ಆರಣ್ಯಕ ಪರ್ವ: ಘೋಷಯಾತ್ರಾ ಪರ್ವ
೨೨೮
ಗೋವುಗಳನ್ನು ಎಣಿಸಲು ಹೋಗುತ್ತೇವೆಂದು ದುರ್ಯೋಧನನು ಹೇಳಲು ಧೃತರಾಷ್ಟ್ರನು ಅಲ್ಲಿ ಹತ್ತಿರದಲ್ಲಿ ಪಾಂಡವರು ವಾಸಿಸುತ್ತಿರುವುದರಿಂದ ಬೇರೆ ಯಾರನ್ನಾದರೂ ಕಳುಹಿಸಲು ಸೂಚಿಸುವುದು (೧-೧೭). ಅಲ್ಲಿ ಅನಾರ್ಯ ಸಮಾಚಾರವು ನಡೆಯುವುದಿಲ್ಲ, ಮತ್ತು ಅವರು ಎಲ್ಲಿ ವಾಸಿಸುತ್ತಿದ್ದಾರೋ ಅಲ್ಲಿಗೆ ನಾವು ಹೋಗುವುದಿಲ್ಲವೆಂದು ಶಕುನಿಯು ಭರವಸೆಯಿತ್ತನಂತರ ಧೃತರಾಷ್ಟ್ರನು ಒಪ್ಪಿಕೊಳ್ಳುವುದು (೧೮-೨೨). ದುರ್ಯೋಧನನು ತನ್ನ ಆಪ್ತರು, ಪುರಜನರು ಮತ್ತು ಸೇನೆಯೊಡನೆ ದ್ವೈತವನ ಸರೋವರದತ್ತ ಪ್ರಯಾಣಿಸಿದುದು (೨೩-೨೯).
03228001 ವೈಶಂಪಾಯನ ಉವಾಚ|
03228001a ಧೃತರಾಷ್ಟ್ರಂ ತತಃ ಸರ್ವೇ ದದೃಶುರ್ಜನಮೇಜಯ|
03228001c ಪೃಷ್ಟ್ವಾ ಸುಖಮಥೋ ರಾಜ್ಞಃ ಪೃಷ್ಟ್ವಾ ರಾಜ್ಞಾ ಚ ಭಾರತ||
ವೈಶಂಪಾಯನನು ಹೇಳಿದನು: “ಭಾರತ! ಜನಮೇಜಯ! ಆಗ ಅವರೆಲ್ಲರೂ ಧೃತರಾಷ್ಟ್ರನನ್ನು ಕಂಡರು ಮತ್ತು ರಾಜನ ಸೌಖ್ಯದ ಕುರಿತು ಕೇಳಿದರು. ರಾಜನೂ ಕೂಡ ಅವರಿಗೆ ಮರಳಿ ಕೇಳಿದನು.
03228002a ತತಸ್ತೈರ್ವಿಹಿತಃ ಪೂರ್ವಂ ಸಮಂಗೋ ನಾಮ ಬಲ್ಲವಃ|
03228002c ಸಮೀಪಸ್ಥಾಸ್ತದಾ ಗಾವೋ ಧೃತರಾಷ್ಟ್ರೇ ನ್ಯವೇದಯತ್||
ಆಗ ಅದಕ್ಕೂ ಮೊದಲೇ ತಿಳಿಸಿದ್ದ ಸಮಂಗ ಎಂಬ ಹೆಸರಿನ ಗೊಲ್ಲನು ಸಮೀಪದಲ್ಲಿರುವ ಗೋವುಗಳ ಕುರಿತು ಧೃತರಾಷ್ಟ್ರನಿಗೆ ನಿವೇದಿಸಿದನು.
