ಅನುಶಾಸನ ಪರ್ವ: ದಾನಧರ್ಮ ಪರ್ವ
೧೦೩
ನಹುಷನ ಪತನ, ಶತಕ್ರತುವನ್ನು ಇಂದ್ರಪದವಿಯಲ್ಲಿ ಪುನಃ ಅಭಿಷೇಕಿಸಿದುದು; ದೀಪದಾನದ ಮಹಿಮೆ (೧-೩೭).
13103001 ಯುಧಿಷ್ಠಿರ ಉವಾಚ|
13103001a ಕಥಂ ಸ ವೈ ವಿಪನ್ನಶ್ಚ ಕಥಂ ವೈ ಪಾತಿತೋ ಭುವಿ|
13103001c ಕಥಂ ಚಾನಿಂದ್ರತಾಂ ಪ್ರಾಪ್ತಸ್ತದ್ಭವಾನ್ವಕ್ತುಮರ್ಹತಿ||
ಯುಧಿಷ್ಠಿರನು ಹೇಳಿದನು: “ನಹುಷನು ಹೇಗೆ ವಿಪತ್ತಿಗೊಳಗಾದನು? ಅವನು ಹೇಗೆ ಭೂಮಿಯ ಮೇಲೆ ಬಿದ್ದನು ಮತ್ತು ಅನಿಂದ್ರತ್ವವನ್ನು ಹೊಂದಿದನು? ಇದರ ಕುರಿತು ಹೇಳಬೇಕು.”
13103002 ಭೀಷ್ಮ ಉವಾಚ|
13103002a ಏವಂ ತಯೋಃ ಸಂವದತೋಃ ಕ್ರಿಯಾಸ್ತಸ್ಯ ಮಹಾತ್ಮನಃ|
13103002c ಸರ್ವಾ ಏವಾಭ್ಯವರ್ತಂತ ಯಾ ದಿವ್ಯಾ ಯಾಶ್ಚ ಮಾನುಷಾಃ||
ಭೀಷ್ಮನು ಹೇಳಿದನು: “ಹೀಗೆ ಭೃಗು ಮತ್ತು ಅಗಸ್ತ್ಯರು ಮಾತನಾಡಿಕೊಳ್ಳುತ್ತಿರುವಾಗ ಆ ಮಹಾತ್ಮಾ ನಹುಷನ ಮನೆಯಲ್ಲಿ ದಿವ್ಯ ಮತ್ತು ಮಾನುಷ ಕ್ರಿಯೆಗಳೆಲ್ಲವೂ ನಡೆಯುತ್ತಿದ್ದವು.
13103003a ತಥೈವ ದೀಪದಾನಾನಿ ಸರ್ವೋಪಕರಣಾನಿ ಚ|
13103003c ಬಲಿಕರ್ಮ ಚ ಯಚ್ಚಾನ್ಯದುತ್ಸೇಕಾಶ್ಚ ಪೃಥಗ್ವಿಧಾಃ||
13103003e ಸರ್ವಾಸ್ತಸ್ಯ ಸಮುತ್ಪನ್ನಾ ದೇವರಾಜ್ಞೋ ಮಹಾತ್ಮನಃ|
13103004a ದೇವಲೋಕೇ ನೃಲೋಕೇ ಚ ಸದಾಚಾರಾ ಬುಧೈಃ ಸ್ಮೃತಾಃ||
ದೀಪದಾನ, ಸರ್ವೋಪಕರಣಗಳ ಸಹಿತ ಬಲಿಕರ್ಮ, ಮತ್ತು ವಿವಿಧ ಪ್ರಕಾರದ ಸ್ನಾನ-ಅಭಿಷೇಕ ಮೊದಲಾದವುಗಳು ಹಿಂದಿನಂತೆಯೇ ಪ್ರಾರಂಭಗೊಂಡಿದ್ದವು. ದೇವಲೋಕ ಮತ್ತು ನರಲೋಕಗಳಲ್ಲಿ ವಿದ್ವಾಂಸರು ಸದಾಚಾರಗಳೆಂದು ಹೇಳಿದ್ದ ಎಲ್ಲವೂ ಆ ಮಹಾತ್ಮ ದೇವರಾಜ ನಹುಷನಲ್ಲಿ ನಡೆಯುತ್ತಿದ್ದವು.
