್ವಂಶವಿವರ್ಧನಃ ||
ಶೋಭನೇ! ನೀನು ಜಗತ್ತಿಗೇ ಪ್ರಿಯನಾದ ಧರ್ಮಶೀಲನಾದ ಮತ್ತು ಮನುವಿನ ವಂಶವನ್ನು ವರ್ಧಿಸುವ ಸುದ್ಯುಮ್ನ ಎಂದು ಮೂರು ಲೋಕಗಳಲ್ಲಿ ವಿಖ್ಯಾತಳಾಗುವೆ!”
19010016a ನಿವೃತ್ತಾ ಸಾ ತು ತಚ್ಛ್ರುತ್ವಾ ಗಚ್ಛಂತೀ ಪಿತುರಂತಿಕಮ್ |
19010016c ಬುಧೇನಾಂತರಮಾಸಾದ್ಯ ಮೈಥುನಾಯೋಪಮಂತ್ರಿತಾ ||
ಅದನ್ನು ಕೇಳಿದ ಅವಳು ತಂದೆಯ ಬಳಿಗೆ ಹಿಂದಿರುತ್ತಿದ್ದಾಗ ಮಧ್ಯಮಾರ್ಗದಲ್ಲಿಯೇ ಬುಧನು ಅವಳ ಬಳಿಸಾರಿ ಮೈಥುನಕ್ಕೆ ಆಮಂತ್ರಿಸಿದನು.
19010017a ಸೋಮಪುತ್ರಾದ್ಬುಧಾದ್ರಾಜಂಸ್ತಸ್ಯಾಂ ಜಜ್ಞೇ ಪುರೂರವಾಃ |
19010017c ಜನಯಿತ್ವಾ ಸುತಂ ಸಾ ತಮಿಲಾ ಸುದ್ಯುಮ್ನತಾಂ ಗತಾ ||
ರಾಜನ್! ಸೋಮಪುತ್ರ ಬುಧನಿಂದ ಅವಳಲ್ಲಿ ಪುರೂರವನು ಜನಿಸಿದನು. ಮಗನನ್ನು ಹೆತ್ತು ಇಲೆಯು ನಂತರ ಸುದ್ಯುಮ್ನನಾದಳು.
19010018a ಸುದ್ಯುಮ್ನಸ್ಯ ತು ದಾಯಾದಾಸ್ತ್ರಯಃ ಪರಮಧಾರ್ಮಿಕಾಃ |
19010018c ಉತ್ಕಲಶ್ಚ ಗಯಶ್ಚೈವ ವಿನತಾಶ್ವಶ್ಚ ಭಾರತ ||
ಭಾರತ! ಸುದ್ಯುಮ್ನನಿಗೆ ಮೂರು ಪರಮಧಾರ್ಮಿಕ ಪುತ್ರರಾದರು: ಉತ್ಕಲ, ಗಯ ಮತ್ತು ವಿನತಾಶ್ವ.
19010019a ಉತ್ಕಲಸ್ಯೋತ್ಕಲಾ ರಾಜನ್ವಿನತಾಶ್ವಸ್ಯ ಪಶ್ಚಿಮಾ |
19010019c ದಿಕ್ಪೂರ್ವಾ ಭರತಶ್ರೇಷ್ಠ ಗಯಸ್ಯ ತು ಗಯಾ ಪುರೀ ||
ರಾಜನ್! ಭರತಶ್ರೇಷ್ಠ! ಉತ್ಕಲನ ರಾಜ್ಯವು ಉತ್ಕಲವಾಯಿತು. ವಿನತಾಶ್ವನು ಪಶ್ಚಿಮ ರಾಜ್ಯವನ್ನಾಳಿದನು. ಗಯನು ಪೂರ್ವದಿಕ್ಕಿನಲ್ಲಿ ಗಯಾ ಪುರಿಯಲ್ಲಿ ರಾಜ್ಯವಾಳಿದನು.
19010020a ಪ್ರವಿಷ್ಟೇ ತು ಮನೌ ತಾತ ದಿವಾಕರಮರಿಂದಮ |
19010020c ದಶಧಾ ತದ್ದಧತ್ಕ್ಷತ್ರಮಕರೋತ್ಪೃಥಿವೀಮಿಮಾಮ್ ||
ತಾತ! ಅರಿಂದಮ! ಮನುವು ದಿವಾಕರನನ್ನು ಪ್ರವೇಶಿಸಿದಾಗ ಅವನ ಹತ್ತು ಪುತ್ರರು ಈ ಭೂಮಿಯನ್ನು ಹತ್ತು ಭಾಗಗಳನ್ನಾಗಿ ವಿಭಾಜಿಸಿದರು.