03228003a ಅನಂತರಂ ಚ ರಾಧೇಯಃ ಶಕುನಿಶ್ಚ ವಿಶಾಂ ಪತೇ|
03228003c ಆಹತುಃ ಪಾರ್ಥಿವಶ್ರೇಷ್ಠಂ ಧೃತರಾಷ್ಟ್ರಂ ಜನಾಧಿಪಂ||
ವಿಶಾಂಪತೇ! ಅನಂತರ ರಾಧೇಯ ಮತ್ತು ಶಕುನಿಯರು ಜನಾಧಿಪ ಪಾರ್ಥಿವಶ್ರೇಷ್ಠ ಧೃತರಾಷ್ಟ್ರನಿಗೆ ಹೇಳಿದರು:
03228004a ರಮಣೀಯೇಷು ದೇಶೇಷು ಘೋಷಾಃ ಸಂಪ್ರತಿ ಕೌರವ|
03228004c ಸ್ಮಾರಣಾಸಮಯಃ ಪ್ರಾಪ್ತೋ ವತ್ಸಾನಾಮಪಿ ಚಾಂಕನಂ||
“ಕೌರವ! ಈ ಸಮಯದಲ್ಲಿ ಗೋಶಾಲೆಗಳಿದ್ದ ಪ್ರದೇಶವು ರಮಣೀಯವಾಗಿದೆ. ಕರುಗಳನ್ನು ಎಣಿಸುವ ಮತ್ತು ಬರೆಹಾಕುವ ಸಮಯವೂ ಪ್ರಾಪ್ತವಾಗಿದೆ.
03228005a ಮೃಗಯಾ ಚೋಚಿತಾ ರಾಜನ್ನಸ್ಮಿನ್ಕಾಲೇ ಸುತಸ್ಯ ತೇ|
03228005c ದುರ್ಯೋಧನಸ್ಯ ಗಮನಂ ತ್ವಮನುಜ್ಞಾತುಮರ್ಹಸಿ||
ರಾಜನ್! ನಿನ್ನ ಮಗನು ಬೇಟೆಗೆ ಹೋಗುವುದಕ್ಕೂ ಇದು ಸರಿಯಾದ ಸಮಯ. ದುರ್ಯೋಧನನಿಗೆ ಹೋಗುವುದಕ್ಕೆ ಅನುಮತಿಯನ್ನು ನೀಡಬೇಕು.”
03228006 ಧೃತರಾಷ್ಟ್ರ ಉವಾಚ|
03228006a ಮೃಗಯಾ ಶೋಭನಾ ತಾತ ಗವಾಂ ಚ ಸಮವೇಕ್ಷಣಂ|
03228006c ವಿಶ್ರಂಭಸ್ತು ನ ಗಂತವ್ಯೋ ಬಲ್ಲವಾನಾಮಿತಿ ಸ್ಮರೇ||
ಧೃತರಾಷ್ಟ್ರನು ಹೇಳಿದನು: “ಮಗೂ! ಬೇಟೆಯಾಡುವುದೂ ಮತ್ತು ಗೋವುಗಳನ್ನು ನೋಡಿಬರುವುದೂ ಒಳ್ಳೆಯದು. ಗೋವಳರನ್ನು ನಂಬಬಾರದು ಎಂದೂ ನನ್ನ ನೆನಪಿನಲ್ಲಿದೆ.
03228007a ತೇ ತು ತತ್ರ ನರವ್ಯಾಘ್ರಾಃ ಸಮೀಪ ಇತಿ ನಃ ಶ್ರುತಂ|
03228007c ಅತೋ ನಾಭ್ಯನುಜಾನಾಮಿ ಗಮನಂ ತತ್ರ ವಃ ಸ್ವಯಂ||
ಆದರೆ ಆ ನರವ್ಯಾಘ್ರರೂ ಅಲ್ಲಿಯೇ ಸಮೀಪದಲ್ಲಿದ್ದಾರೆಂದು ಕೇಳಿದ್ದೇನೆ. ಆದುದರಿಂದ ನೀವು ಸ್ವಯಂ ಅಲ್ಲಿಗೆ ಹೋಗುವುದನ್ನು ಒಪ್ಪುವುದಿಲ್ಲ.
03228008a ಚದ್ಮನಾ ನಿರ್ಜಿತಾಸ್ತೇ ಹಿ ಕರ್ಶಿತಾಶ್ಚ ಮಹಾವನೇ|
03228008c ತಪೋನಿತ್ಯಾಶ್ಚ ರಾಧೇಯ ಸಮರ್ಥಾಶ್ಚ ಮಹಾರಥಾಃ||
ರಾಧೇಯ! ಸಮರ್ಥರೂ ಮಹಾರಥಿಗಳೂ ಆದ ಅವರು ಮೋಸದಿಂದ ಸೋಲಿಸಲ್ಪಟ್ಟು ಕಷ್ಟದಿಂದ ಅಲ್ಲಿ ತಪೋನಿರತರಾಗಿದ್ದಾರೆ.