13103004c ತೇ ಚೇದ್ಭವಂತಿ ರಾಜೇಂದ್ರ ಋಧ್ಯಂತೇ ಗೃಹಮೇಧಿನಃ|
13103004e ಧೂಪಪ್ರದಾನೈರ್ದೀಪೈಶ್ಚ ನಮಸ್ಕಾರೈಸ್ತಥೈವ ಚ||
ರಾಜೇಂದ್ರ! ಗೃಹಸ್ಥನ ಮನೆಯಲ್ಲಿ ಧೂಪದಾನ, ದೀಪದಾನ ಮತ್ತು ನಮಸ್ಕಾರಗಳೇ ಮೊದಲಾದ ಸದಾಚಾರಗಳ ಪಾಲನೆಯಾಗುತ್ತಿದ್ದರೆ ಆ ಗೃಹಸ್ಥನು ಸರ್ವಥಾ ಉನ್ನತಿಯನ್ನು ಹೊಂದುತ್ತಾನೆ.
13103005a ಯಥಾ ಸಿದ್ಧಸ್ಯ ಚಾನ್ನಸ್ಯ ದ್ವಿಜಾಯಾಗ್ರಂ[1] ಪ್ರದೀಯತೇ|
13103005c ಬಲಯಶ್ಚ ಗೃಹೋದ್ದೇಶೇ ಅತಃ ಪ್ರೀಯಂತಿ ದೇವತಾಃ||
ತಯಾರಾದ ಅಡುಗೆಯನ್ನು ಹೇಗೆ ಮೊದಲು ಬ್ರಾಹ್ಮಣರಿಗೆ ಬಡಿಸುತ್ತಾರೋ ಹಾಗೆ ಮನೆಯಲ್ಲಿ ದೇವತೆಗಳಿಗೆ ಅನ್ನದ ಬಲಿಯನ್ನು ಕೊಡುತ್ತಾರೆ. ಅದರಿಂದ ದೇವತೆಗಳು ಪ್ರೀತರಾಗುತ್ತಾರೆ.
13103006a ಯಥಾ ಚ ಗೃಹಿಣಸ್ತೋಷೋ ಭವೇದ್ವೈ ಬಲಿಕರ್ಮಣಾ|
13103006c ತಥಾ ಶತಗುಣಾ ಪ್ರೀತಿರ್ದೇವತಾನಾಂ ಸ್ಮ ಜಾಯತೇ||
ಬಲಿಕರ್ಮಗಳನ್ನು ಮಾಡುವುದರಿಂದ ಗೃಹಸ್ಥನಿಗೆ ಎಷ್ಟು ಸಂತೋಷವಾಗುತ್ತದೆಯೋ ಅದಕ್ಕೂ ನೂರು ಪಟ್ಟು ಸಂತೋಷವು ದೇವತೆಗಳಿಗಾಗುತ್ತದೆ.
13103007a ಏವಂ ಧೂಪಪ್ರದಾನಂ ಚ ದೀಪದಾನಂ ಚ ಸಾಧವಃ|
13103007c ಪ್ರಶಂಸಂತಿ ನಮಸ್ಕಾರೈರ್ಯುಕ್ತಮಾತ್ಮಗುಣಾವಹಮ್||
ಹೀಗೆ ಸಾಧುಜನರು ತಮಗೆ ಗುಣದಾಯಕವಾದ ದೇವತೆಗಳಿಗೆ ನಮಸ್ಕಾರ ಮತ್ತು ಅವರಿಗೆ ಧೂಪ-ದೀಪಗಳನ್ನು ನೀಡುವುದನ್ನು ಪ್ರಶಂಸಿಸುತ್ತಾರೆ.
13103008a ಸ್ನಾನೇನಾದ್ಭಿಶ್ಚ ಯತ್ಕರ್ಮ ಕ್ರಿಯತೇ ವೈ ವಿಪಶ್ಚಿತಾ|
13103008c ನಮಸ್ಕಾರಪ್ರಯುಕ್ತೇನ ತೇನ ಪ್ರೀಯಂತಿ ದೇವತಾಃ|
[2]13103008e ಗೃಹ್ಯಾಶ್ಚ ದೇವತಾಃ ಸರ್ವಾಃ ಪ್ರೀಯಂತೇ ವಿಧಿನಾರ್ಚಿತಾಃ||
ವಿದ್ವಾಂಸರು ನೀರಿನಿಂದ ಸ್ನಾನ ಮಾಡಿ ದೇವತೆಗಳಿಗೆ ಮಾಡುವ ನಮಸ್ಕಾರ ಪೂರ್ವಕ ತರ್ಪಣಾದಿ ಕರ್ಮಗಳಿಂದ ದೇವತೆಗಳು ಸಂತುಷ್ಟರಾಗುತ್ತಾರೆ. ಮನೆಯಲ್ಲಿ ವಿಧಿಪೂರ್ವಕ ಅರ್ಚಿತರಾದ ದೇವತೆಗಳೆಲ್ಲರೂ ಪ್ರೀತರಾಗುತ್ತಾರೆ.