19010021a ಯೂಪಾಂಕಿತಾ ವಸುಮತೀ ಯಸ್ಯೇಯಂ ಸವನಾಕರಾ |
19010021c ಇಕ್ಷ್ವಾಕುರ್ಜ್ಯೇಷ್ಠದಾಯಾದೋ ಮಧ್ಯದೇಶಮವಾಪ್ತವಾನ್ ||
ಜ್ಯೇಷ್ಠ ಪುತ್ರ ಇಕ್ಷ್ವಾಕುವು ಮಧ್ಯದೇಶವನ್ನು ಪಡೆದನು. ಯಜ್ಞಸ್ತಂಭಗಳಿಂದ ಅಲಂಕೃತಗೊಂಡಿರುವ ಮತ್ತು ಕೋನೆಗಳನ್ನು ಹೊಂದಿರುವ ಈ ವಸುಮತಿಯು ಅವನದ್ದೇ ಆಗಿದೆ.
19010022a ಕನ್ಯಾಭಾವಾಚ್ಚ ಸುದ್ಯುಮ್ನೋ ನೈನಂ ಗುಣಮವಾಪ್ತವಾನ್ |
19010022c ವಸಿಷ್ಠವಚನಾಚ್ಚಾಸೀತ್ಪ್ರತಿಷ್ಠಾನೇ ಮಹಾತ್ಮನಃ ||
ಕನ್ಯಾಭಾವವಿದ್ದ ಸುದ್ಯುಮ್ನನಿಗೆ ರಾಜ್ಯವು ದೊರಕಲಿಲ್ಲ. ಆದರೆ ವಸಿಷ್ಠನ ವಚನದಂತೆ ಆ ಮಹಾತ್ಮನು ಪ್ರತಿಷ್ಠಾನ[1]ದಲ್ಲಿ ವಾಸಿಸಿದನು.
19010023a ಪ್ರತಿಷ್ಠಾ ಧರ್ಮರಾಜಸ್ಯ ಸುದ್ಯುಮ್ನಸ್ಯ ಕುರೂದ್ವಹ |
19010023c ತತ್ಪುರೂರವಸೇ ಪ್ರಾದಾದ್ರಾಜ್ಯಂ ಪ್ರಾಪ್ಯ ಮಹಾಯಶಾಃ ||
19010024a ಸುದ್ಯುಮ್ನಃ ಕಾರಯಾಮಾಸ ಪ್ರತಿಷ್ಠಾನೇ ನೃಪಕ್ರಿಯಾಮ್ |
ಕುರೂದ್ವಹ! ಧರ್ಮರಾಜ ಸುದ್ಯುಮ್ನನು ಪ್ರತಿಷ್ಠಾನದಲ್ಲಿ ರಾಜ್ಯಭಾರಮಾಡಿ ನಂತರ ಅದನ್ನು ಮಹಾಯಶಸ್ವೀ ಪುರೂರವನಿಗೆ ಕೊಟ್ಟನು.
9010024c ಉತ್ಕಲಸ್ಯ ತ್ರಯಃ ಪುತ್ರಾಸ್ತ್ರಿಷು ಲೋಕೇಷು ವಿಶ್ರುತಾಃ |
19010024e ಧೃಷ್ಟಕಶ್ಚಾಂಬರೀಷಶ್ಚ ದಂಡಶ್ಚೇತಿ ಸುತಾಸ್ತ್ರಯಃ ||
ಉತ್ಕಲನಿಗೆ ಲೋಕಗಳಲ್ಲಿ ವಿಶ್ರುತರಾದ ಮೂರು ಪುತ್ರರಿದ್ದರು: ಧೃಷ್ಟಕ, ಅಂಬರೀಷ, ಮತ್ತು ದಂಡ ಇವರೇ ಆ ಮೂರು ಸುತರು.
19010025a ಯಶ್ಚಕಾರ ಮಹಾತ್ಮಾ ವೈ ದಂಡಕಾರಣ್ಯಮುತ್ತಮಮ್ |
19010025c ವನಂ ತಲ್ಲೋಕವಿಖ್ಯಾತಂ ತಾಪಸಾನಾಮನುತ್ತಮಮ್ ||
19010026a ತತ್ರ ಪ್ರವಿಷ್ಟಮಾತ್ರಸ್ತು ನರಃ ಪಾಪಾತ್ಪ್ರಮುಚ್ಯತೇ |
ಮಹಾತ್ಮಾ ದಂಡನು ತಾಪಸರಿಗೆ ಅನುತ್ತಮವಾದ ಮತ್ತು ಲೋಕವಿಖ್ಯಾತವಾದ ಉತ್ತಮ ದಂಡಕಾರಣ್ಯವನ್ನು ನಿರ್ಮಿಸಿದನು. ಅದರ ಪ್ರವೇಶಮಾತ್ರದಿಂದಲೇ ನರನು ಪಾಪಗಳಿಂದ ಮುಕ್ತನಾಗುತ್ತಾನೆ.