03228009a ಧರ್ಮರಾಜೋ ನ ಸಂಕ್ರುಧ್ಯೇದ್ಭೀಮಸೇನಸ್ತ್ವಮರ್ಷಣಃ|
03228009c ಯಜ್ಞಸೇನಸ್ಯ ದುಹಿತಾ ತೇಜ ಏವ ತು ಕೇವಲಂ||
ಧರ್ಮರಾಜನು ಸಿಟ್ಟಾಗುವುದಿಲ್ಲ. ಆದರೆ ಭೀಮಸೇನನಾದರೋ ಕುಪಿತನಾಗುವನು ಮತ್ತು ಯಜ್ಞಸೇನನ ಮಗಳು ಕೇವಲ ಬೆಂಕಿಯಂತೆ!
03228010a ಯೂಯಂ ಚಾಪ್ಯಪರಾಧ್ಯೇಯುರ್ದರ್ಪಮೋಹಸಮನ್ವಿತಾಃ|
03228010c ತತೋ ವಿನಿರ್ದಹೇಯುಸ್ತೇ ತಪಸಾ ಹಿ ಸಮನ್ವಿತಾಃ||
ದರ್ಪಮೋಹಸಮನ್ವಿತರಾದ ನೀವು ಅಪರಾಧವನ್ನೆಸಗುವುದು ಖಂಡಿತ. ಆಗ ತಪಸ್ಸಿನಿಂದ ಸಮನ್ವಿತರಾದ ಅವರು ನಿಮ್ಮನ್ನು ಸುಟ್ಟುಬಿಡುತ್ತಾರೆ.
03228011a ಅಥ ವಾ ಸಾಯುಧಾ ವೀರಾ ಮನ್ಯುನಾಭಿಪರಿಪ್ಲುತಾಃ|
03228011c ಸಹಿತಾ ಬದ್ಧನಿಸ್ತ್ರಿಂಶಾ ದಹೇಯುಃ ಶಸ್ತ್ರತೇಜಸಾ||
ಅಥವಾ, ಆ ವೀರರು ಸಿಟ್ಟಿನಿಂದ ತುಂಬಿದವರಾಗಿ, ಆಯುಧಗಳಿಂದ, ಖಡ್ಗಗಳ ಸಹಿತ ತಮ್ಮ ಶಸ್ತ್ರಗಳ ತೇಜಸ್ಸಿನಿಂದ ನಿಮ್ಮನ್ನು ಸುಡುತ್ತಾರೆ.
03228012a ಅಥ ಯೂಯಂ ಬಹುತ್ವಾತ್ತಾನಾರಭಧ್ವಂ ಕಥಂ ಚನ|
03228012c ಅನಾರ್ಯಂ ಪರಮಂ ತತ್ಸ್ಯಾದಶಕ್ಯಂ ತಚ್ಚ ಮೇ ಮತಂ||
ಅಥವಾ ಒಂದುವೇಳೆ ಬಹುಸಂಖ್ಯೆಯಲ್ಲಿರುವ ನೀವು ಅವರನ್ನು ಕೊಂದರೆ ಅದು ಪರಮ ಅನಾರ್ಯವೆನಿಸಿಕೊಳ್ಳುತ್ತದೆ. ಅದಕ್ಕೆ ನೀವು ಅಶಕ್ತರೆಂದು ನನಗನ್ನಿಸುತ್ತದೆ.
03228013a ಉಷಿತೋ ಹಿ ಮಹಾಬಾಹುರಿಂದ್ರಲೋಕೇ ಧನಂಜಯಃ|
03228013c ದಿವ್ಯಾನ್ಯಸ್ತ್ರಾಣ್ಯವಾಪ್ಯಾಥ ತತಃ ಪ್ರತ್ಯಾಗತೋ ವನಂ||
ಏಕೆಂದರೆ ಮಹಾಬಾಹು ಧನಂಜಯನು ಇಂದ್ರಲೋಕದಲ್ಲಿ ಉಳಿದುಕೊಂಡು ದಿವ್ಯಾಸ್ತ್ರಗಳನ್ನು ಪಡೆದುಕೊಂಡು ವನಕ್ಕೆ ಮರಳಿ ಬಂದಿದ್ದಾನೆ.