13103009a ಇತ್ಯೇತಾಂ ಬುದ್ಧಿಮಾಸ್ಥಾಯ ನಹುಷಃ ಸ ನರೇಶ್ವರಃ|
13103009c ಸುರೇಂದ್ರತ್ವಂ ಮಹತ್ ಪ್ರಾಪ್ಯ ಕೃತವಾನೇತದದ್ಭುತಮ್||
ಇದೇ ವಿಚಾರವನ್ನು ತಾಳಿ ನರೇಶ್ವರ ನಹುಷನು ಮಹಾ ಸುರೇಂದ್ರತ್ವವನ್ನು ಪಡೆದುಕೊಂಡು ಆ ಅದ್ಭುತಕರ್ಮವನ್ನು ನಡೆಸಿಕೊಂಡು ಹೋಗುತ್ತಿದ್ದನು.
13103010a ಕಸ್ಯ ಚಿತ್ತ್ವಥ ಕಾಲಸ್ಯ ಭಾಗ್ಯಕ್ಷಯ ಉಪಸ್ಥಿತೇ|
13103010c ಸರ್ವಮೇತದವಜ್ಞಾಯ ನ ಚಕಾರೈತದೀದೃಶಮ್||
ಆದರೆ ಸ್ವಲ್ಪ ಸಮಯದ ನಂತರ ಅವನ ಭಾಗ್ಯಕ್ಷಯದ ಕಾಲವು ಬರಲು ಇವೆಲ್ಲವನ್ನೂ ಅಲ್ಲಗಳೆದು ಈ ತರಹದ ಪಾಪಕರ್ಮವನ್ನು ಮಾಡತೊಡಗಿದನು.
13103011a ತತಃ ಸ ಪರಿಹೀಣೋಽಭೂತ್ಸುರೇಂದ್ರೋ ಬಲಿಕರ್ಮತಃ[3]|
13103011c ಧೂಪದೀಪೋದಕವಿಧಿಂ ನ ಯಥಾವಚ್ಚಕಾರ ಹ|
13103011e ತತೋಽಸ್ಯ ಯಜ್ಞವಿಷಯೋ ರಕ್ಷೋಭಿಃ ಪರ್ಯಬಾಧ್ಯತ||
ಆಗ ಆ ಸುರೇಂದ್ರನು ಬಲಿಕರ್ಮಗಳಿಂದ, ಧೂಪದೀಪೋದಕವಿಧಿಗಳನ್ನು ಮಾಡದೇ ಸತ್ಕರ್ಮಗಳಿಂದ ವಿಹೀನನಾದನು. ಆಗ ಅವನ ಯಜ್ಞಶಾಲೆಗಳಿಗೆ ರಾಕ್ಷಸರೂ ಬಂದು ಬಾಧಿಸತೊಡಗಿದರು.
13103012a ಅಥಾಗಸ್ತ್ಯಮೃಷಿಶ್ರೇಷ್ಠಂ ವಾಹನಾಯಾಜುಹಾವ ಹ|
13103012c ದ್ರುತಂ ಸರಸ್ವತೀಕೂಲಾತ್ ಸ್ಮಯನ್ನಿವ ಮಹಾಬಲಃ||
ಆಗ ಆ ಮಹಾಬಲನು ನಸುನಗುತ್ತಾ ಋಷಿಶ್ರೇಷ್ಠ ಅಗಸ್ತ್ಯನನ್ನು ತನ್ನ ರಥಕ್ಕೆ ಕಟ್ಟಿ ಸರಸ್ವತೀ ತಟಕ್ಕೆ ತನ್ನನ್ನು ಕೊಂಡೊಯ್ಯಲು ಹೇಳಿದನು.
13103013a ತತೋ ಭೃಗುರ್ಮಹಾತೇಜಾ ಮೈತ್ರಾವರುಣಿಮಬ್ರವೀತ್|
13103013c ನಿಮೀಲಯಸ್ವ ನಯನೇ ಜಟಾ ಯಾವದ್ವಿಶಾಮಿ ತೇ||
ಆಗ ಮಹಾತೇಜಸ್ವೀ ಭೃಗುವು ಮೈತ್ರಾವರುಣೀ ಅಗಸ್ತ್ಯನಿಗೆ ಹೇಳಿದನು: “ನಾನು ನಿನ್ನ ಜಟೆಯನ್ನು ಪ್ರವೇಶಿಸುವ ವರೆಗೆ ನಿನ್ನ ಕಣ್ಣುಗಳನ್ನು ಮುಚ್ಚಬೇಡ!”
