Sabha Parva: Chapter 72

ಸಭಾ ಪರ್ವ: ಅನುದ್ಯೂತ ಪರ್ವ

೭೨

ಧೃತರಾಷ್ಟ್ರ-ಸಂಜಯ ಸಂವಾದ

ಚಿಂತಾಪರನಾಗಿದ್ದ ಧೃತರಾಷ್ಟ್ರನಿಗೆ ಸಂಜಯನು ತಾನೇ ಎಲ್ಲವನ್ನೂ ಮಾಡಿಕೊಂಡು ಚಿಂತಿಸುವುದಕ್ಕೆ ಅರ್ಥವಿಲ್ಲ ಎನ್ನುವುದು (೧-೭). ಧೃತರಾಷ್ಟ್ರನು ಕುರುಗಳ ಪರಾಭವವು ದೈವನಿಶ್ಚಿತವಾದುದೆಂದೂ (೮-೧೨), ಸಭೆಯಲ್ಲಿ ನಡೆದ ಘಟನೆಗಳಿಂದಾದ ತುಮುಲಗಳು, ಶಕುನಗಳು, ಮಹಾ ಆಪತ್ತನ್ನು ಸೂಚಿಸುತ್ತವೆ ಎಂದೂ (೧೩-೨೪), ವಿದುರನು ಸಭೆಯಲ್ಲಿ ಹೇಳಿದ ಮಾತನ್ನೂ (೨೫-೩೫) ಮತ್ತು ತಾನು ಅದನ್ನು ಸ್ವೀಕರಿಸಲಿಲ್ಲ (೩೬) ಎನ್ನುವುದನ್ನು ಸಂಜಯನಲ್ಲಿ ಹೇಳಿಕೊಳ್ಳುವುದು.

02072001 ವೈಶಂಪಾಯನ ಉವಾಚ|

02072001a ವನಂ ಗತೇಷು ಪಾರ್ಥೇಷು ನಿರ್ಜಿತೇಷು ದುರೋದರೇ|

02072001c ಧೃತರಾಷ್ಟ್ರಂ ಮಹಾರಾಜ ತದಾ ಚಿಂತಾ ಸಮಾವಿಶತ್||

ವೈಶಂಪಾಯನನು ಹೇಳಿದನು: “ಮಹಾರಾಜ! ದ್ಯೂತದಲ್ಲಿ ಸೋತ ಪಾರ್ಥರು ವನಕ್ಕೆ ಹೋಗಲು ಧೃತರಾಷ್ಟ್ರನನ್ನು ಚಿಂತೆಯು ಸಮಾವೇಶಗೊಂಡಿತು.

02072002a ತಂ ಚಿಂತಯಾನಮಾಸೀನಂ ಧೃತರಾಷ್ಟ್ರಂ ಜನೇಶ್ವರಂ|

02072002c ನಿಃಶ್ವಸಂತಮನೇಕಾಗ್ರಮಿತಿ ಹೋವಾಚ ಸಂಜಯಃ||

ಆ ಜನೇಶ್ವರ ಧೃತರಾಷ್ಟ್ರನು ಚಿಂತೆಯಲ್ಲಿ ನಿಟ್ಟುಸಿರು ಬಿಡುತ್ತಾ ಏಕಾಗ್ರಚಿತ್ತನಾಗಿರದೇ ಕುಳಿತುಕೊಂಡಿರಲು ಸಂಜಯನು ಹೇಳಿದನು:

02072003a ಅವಾಪ್ಯ ವಸುಸಂಪೂರ್ಣಾಂ ವಸುಧಾಂ ವಸುಧಾಧಿಪ|

02072003c ಪ್ರವ್ರಾಜ್ಯ ಪಾಂಡವಾನ್ರಾಜ್ಯಾದ್ರಾಜನ್ಕಿಮನುಶೋಚಸಿ||

“ವಸುಧಾಧಿಪ! ರಾಜನ್! ಸಂಪತ್ತಿನೊಂದಿಗೆ ಸಂಪೂರ್ಣ ವಸುಧೆಯನ್ನು ಪಡೆದು, ಪಾಂಡವರನ್ನು ಅವರ ರಾಜ್ಯದಿಂದ ಹೊರಹಾಕಿ, ಯಾಕೆ ಶೋಕಿಸುತ್ತಿದ್ದೀಯೆ?”