19010026c ಸುದ್ಯುಮ್ನಶ್ಚ ದಿವಂ ಯಾತ ಐಲಮುತ್ಪಾದ್ಯ ಭಾರತ ||
19010027a ಮಾನವೇಯೋ ಮಹಾರಾಜ ಸ್ತ್ರೀಪುಂಸೋರ್ಲಕ್ಷಣೈರ್ಯುತಃ|
19010027c ಧೃತವಾನ್ಯ ಇಲೇತ್ಯೇವ ಸುದ್ಯುಮ್ನಶ್ಚಾತಿವಿಶ್ರುತಃ ||
ಮಹಾರಾಜ! ಭಾರತ! ಸ್ತ್ರೀ ಮತ್ತು ಪುರುಷ ಇಬ್ಬರ ಲಕ್ಷಣಗಳನ್ನೂ ಹೊಂದಿದ್ದ ಮನುವಿನ ಮಗ ಸುದ್ಯುಮ್ನನು ಐಲ ಪುರೂರವನನ್ನು ಹುಟ್ಟಿಸಿ ದಿವವನ್ನು ಸೇರಿದನು. ಇಲೆಯು ಧೃತವಾನ್ ಸುದ್ಯುಮ್ನನೆಂದೂ ವಿಶ್ರುತಳಾಗಿದ್ದಳು.
19010028a ನಾರಿಷ್ಯತಃ ಶಕಾಃ ಪುತ್ರಾ ನಾಭಾಗಸ್ಯ ತು ಭಾರತ |
19010028c ಅಂಬರೀಷೋಽಭವತ್ಪುತ್ರಃ ಪಾರ್ಥಿವರ್ಷಭಸತ್ತಮಃ ||
ಭಾರತ! ಮನುವಿನ ಐದನೆಯ ಪುತ್ರ ನರಿಷ್ಯನ ಪುತ್ರನು ಶಕ. ಮನುವಿನ ಎರಡನೇ ಪುತ್ರ ನಭಾಗನ ಪುತ್ರನು ಪಾರ್ಥಿವರ್ಷಭಸತ್ತಮ ಅಂಬರೀಷ.
19010029a ಧೃಷ್ಣೋಸ್ತು ಧಾರ್ಷ್ಟಕಂ ಕ್ಷತ್ರಂ ರಣದೃಷ್ಟಂ ಬಭೂವ ಹ |
19010029c ಕರೂಷಸ್ಯ ತು ಕಾರೂಷಾಃ ಕ್ಷತ್ರಿಯಾ ಯುದ್ಧದುರ್ಮದಾಃ ||
ಮನುವಿನ ಇನ್ನೊಬ್ಬ ಪುತ್ರ ಧೃಷ್ಣುವಿಗೆ ಧಾರ್ಷ್ಟಕನೆಂಬ ಕ್ಷತ್ರಿಯ ಮಗನಿದ್ದನು. ಅವನು ರಣದೃಷ್ಟನಾದನು. ಮನುವಿನ ಮಗ ಕರೂಷನ ಮಕ್ಕಳು ಯುದ್ಧದುರ್ಮದರಾದ ಕ್ಷತ್ರಿಯ ಕಾರೂಷರು.
19010030a ಸಹಸ್ರಂ ಕ್ಷತ್ರಿಯಗಣೋ ವಿಕ್ರಾಂತಃ ಸಂಬಭೂವ ಹ |
19010030c ನಾಭಾಗಾರಿಷ್ಟಪುತ್ರಾಶ್ಚ ಕ್ಷತ್ರಿಯಾ ವೈಶ್ಯತಾಂ ಗತಾಃ ||
ಅವರು ವಿಕ್ರಾಂತರಾದ ಸಾವಿರ ಕ್ಷತ್ರಿಯಗಣಗಳಾದರು. ನಾಭಾಗಾರಿಷ್ಟನ ಕ್ಷತ್ರಿಯ ಪುತ್ರನು ವೈಶ್ಯತ್ವವನ್ನು ಪಡೆದುಕೊಂಡನು.