03228014a ಅಕೃತಾಸ್ತ್ರೇಣ ಪೃಥಿವೀ ಜಿತಾ ಬೀಭತ್ಸುನಾ ಪುರಾ|
03228014c ಕಿಂ ಪುನಃ ಸ ಕೃತಾಸ್ತ್ರೋಽದ್ಯ ನ ಹನ್ಯಾದ್ವೋ ಮಹಾರಥಃ||
ಹಿಂದೆ ಈ ಅಸ್ತ್ರಗಳಿಲ್ಲದೆಯೇ ಬೀಭತ್ಸುವು ಪೃಥ್ವಿಯನ್ನು ಗೆದ್ದಿದ್ದನು. ಈಗ ಕೃತಾಸ್ತ್ರನಾದ ಆ ಮಹಾರಥಿಯು ಪುನಃ ನಿಮ್ಮನ್ನು ಕೊಲ್ಲದೆಯೇ ಇರುತ್ತಾನೆಯೇ?
03228015a ಅಥ ವಾ ಮದ್ವಚಃ ಶ್ರುತ್ವಾ ತತ್ರ ಯತ್ತಾ ಭವಿಷ್ಯಥ|
03228015c ಉದ್ವಿಗ್ನವಾಸೋ ವಿಶ್ರಂಭಾದ್ದುಃಖಂ ತತ್ರ ಭವಿಷ್ಯತಿ||
ಆಥವಾ ನನ್ನ ಮಾತನ್ನು ಕೇಳಿ ಅಲ್ಲಿ ಜಾಗರೂಕರಾಗಿದ್ದರೆ ನೀವು ಅವರ ಮೇಲಿನ ಶಂಕೆಯಿಂದ ಉದ್ವಿಗ್ನರಾಗಿ ವಾಸಿಸಬೇಕಾಗುತ್ತದೆ.
03228016a ಅಥ ವಾ ಸೈನಿಕಾಃ ಕೇ ಚಿದಪಕುರ್ಯುರ್ಯುಧಿಷ್ಠಿರೇ|
03228016c ತದಬುದ್ಧಿಕೃತಂ ಕರ್ಮ ದೋಷಮುತ್ಪಾದಯೇಚ್ಚ ವಃ||
ಅಥವಾ ಕೆಲವು ಸೈನಿಕರು ಯುಧಿಷ್ಠಿರನಿಗೆ ಅಪಕಾರವನ್ನೆಸಗಿದರೆ, ತಿಳಿಯದೇ ಮಾಡಿದ್ದರೂ, ಆ ಕರ್ಮದ ದೋಷವು ನಿನ್ನ ಮೇಲೆ ಬರುತ್ತದೆ.
03228017a ತಸ್ಮಾದ್ಗಚ್ಚಂತು ಪುರುಷಾಃ ಸ್ಮಾರಣಾಯಾಪ್ತಕಾರಿಣಃ|
03228017c ನ ಸ್ವಯಂ ತತ್ರ ಗಮನಂ ರೋಚಯೇ ತವ ಭಾರತ||
ಭಾರತ! ಆದುದರಿಂದ ಎಣಿಸಲು ಆಪ್ತಕಾರಿಣಿಗಳು ಯಾರಾದರೂ ಹೋಗಲಿ! ಸ್ವಯಂ ನೀನು ಅಲ್ಲಿಗೆ ಹೋಗುವುದು ನನಗೆ ಇಷ್ಟವಾಗುವುದಿಲ್ಲ.”
03228018 ಶಕುನಿರುವಾಚ|
03228018a ಧರ್ಮಜ್ಞಃ ಪಾಂಡವೋ ಜ್ಯೇಷ್ಠಃ ಪ್ರತಿಜ್ಞಾತಂ ಚ ಸಂಸದಿ|
03228018c ತೇನ ದ್ವಾದಶ ವರ್ಷಾಣಿ ವಸ್ತವ್ಯಾನೀತಿ ಭಾರತ||
ಶಕುನಿಯು ಹೇಳಿದನು: “ಭಾರತ! ಜ್ಯೇಷ್ಠ ಪಾಂಡವನು ಧರ್ಮಜ್ಞ ಮತ್ತು ಹನ್ನೆರಡು ವರ್ಷಗಳು ವನದಲ್ಲಿ ವಾಸಿಸುತ್ತೇನೆಂದು ಮಾಡಿದ ಪ್ರತಿಜ್ಞೆಯನ್ನು ಮರೆಯುವುದಿಲ್ಲ.
03228019a ಅನುವೃತ್ತಾಶ್ಚ ತೇ ಸರ್ವೇ ಪಾಂಡವಾ ಧರ್ಮಚಾರಿಣಃ|
03228019c ಯುಧಿಷ್ಠಿರಶ್ಚ ಕೌಂತೇಯೋ ನ ನಃ ಕೋಪಂ ಕರಿಷ್ಯತಿ||
ಎಲ್ಲ ಪಾಂಡವರೂ ಆ ಧರ್ಮಚಾರಿಣಿಯನ್ನು ಅನುಸರಿಸುತ್ತಾರೆ. ಕೌಂತೇಯ ಯುಧಿಷ್ಠಿರನು ನಮ್ಮ ಮೇಲೆ ಕೋಪ ಮಾಡುವುದಿಲ್ಲ.