13103014a ಸ್ಥಾಣುಭೂತಸ್ಯ ತಸ್ಯಾಥ ಜಟಾಃ ಪ್ರಾವಿಶದಚ್ಯುತಃ|
13103014c ಭೃಗುಃ ಸ ಸುಮಹಾತೇಜಾಃ ಪಾತನಾಯ ನೃಪಸ್ಯ ಹ||
ಸ್ಥಾಣುವಿನಂತೆ ನಿಂತಿದ್ದ ಅವನ ಜಟೆಯನ್ನು ಅಚ್ಯುತ ಸುಮಹಾತೇಜಸ್ವೀ ಭೃಗುವು ನೃಪನನ್ನು ಕೆಳಗುರುಳಿಸುವ ಸಲುವಾಗಿ ಪ್ರವೇಶಿಸಿದನು.
13103015a ತತಃ ಸ ದೇವರಾಟ್ ಪ್ರಾಪ್ತಸ್ತಮೃಷಿಂ ವಾಹನಾಯ ವೈ|
13103015c ತತೋಽಗಸ್ತ್ಯಃ ಸುರಪತಿಂ ವಾಕ್ಯಮಾಹ ವಿಶಾಂ ಪತೇ||
ದೇವರಾಜನು ವಾಹನವನ್ನಾಗಿ ಮಾಡಿಕೊಳ್ಳಲು ಆ ಋಷಿಯ ಸಮೀಪ ಬಂದನು. ವಿಶಾಂಪತೇ! ಆಗ ಅಗಸ್ತ್ಯನು ಸುರಪತಿಗೆ ಈ ಮಾತನ್ನಾಡಿದನು:
13103016a ಯೋಜಯಸ್ವೇಂದ್ರ ಮಾಂ ಕ್ಷಿಪ್ರಂ ಕಂ ಚ ದೇಶಂ ವಹಾಮಿ ತೇ|
13103016c ಯತ್ರ ವಕ್ಷ್ಯಸಿ ತತ್ರ ತ್ವಾಂ ನಯಿಷ್ಯಾಮಿ ಸುರಾಧಿಪ||
“ಇಂದ್ರ! ಶೀಘ್ರವಾಗಿ ನನ್ನನ್ನು ಹೂಡು ಮತ್ತು ಎಲ್ಲಿಗೆ ಒಯ್ಯಬೇಕು ಎನ್ನುವುದನ್ನೂ ಹೇಳು. ಸುರಾಧಿಪ! ನೀನು ಎಲ್ಲಿಗೆ ಹೋಗಬೇಕೆಂದು ಹೇಳುತ್ತೀಯೋ ಅಲ್ಲಿಗೆ ನಿನ್ನನ್ನು ಕೊಂಡೊಯ್ಯುತ್ತೇನೆ.”
13103017a ಇತ್ಯುಕ್ತೋ ನಹುಷಸ್ತೇನ ಯೋಜಯಾಮಾಸ ತಂ ಮುನಿಮ್|
13103017c ಭೃಗುಸ್ತಸ್ಯ ಜಟಾಸಂಸ್ಥೋ ಬಭೂವ ಹೃಷಿತೋ ಭೃಶಮ್||
ಅವನು ಹೀಗೆ ಹೇಳಲು ನಹುಷನು ಆ ಮುನಿಯನ್ನು ರಥಕ್ಕೆ ಹೂಡಿದನು. ಆಗ ಅಗಸ್ತ್ಯನ ಜಟೆಯಲ್ಲಿದ್ದ ಭೃಗುವು ಅತ್ಯಂತ ಹರ್ಷಿತನಾದನು.
13103018a ನ ಚಾಪಿ ದರ್ಶನಂ ತಸ್ಯ ಚಕಾರ ಸ ಭೃಗುಸ್ತದಾ|
13103018c ವರದಾನಪ್ರಭಾವಜ್ಞೋ ನಹುಷಸ್ಯ ಮಹಾತ್ಮನಃ||
ಮಹಾತ್ಮ ನಹುಷನ ವರದಾನದ ಪ್ರಭಾವವನ್ನು ಅರಿತಿದ್ದ ಭೃಗುವು ಆಗ ಅವನಿಗೆ ತನ್ನನ್ನು ಕಾಣಿಸಿಕೊಳ್ಳಲಿಲ್ಲ.
13103019a ನ ಚುಕೋಪ ಸ ಚಾಗಸ್ತ್ಯೋ ಯುಕ್ತೋಽಪಿ ನಹುಷೇಣ ವೈ|
13103019c ತಂ ತು ರಾಜಾ ಪ್ರತೋದೇನ ಚೋದಯಾಮಾಸ ಭಾರತ||
ಭಾರತ! ನಹುಷನು ರಥಕ್ಕೆ ಹೂಡಿದರೂ ಅಗಸ್ತ್ಯನು ಕುಪಿತನಾಗಲಿಲ್ಲ. ರಾಜನಾದರೋ ಅವನನ್ನು ಬಾರಿಕೋಲಿನಿಂದ ಹೊಡೆದು ಓಡಿಸಿದನು.