19010031a ಪ್ರಾಂಶೋರೇಕೋಽಭವತ್ಪುತ್ರಃ ಶರ್ಯಾತಿರಿತಿ ವಿಶ್ರುತಃ |
19010031c ನರಿಷ್ಯತಸ್ಯ ದಾಯಾದೋ ರಾಜಾ ದಂಡಧರೋ ದಮಃ |
ಮನುವಿನ ಇನ್ನೊಬ್ಬ ಮಗ ಪ್ರಾಂಶುವಿಗೆ ಶರ್ಯಾತಿ[2]ಯೆಂದು ವಿಶ್ರುತನಾದ ಒಬ್ಬನೇ ಮಗನಿದ್ದನು. ಮನುವಿನ ಮಗ ನರಿಷ್ಯತನ ಮಗನು ರಾಜಾ ದಂಡಧಾರೀ ದಮನು.
19010031e ಶರ್ಯಾತೇರ್ಮಿಥುನಂ ಚಾಸೀದಾನರ್ತೋ ನಾಮ ವಿಶ್ರುತಃ||
19010032a ಪುತ್ರಃ ಕನ್ಯಾ ಸುಕನ್ಯಾಖ್ಯಾ ಯಾ ಪತ್ನೀ ಚ್ಯವನಸ್ಯ ಹ |
19010032c ಆನರ್ತಸ್ಯ ತು ದಾಯಾದೋ ರೇವೋ ನಾಮ ಮಹಾದ್ಯುತಿಃ ||
ಮನುವಿನ ಮಗ ಶರ್ಯಾತಿಗೆ ಅವಳಿಗಳಾದರು. ಅವರಲ್ಲಿ ಒಬ್ಬನು ಮಗ ಆನರ್ತ ಎಂಬ ಹೆಸರಿನಿಂದ ಪ್ರಸಿದ್ಧನಾದನು. ಇನ್ನೊಬ್ಬಳು ಕನ್ಯೆ ಸುಕನ್ಯೆಯೆಂಬ ಹೆಸರಿನವಳು. ಅವಳು ಚ್ಯವನನ ಪತ್ನಿಯಾದಳು.
19010033a ಆನರ್ತವಿಷಯಶ್ಚಾಸೀತ್ಪುರೀ ಚಾಸ್ಯ ಕುಶಸ್ಥಲೀ |
19010033c ರೇವಸ್ಯ ರೈವತಃ ಪುತ್ರಃ ಕಕುದ್ಮೀ ನಾಮ ಧಾರ್ಮಿಕಃ ||
ಆನರ್ತನ ರಾಜ್ಯವು ಆನರ್ತ[3]ವೆನಿಸಿತು. ಅವನ ಪುರಿಯು ಕುಶಸ್ಥಲಿಯಾಗಿತ್ತು. ರೇವನಿಗೆ ರೈವತನೆಂಬ ಪುತ್ರನಿದ್ದನು. ಕುಕುದ್ಮೀ ಎಂಬ ಹೆಸರಿದ್ದ ಅವನು ಧಾರ್ಮಿಕನಾಗಿದ್ದನು.
19010034a ಜ್ಯೇಷ್ಠಃ ಪುತ್ರಶತಸ್ಯಾಸೀದ್ರಾಜ್ಯಂ ಪ್ರಾಪ್ಯ ಕುಶಸ್ಥಲೀಮ್ |
19010034c ಸ ಕನ್ಯಾಸಹಿತಃ ಶ್ರುತ್ವಾ ಗಾಂಧರ್ವಂ ಬ್ರಹ್ಮಣೋಽಂತಿಕೇ ||
ಅವನು ನೂರು ಪುತ್ರರಲ್ಲಿ ಜ್ಯೇಷ್ಠನಾಗಿದ್ದನು. ಕುಶಸ್ಥಲಿಯನ್ನು ಪಡೆದು ಅವನು ತನ್ನ ಕನ್ಯೆಯ ಸಹಿತ ಗಾಂಧರ್ವ ಗಾನವನ್ನು ಕೇಳಲು ಬ್ರಹ್ಮನ ಬಳಿ ಹೋಗಿದ್ದನು.