03228020a ಮೃಗಯಾಂ ಚೈವ ನೋ ಗಂತುಮಿಚ್ಚಾ ಸಂವರ್ಧತೇ ಭೃಶಂ|
03228020c ಸ್ಮಾರಣಂ ಚ ಚಿಕೀರ್ಷಾಮೋ ನ ತು ಪಾಂಡವದರ್ಶನಂ||
ಮತ್ತು ಬೇಟೆಗೆ ಹೋಗಬೇಕೆನ್ನುವ ಬಯಕೆಯೂ ತುಂಬಾ ಹೆಚ್ಚಾಗಿದೆ. ಗೋವುಗಳನ್ನು ಎಣಿಸಲು ಬಯಸುತ್ತೇವೆಯೇ ಹೊರತು ಪಾಂಡವರನ್ನು ಕಾಣಬೇಕೆಂದಲ್ಲ.
03228021a ನ ಚಾನಾರ್ಯಸಮಾಚಾರಃ ಕಶ್ಚಿತ್ತತ್ರ ಭವಿಷ್ಯತಿ|
03228021c ನ ಚ ತತ್ರ ಗಮಿಷ್ಯಾಮೋ ಯತ್ರ ತೇಷಾಂ ಪ್ರತಿಶ್ರಯಃ||
ಅಲ್ಲಿ ಯಾವುದೇ ರೀತಿಯ ಅನಾರ್ಯ ಸಮಾಚಾರವು ನಡೆಯುವುದಿಲ್ಲ. ಮತ್ತು ಅವರು ಎಲ್ಲಿ ವಾಸಿಸುತ್ತಿದ್ದಾರೋ ಅಲ್ಲಿಗೆ ನಾವು ಹೋಗುವುದಿಲ್ಲ.””
03228022 ವೈಶಂಪಾಯನ ಉವಾಚ|
03228022a ಏವಮುಕ್ತಃ ಶಕುನಿನಾ ಧೃತರಾಷ್ಟ್ರೋ ಜನೇಶ್ವರಃ|
03228022c ದುರ್ಯೋಧನಂ ಸಹಾಮಾತ್ಯಮನುಜಜ್ಞೇ ನ ಕಾಮತಃ||
ವೈಶಂಪಾಯನನು ಹೇಳಿದನು: “ಶಕುನಿಯ ಈ ಮಾತಿಗೆ ಜನೇಶ್ವರ ಧೃತರಾಷ್ಟ್ರನು ಇಷ್ವವಿಲ್ಲದೆಯೇ ದುರ್ಯೋಧನ ಮತ್ತು ಅವನ ಅಮಾತ್ಯರಿಗೆ ಅನುಜ್ಞೆಯನ್ನಿತ್ತನು.
03228023a ಅನುಜ್ಞಾತಸ್ತು ಗಾಂಧಾರಿಃ ಕರ್ಣೇನ ಸಹಿತಸ್ತದಾ|
03228023c ನಿರ್ಯಯೌ ಭರತಶ್ರೇಷ್ಠೋ ಬಲೇನ ಮಹತಾ ವೃತಃ||
03228024a ದುಃಶಾಸನೇನ ಚ ತಥಾ ಸೌಬಲೇನ ಚ ದೇವಿನಾ|
03228024c ಸಂವೃತೋ ಭ್ರಾತೃಭಿಶ್ಚಾನ್ಯೈಃ ಸ್ತ್ರೀಭಿಶ್ಚಾಪಿ ಸಹಸ್ರಶಃ||
ಅಪ್ಪಣೆಯನ್ನು ಪಡೆದು ಗಾಂಧಾರಿಯ ಮಗ ಭರತಶ್ರೇಷ್ಠನು ಕರ್ಣನೊಂದಿಗೆ ಮಹಾಸೇನೆಯಿಂದ ಆವೃತನಾಗಿ, ದುಃಶಾಸನ, ಜೂಜುಗಾರ ಸೌಬಲರೊಂದಿಗೆ, ಇತರ ಸಹೋದರರು ಮತ್ತು ಸಹಸ್ರಾರು ಸ್ತ್ರೀಯರೊಂದಿಗೆ ಹೊರಟನು.