13103020a ನ ಚುಕೋಪ ಸ ಧರ್ಮಾತ್ಮಾ ತತಃ ಪಾದೇನ ದೇವರಾಟ್|
13103020c ಅಗಸ್ತ್ಯಸ್ಯ ತದಾ ಕ್ರುದ್ಧೋ ವಾಮೇನಾಭ್ಯಹನಚ್ಚಿರಃ||
ಆಗಲೂ ಆ ಧರ್ಮಾತ್ಮನು ಕುಪಿತನಾಗಲಿಲ್ಲ. ಆಗ ಕುಪಿತನಾಗಿ ದೇವರಾಜನು ತನ್ನ ಎಡಗಾಲಿನಿಂದ ಅಗಸ್ತ್ಯನ ಶಿರವನ್ನು ಒದೆದನು.
13103021a ತಸ್ಮಿನ್ ಶಿರಸ್ಯಭಿಹತೇ ಸ ಜಟಾಂತರ್ಗತೋ ಭೃಗುಃ|
13103021c ಶಶಾಪ ಬಲವತ್ಕ್ರುದ್ಧೋ ನಹುಷಂ ಪಾಪಚೇತಸಮ್||
ಅವನ ಶಿರದ ಜಟೆಯಲ್ಲಿ ಅಡಗಿದ್ದ ಭೃಗುವು ಅತ್ಯಂತ ಕೃದ್ಧನಾಗಿ ಪಾಪಚೇತಸ ನಹುಷನನ್ನು ಶಪಿಸಿದನು.
13103022 ಭೃಗುರುವಾಚ|
13103022a ಯಸ್ಮಾತ್ಪದಾಹನಃ ಕ್ರೋಧಾಚ್ಚಿರಸೀಮಂ ಮಹಾಮುನಿಮ್|
13103022c ತಸ್ಮಾದಾಶು ಮಹೀಂ ಗಚ್ಚ ಸರ್ಪೋ ಭೂತ್ವಾ ಸುದುರ್ಮತೇ||
ಭೃಗುವು ಹೇಳಿದನು: “ದುರ್ಮತೇ! ನೀನು ಕ್ರೋಧದಿಂದ ಈ ಮಹಾಮುನಿಯ ಶಿರವನ್ನು ಕಾಲಿನಿಂದ ಒದೆದಿದ್ದೀಯೆ. ಆದುದರಿಂದ ಶೀಘ್ರದಲ್ಲಿಯೇ ನೀನು ಸರ್ಪವಾಗಿ ಭೂಮಿಗೆ ಹೊರಟು ಹೋಗು!”
13103023a ಇತ್ಯುಕ್ತಃ ಸ ತದಾ ತೇನ ಸರ್ಪೋ ಭೂತ್ವಾ ಪಪಾತ ಹ|
13103023c ಅದೃಷ್ಟೇನಾಥ ಭೃಗುಣಾ ಭೂತಲೇ ಭರತರ್ಷಭ||
ಭರತರ್ಷಭ! ಅದೃಷ್ಟನಾಗಿದ್ದ ಭೃಗುವು ಹೀಗೆ ಹೇಳಲು ಅದರಿಂದಾಗಿ ನಹುಷನು ಸರ್ಪವಾಗಿ ಭೂಮಿಯ ಮೇಲೆ ಬಿದ್ದನು.
13103024a ಭೃಗುಂ ಹಿ ಯದಿ ಸೋಽದ್ರಾಕ್ಷೀನ್ನಹುಷಃ ಪೃಥಿವೀಪತೇ|
13103024c ನ ಸ ಶಕ್ತೋಽಭವಿಷ್ಯದ್ವೈ ಪಾತನೇ ತಸ್ಯ ತೇಜಸಾ||
ಪೃಥಿವೀಪತೇ! ಒಂದು ವೇಳೆ ನಹುಷನು ಭೃಗುವನ್ನು ನೋಡಿದ್ದರೆ ಭೃಗುವಿಗೆ ತನ್ನ ತೇಜಸ್ಸಿನಿಂದ ಅವನನ್ನು ಕೆಳಗುರುಳಿಸಲು ಶಕ್ಯವಾಗುತ್ತಿರಲಿಲ್ಲ.