19010035a ಮುಹೂರ್ತಭೂತಂ ದೇವಸ್ಯ ಗತಂ ಬಹುಯುಗಂ ಪ್ರಭೋ |
19010035c ಆಜಗಾಮಯುವೈವಾಥ ಸ್ವಾಂ ಪುರೀಂ ಯಾದವೈರ್ವೃತಾಮ್ ||
ಪ್ರಭೋ! ಒಂದು ಮುಹೂರ್ತಮಾತ್ರ ಅವನು ಬ್ರಹ್ಮನಲ್ಲಿಗೆ ಹೋಗಿರಲು ಮಾನವ ಲೋಕದಲ್ಲಿ ಅನೇಕ ಯುಗಗಳು ಕಳೆದುಹೋಗಿದ್ದವು. ಅವನು ತನ್ನ ಪುರಿಗೆ ಹಿಂದಿರುಗಿದಾಗ ಅದು ಯಾದವರಿಂದ ತುಂಬಿಹೋಗಿತ್ತು.
19010036a ಕೃತಾಂ ದ್ವಾರವತೀಂ ನಾಮ್ನಾ ಬಹುದ್ವಾರಾಂ ಮನೋರಮಾಮ್ |
19010036c ಭೋಜವೃಷ್ಣ್ಯಂಧಕೈರ್ಗುಪ್ತಾಂ ವಾಸುದೇವಪುರೋಗಮೈಃ ||
ಅಲ್ಲಿ ಬಹುದ್ವಾರಗಳಿಂದ ಕೂಡಿದ್ದ ದ್ವಾರವತೀ ಎಂಬ ಮನೋಹರ ನಗರವನ್ನು ನಿರ್ಮಿಸಿಕೊಂಡು ವಾಸುದೇವನ ನಾಯಕತ್ವದಲ್ಲಿ ಭೋಜ-ವೃಷ್ಣಿ-ಅಂಧಕರು ಸುರಕ್ಷಿತರಾಗಿದ್ದರು.
19010037a ತತಃ ಸ ರೈವತೋ ಜ್ಞಾತ್ವಾ ಯಥಾತತ್ತ್ವಮರಿಂದಮ |
19010037c ಕನ್ಯಾಂ ತಾಂ ಬಲದೇವಾಯ ಸುವ್ರತಾಂ ನಾಮ ರೇವತೀಮ್||
19010038a ದತ್ತ್ವಾ ಜಗಾಮ ಶಿಖರಂ ಮೇರೋಸ್ತಪಸಿ ಸಂಸ್ಥಿತಃ |
19010038c ರೇಮೇ ರಾಮೋಽಪಿ ಧರ್ಮಾತ್ಮಾ ರೇವತ್ಯಾ ಸಹಿತಃ ಸುಖೀ||
ಅರಿಂದಮ! ಆಗ ರೈವತನು ಯಥಾತತ್ತ್ವನ್ನು ತಿಳಿದುಕೊಂಡು ತನ್ನ ಕನ್ಯೆ ಸುವ್ರತಾ ಎಂಬ ಹೆಸರಿನ ರೇವತಿಯನ್ನು ಬಲದೇವನಿಗೆ ಕೊಟ್ಟು ಹೋದನು. ಅವನು ಮೇರುಪರ್ವತದಲ್ಲಿ ತಪೋನಿರತನಾಗಿದ್ದಾನೆ. ಧರ್ಮಾತ್ಮ ರಾಮನಾದರೋ ರೇವತಿಯೊಡನೆ ಸುಖವಾಗಿ ರಮಿಸಿದನು.”
ಇತಿ ಶ್ರೀಮಹಾಭಾರತೇ ಖಿಲಭಾಗೇ ಹರಿವಂಶೇ ಹರಿವಂಶಪರ್ವಣಿ ಐಲೋತ್ಪತ್ತಿವರ್ಣನಂ ನಾಮ ದಶಮೋಽಧ್ಯಾಯಃ |
ಇದು ಶ್ರೀಮಹಾಭಾರತದ ಖಿಲಭಾಗ ಹರಿವಂಶದಲ್ಲಿ ಹರಿವಂಶಪರ್ವದಲ್ಲಿ ಐಲೋತ್ಪತ್ತಿವರ್ಣನ ಎನ್ನುವ ಹತ್ತನೆಯ ಅಧ್ಯಾಯವು.
[1] ಈಗಿನ ಪ್ರಯಾಗಸ್ಥಾನ.
[2] ಈ ಶರ್ಯಾತಿಯೇ ಬೇರೆ. ಮನುವಿನ ಮಗ, ಚ್ಯವನನ ಪತ್ನಿ ಸುಕನ್ಯೆಯ ತಂದೆ, ಮನುವಿನ ಮಗ ಶರ್ಯಾತಿಯೇ ಬೇರೆ.
[3] ಈಗ ದ್ವಾರಕೆಯಿರುವ ಪ್ರದೇಶ.