03228025a ತಂ ನಿರ್ಯಾಂತಂ ಮಹಾಬಾಹುಂ ದ್ರಷ್ಟುಂ ದ್ವೈತವನಂ ಸರಃ|
03228025c ಪೌರಾಶ್ಚಾನುಯಯುಃ ಸರ್ವೇ ಸಹದಾರಾ ವನಂ ಚ ತತ್||
ಆ ಮಹಾಬಾಹುವು ದ್ವೈತವನದ ಸರೋವರವನ್ನು ನೋಡಲು ಹೊರಟಾಗ ವನಕ್ಕೆ ಅವನನ್ನು ಅನುಸರಿಸಿ ಎಲ್ಲ ಪೌರರೂ ಪತ್ನಿಯರನ್ನು ಕೂಡಿಕೊಂಡು ಹೊರಟರು.
03228026a ಅಷ್ಟೌ ರಥಸಹಸ್ರಾಣಿ ತ್ರೀಣಿ ನಾಗಾಯುತಾನಿ ಚ|
03228026c ಪತ್ತಯೋ ಬಹುಸಾಹಸ್ರಾ ಹಯಾಶ್ಚ ನವತಿಃ ಶತಾಃ||
03228027a ಶಕಟಾಪಣವೇಶ್ಯಾಶ್ಚ ವಣಿಜೋ ಬಂದಿನಸ್ತಥಾ|
03228027c ನರಾಶ್ಚ ಮೃಗಯಾಶೀಲಾಃ ಶತಶೋಽಥ ಸಹಸ್ರಶಃ||
ಎಂಟು ಸಾವಿರ ರಥಗಳು, ಮೂವತ್ತು ಸಾವಿರ ಆನೆಗಳು, ಹಲವಾರು ಸಾವಿರ ಪಾದಾತಿಗಳು, ಒಂಭೈನೂರು ಕುದುರೆಗಳು, ಚಕ್ಕಡಿಗಳು, ಮಾರಾಟದ ಗಾಡಿಗಳು, ವೇಶ್ಯೆಯರು, ವರ್ತಕರು, ಬಂದಿಗಳು, ಮತ್ತು ನೂರಾರು ಸಹಸ್ರಾರು ಮೃಗಯಾಶೀಲ ಜನರು ಸೇರಿದ್ದರು.
03228028a ತತಃ ಪ್ರಯಾಣೇ ನೃಪತೇಃ ಸುಮಹಾನಭವತ್ಸ್ವನಃ|
03228028c ಪ್ರಾವೃಷೀವ ಮಹಾವಾಯೋರುದ್ಧತಸ್ಯ ವಿಶಾಂ ಪತೇ||
ವಿಶಾಂಪತೇ! ಆ ನೃಪತಿಯ ಪ್ರಯಾಣವು ಮಳೆಗಾಲದ ಭಿರುಗಾಳಿಯಂತೆ ಮಹಾಶಬ್ಧವನ್ನುಂಟು ಮಾಡಿತು.
03228029a ಗವ್ಯೂತಿಮಾತ್ರೇ ನ್ಯವಸದ್ರಾಜಾ ದುರ್ಯೋಧನಸ್ತದಾ|
03228029c ಪ್ರಯಾತೋ ವಾಹನೈಃ ಸರ್ವೈಸ್ತತೋ ದ್ವೈತವನಂ ಸರಃ||
ದ್ವೈತವನ ಸರೋವರಕ್ಕೆ ಎರಡು ಕ್ರೋಶಮಾತ್ರದ ದೂರದಲ್ಲಿ ರಾಜಾ ದುರ್ಯೋಧನನು ವಾಹನಗಳೊಂದಿಗೆ ಬೀಡು ಬಿಟ್ಟನು.”
ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ಘೋಷಯಾತ್ರಾ ಪರ್ವಣಿ ದುರ್ಯೋಧನಪ್ರಸ್ಥಾನೇ ಅಷ್ಟವಿಂಶತ್ಯಾಧಿಕದ್ವಿಶತತಮೋಽಧ್ಯಾಯಃ|
ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ಘೋಷಯಾತ್ರಾ ಪರ್ವದಲ್ಲಿ ದುರ್ಯೋಧನಪ್ರಸ್ಥಾನದಲ್ಲಿ ಇನ್ನೂರಾಇಪ್ಪತ್ತೆಂಟನೆಯ ಅಧ್ಯಾಯವು.