13103025a ಸ ತು ತೈಸ್ತೈಃ ಪ್ರದಾನೈಶ್ಚ ತಪೋಭಿರ್ನಿಯಮೈಸ್ತಥಾ|
13103025c ಪತಿತೋಽಪಿ ಮಹಾರಾಜ ಭೂತಲೇ ಸ್ಮೃತಿಮಾನಭೂತ್|
13103025e ಪ್ರಸಾದಯಾಮಾಸ ಭೃಗುಂ ಶಾಪಾಂತೋ ಮೇ ಭವೇದಿತಿ||
ಮಹಾರಾಜ! ನಹುಷನು ಅನೇಕ ಪ್ರಕಾರದ ದಾನಗಳನ್ನು ಮಾಡಿದ್ದನು ಮತ್ತು ತಪ-ನಿಯಮಗಳ ಅನುಷ್ಠಾನವನ್ನು ಮಾಡಿದ್ದನು. ಅದರ ಪ್ರಭಾವದಿಂದ ಅವನು ಭೂಮಿಯ ಮೇಲೆ ಬಿದ್ದರೂ ಪೂರ್ವಜನ್ಮದ ಸ್ಮೃತಿಯು ಅವನಲ್ಲಿತ್ತು. ಅವನು “ನನ್ನ ಶಾಪವು ಅಂತ್ಯವಾಗಲಿ” ಎಂದು ಭೃಗುವನ್ನು ಪ್ರಸನ್ನಗೊಳಿಸತೊಡಗಿದನು.
13103026a ತತೋಽಗಸ್ತ್ಯಃ ಕೃಪಾವಿಷ್ಟಃ ಪ್ರಾಸಾದಯತ ತಂ ಭೃಗುಮ್|
13103026c ಶಾಪಾಂತಾರ್ಥಂ ಮಹಾರಾಜ ಸ ಚ ಪ್ರಾದಾತ್ಕೃಪಾನ್ವಿತಃ||
ಮಹಾರಾಜ! ಆಗ ಕೃಪಾವಿಷ್ಟನಾದ ಅಗಸ್ತ್ಯನು ಅವನ ಶಾಪವನ್ನು ಅಂತ್ಯಗೊಳಿಸಲು ಭೃಗುವನ್ನು ಪ್ರಸನ್ನಗೊಳಿಸಿದನು. ಆಗ ಕೃಪಾನ್ವಿತನಾದ ಭೃಗುವು ಅವನಿಗೆ ಅದನ್ನು ನೀಡಿದನು.
13103027 ಭೃಗುರುವಾಚ|
13103027a ರಾಜಾ ಯುಧಿಷ್ಠಿರೋ ನಾಮ ಭವಿಷ್ಯತಿ ಕುರೂದ್ವಹಃ[4]|
13103027c ಸ ತ್ವಾಂ ಮೋಕ್ಷಯಿತಾ ಶಾಪಾದಿತ್ಯುಕ್ತ್ವಾಂತರಧೀಯತ||
ಭೃಗುವು ಹೇಳಿದನು: “ಕುರೂದ್ವಹ ಯುಧಿಷ್ಠಿರನೆಂಬ ಹೆಸರಿನ ರಾಜನಾಗುತ್ತಾನೆ. ಅವನು ನಿನ್ನನ್ನು ಶಾಪದಿಂದ ಮೋಕ್ಷಗೊಳಿಸುತ್ತಾನೆ.” ಹೀಗೆ ಹೇಳಿ ಅವನು ಅಂತರ್ಧಾನನಾದನು.
13103028a ಅಗಸ್ತ್ಯೋಽಪಿ ಮಹಾತೇಜಾಃ ಕೃತ್ವಾ ಕಾರ್ಯಂ ಶತಕ್ರತೋಃ|
13103028c ಸ್ವಮಾಶ್ರಮಪದಂ ಪ್ರಾಯಾತ್ಪೂಜ್ಯಮಾನೋ ದ್ವಿಜಾತಿಭಿಃ||
ಮಹಾತೇಜಸ್ವೀ ಅಗಸ್ತ್ಯನೂ ಕೂಡ ಶತಕ್ರತುವಿನ ಕಾರ್ಯವನ್ನು ಮಾಡಿ ತನ್ನ ಆಶ್ರಮಪದವನ್ನು ಸೇರಿ ದ್ವಿಜಾತಿಯವರಿಂದ ಪೂಜಿತನಾದನು.
13103029a ನಹುಷೋಽಪಿ ತ್ವಯಾ ರಾಜಂಸ್ತಸ್ಮಾಚ್ಚಾಪಾತ್ಸಮುದ್ಧೃತಃ|
13103029c ಜಗಾಮ ಬ್ರಹ್ಮಸದನಂ ಪಶ್ಯತಸ್ತೇ ಜನಾಧಿಪ||
ರಾಜನ್! ಜನಾಧಿಪ! ನೀನೂ ಕೂಡ ನಹುಷನನ್ನು ಶಾಪದಿಂದ ಮುಕ್ತಗೊಳಿಸಿದೆ. ನೀನು ನೋಡುತ್ತಿದ್ದಂತೆಯೇ ಅವನು ಬ್ರಹ್ಮಸದನಕ್ಕೆ ಹೋದನು.
13103030a ತದಾ ತು ಪಾತಯಿತ್ವಾ ತಂ ನಹುಷಂ ಭೂತಲೇ ಭೃಗುಃ|
13103030c ಜಗಾಮ ಬ್ರಹ್ಮಸದನಂ ಬ್ರಹ್ಮಣೇ ಚ ನ್ಯವೇದಯತ್||
ನಹುಷನನ್ನು ಭೂತಲಕ್ಕೆ ಉರುಳಿಸಿ ಭೃಗುವು ಬ್ರಹ್ಮಸದನಕ್ಕೆ ಹೋಗಿ ಬ್ರಹ್ಮನಿಗೆ ಇದನ್ನು ನಿವೇದಿಸಿದನು.
13103031a ತತಃ ಶಕ್ರಂ ಸಮಾನಾಯ್ಯ ದೇವಾನಾಹ ಪಿತಾಮಹಃ|
13103031c ವರದಾನಾನ್ಮಮ ಸುರಾ ನಹುಷೋ ರಾಜ್ಯಮಾಪ್ತವಾನ್|
13103031e ಸ ಚಾಗಸ್ತ್ಯೇನ ಕ್ರುದ್ಧೇನ ಭ್ರಂಶಿತೋ ಭೂತಲಂ ಗತಃ||
ಆಗ ಪಿತಾಮಹನು ಶಕ್ರ ಮತ್ತು ದೇವತೆಗಳನ್ನು ಕರೆದು ಹೇಳಿದನು: “ಸುರರೇ! ನನ್ನ ವರದಾನದಿಂದ ನಹುಷನು ದೇವರಾಜ್ಯವನ್ನು ಪಡೆದುಕೊಂಡನು. ಆದರೆ ಕುಪಿತನಾದ ಅಗಸ್ತ್ಯನಿಂದ ಅವನು ಸ್ವರ್ಗದಿಂದ ಭ್ರಷ್ಟನಾಗಿ ಭೂತಲಕ್ಕೆ ಹೊರಟುಹೋದನು.
13103032a ನ ಚ ಶಕ್ಯಂ ವಿನಾ ರಾಜ್ಞಾ ಸುರಾ ವರ್ತಯಿತುಂ ಕ್ವ ಚಿತ್|
13103032c ತಸ್ಮಾದಯಂ ಪುನಃ ಶಕ್ರೋ ದೇವರಾಜ್ಯೇಽಭಿಷಿಚ್ಯತಾಮ್||
ಸುರರೇ! ರಾಜನಿಲ್ಲದೇ ಇರುವುದು ಶಕ್ಯವಿಲ್ಲ. ಆದುದರಿಂದ ಪುನಃ ಈ ಶಕ್ರನನ್ನು ದೇವರಾಜ್ಯದಲ್ಲಿ ಅಭಿಷೇಕಿಸಿರಿ.”
13103033a ಏವಂ ಸಂಭಾಷಮಾಣಂ ತು ದೇವಾಃ ಪಾರ್ಥ ಪಿತಾಮಹಮ್|
13103033c ಏವಮಸ್ತ್ವಿತಿ ಸಂಹೃಷ್ಟಾಃ ಪ್ರತ್ಯೂಚುಸ್ತೇ ಪಿತಾಮಹಮ್||
ಪಾರ್ಥ! ಪಿತಾಮಹನ ಈ ಮಾತನ್ನು ಕೇಳಿ ದೇವತೆಗಳು ಸಂಹೃಷ್ಟರಾಗಿ ಹಾಗೆಯೇ ಆಗಲೆಂದು ಪಿತಾಮಹನಿಗೆ ಹೇಳಿದರು.
13103034a ಸೋಽಭಿಷಿಕ್ತೋ ಭಗವತಾ ದೇವರಾಜ್ಯೇನ ವಾಸವಃ|
13103034c ಬ್ರಹ್ಮಣಾ ರಾಜಶಾರ್ದೂಲ ಯಥಾಪೂರ್ವಂ ವ್ಯರೋಚತ||
ರಾಜಶಾರ್ದೂಲ! ಭಗವಂತ ಬ್ರಹ್ಮನಿಂದ ದೇವರಾಜ್ಯದಲ್ಲಿ ಅಭಿಷಿಕ್ತನಾದ ವಾಸವನು ಮೊದಲಿನಂತೆಯೇ ವಿರಾಜಿಸಿದನು.
13103035a ಏವಮೇತತ್ಪುರಾವೃತ್ತಂ ನಹುಷಸ್ಯ ವ್ಯತಿಕ್ರಮಾತ್|
13103035c ಸ ಚ ತೈರೇವ ಸಂಸಿದ್ಧೋ ನಹುಷಃ ಕರ್ಮಭಿಃ ಪುನಃ||
ಹೀಗೆ ಪೂರ್ವಕಾಲದಲ್ಲಿ ನಹುಷನ ಅಪರಾಧದಿಂದ ಈ ಘಟನೆಯು ನಡೆಯಿತು ಮತ್ತು ನಹುಷನು ಪುನಃ ಪುನಃ ಮಾಡಿದ್ದ ದೀಪದಾನಾದಿ ಪುಣ್ಯಕರ್ಮಗಳಿಂದ ಸಿದ್ಧಿಯನ್ನು ಪಡೆದುಕೊಂಡನು.
13103036a ತಸ್ಮಾದ್ದೀಪಾಃ ಪ್ರದಾತವ್ಯಾಃ ಸಾಯಂ ವೈ ಗೃಹಮೇಧಿಭಿಃ|
13103036c ದಿವ್ಯಂ ಚಕ್ಷುರವಾಪ್ನೋತಿ ಪ್ರೇತ್ಯ ದೀಪಪ್ರದಾಯಕಃ|
13103036e ಪೂರ್ಣಚಂದ್ರಪ್ರತೀಕಾಶಾ ದೀಪದಾಶ್ಚ ಭವಂತ್ಯುತ||
ಆದುದರಿಂದ ಗೃಹಸ್ಥನು ಸಾಯಂಕಾಲ ಅವಶ್ಯವಾಗಿ ದೀಪದಾನವನ್ನು ಮಾಡಬೇಕು. ದೀಪದಾನಮಾಡುವವನು ಮರಣಾನಂತರ ದಿವ್ಯಚಕ್ಷುಗಳನ್ನು ಪಡೆದುಕೊಳ್ಳುತ್ತಾನೆ. ದೀಪದಾನಿಯು ಪೂರ್ಣಚಂದ್ರನ ಪ್ರಕಾಶದಂತೆ ಕಾಂತಿಮತನಾಗುತ್ತಾನೆ.
13103037a ಯಾವದಕ್ಷಿನಿಮೇಷಾಣಿ ಜ್ವಲತೇ ತಾವತೀಃ ಸಮಾಃ|
13103037c ರೂಪವಾನ್ ಧನವಾಂಶ್ಚಾಪಿ[5] ನರೋ ಭವತಿ ದೀಪದಃ||
ಎಷ್ಟು ಕಣ್ಣುರೆಪ್ಪೆಗಳು ಬಡಿಯುವವರೆಗೆ ದೀಪವು ಉರಿಯುತ್ತಿರುವುದೋ ಅಷ್ಟು ವರ್ಷಗಳ ವರೆಗೆ ದೀಪದಾನ ಮಾಡಿದ ಮನುಷ್ಯನು ರೂಪವಂತನೂ ಧನವಾನನೂ ಆಗಿರುತ್ತಾನೆ.”
ಇತಿ ಶ್ರೀಮಹಾಭಾರತೇ ಅನುಶಾಸನಪರ್ವಣಿ ದಾನಧರ್ಮಪರ್ವಣಿ ಅಗಸ್ತ್ಯಭೃಗುಸಂವಾದೋ ನಾಮ ತ್ರ್ಯಕಶತತಮೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಅನುಶಾಸನಪರ್ವದಲ್ಲಿ ದಾನಧರ್ಮಪರ್ವದಲ್ಲಿ ಅಗಸ್ತ್ಯಭೃಗುಸಂವಾದ ಎನ್ನುವ ನೂರಾಮೂರನೇ ಅಧ್ಯಾಯವು.
[1] ಗ್ರಹಾಯಾಗ್ರಂ (ಗೀತಾ ಪ್ರೆಸ್).
[2] ಇದಕ್ಕೆ ಮೊದಲು ಈ ಒಂದು ಅಧಿಕ ಶ್ಲೋಕಾರ್ಧವಿದೆ: ಪಿತರಶ್ಚ ಮಹಾಭಾಗಾ ಋಷಯಶ್ಚ ತಪೋಧನಾಃ| (ಗೀತಾ ಪ್ರೆಸ್).
[3] ಬಲದರ್ಪತಃ (ಗೀತಾ ಪ್ರೆಸ್).
[4] ಕುಲೋದ್ವಹಃ (ಗೀತಾ ಪ್ರೆಸ್).
[5] ಬಲವಾಂಶ್ಚಾಪಿ (ಗೀತಾ ಪ್ರೆಸ್).