02072004 ಧೃತರಾಷ್ಟ್ರ ಉವಾಚ|

02072004a ಅಶೋಚ್ಯಂ ತು ಕುತಸ್ತೇಷಾಂ ಯೇಷಾಂ ವೈರಂ ಭವಿಷ್ಯತಿ|

02072004c ಪಾಂಡವೈರ್ಯುದ್ಧಶೌಂಡೈರ್ಹಿ ಮಿತ್ರವದ್ಭಿರ್ಮಹಾರಥೈಃ||

ಧೃತರಾಷ್ಟ್ರನು ಹೇಳಿದನು: “ಯುದ್ಧಶೌಂಡರನ್ನು ಮಿತ್ರರನ್ನಾಗಿ ಪಡೆದಿರುವ ಆ ಮಹಾರಥಿ ಪಾಂಡವರೊಂದಿಗೆ ವೈರವಾಗಿರುವರಿಗೆ ಚಿಂತೆ ಮಾಡಲು ಏನೂ ಇಲ್ಲವೇ?”

02072005 ಸಂಜಯ ಉವಾಚ|

02072005a ತವೇದಂ ಸುಕೃತಂ ರಾಜನ್ಮಹದ್ವೈರಂ ಭವಿಷ್ಯತಿ|

02072005c ವಿನಾಶಃ ಸರ್ವಲೋಕಸ್ಯ ಸಾನುಬಂಧೋ ಭವಿಷ್ಯತಿ||

ಸಂಜಯನು ಹೇಳಿದನು: “ರಾಜನ್! ಇದು ನೀನೇ ಮಾಡಿಕೊಂಡ ಸುಕೃತ. ಅತಿದೊಡ್ಡ ವೈರವು ಉಂಟಾಗುತ್ತದೆ. ಅನುಯಾಯಿಗಳೊಂದಿಗೆ ಸರ್ವಲೋಕದ ವಿನಾಶವಾಗುತ್ತದೆ.

02072006a ವಾರ್ಯಮಾಣೋಽಪಿ ಭೀಷ್ಮೇಣ ದ್ರೋಣೇನ ವಿದುರೇಣ ಚ|

02072006c ಪಾಂಡವಾನಾಂ ಪ್ರಿಯಾಂ ಭಾರ್ಯಾಂ ದ್ರೌಪದೀಂ ಧರ್ಮಚಾರಿಣೀಂ||

02072007a ಪ್ರಾಹಿಣೋದಾನಯೇಹೇತಿ ಪುತ್ರೋ ದುರ್ಯೋಧನಸ್ತವ|

02072007c ಸೂತಪುತ್ರಂ ಸುಮಂದಾತ್ಮಾ ನಿರ್ಲಜ್ಜಃ ಪ್ರಾತಿಕಾಮಿನಂ||

ಭೀಷ್ಮ, ದ್ರೋಣ ಮತ್ತು ವಿದುರರು ಬೇಡವೆಂದರೂ ಅತ್ಯಂತ ದಡ್ಡನೂ ನಿರ್ಲಜ್ಜನೂ ಆದ ನಿನ್ನ ಪುತ್ರ ದುರ್ಯೋಧನನು ಪಾಂಡವರ ಪ್ರಿಯ ಭಾರ್ಯೆ ಧರ್ಮಚಾರಿಣಿ ದ್ರೌಪದಿಯನ್ನು ಕರೆತರಲು ಸೂತಪುತ್ರ ಪ್ರತಿಕಾಮಿಯನ್ನು ಕಳುಹಿಸಿದನು.”

02072008 ಧೃತರಾಷ್ಟ್ರ ಉವಾಚ|

02072008a ಯಸ್ಮೈ ದೇವಾಃ ಪ್ರಯಚ್ಛಂತಿ ಪುರುಷಾಯ ಪರಾಭವಂ|

02072008c ಬುದ್ಧಿಂ ತಸ್ಯಾಪಕರ್ಷಂತಿ ಸೋಽಪಾಚೀನಾನಿ ಪಶ್ಯತಿ||

ಧೃತರಾಷ್ಟ್ರನು ಹೇಳಿದನು: “ಯಾರ ಪರಾಭವವನ್ನು ದೇವತೆಗಳೇ ನಿಶ್ಚಯಿಸಿದ್ದಾರೋ ಅವನು ವಿಷಯವನ್ನು ಸರಿಯಾಗಿ ಕಾಣದೇ ಇರಲಿ ಎಂದು ಮೊದಲು ಅವನ ಬುದ್ಧಿಯನ್ನು ಕಿತ್ತುಕೊಳ್ಳುತ್ತಾರೆ. 

02072009a ಬುದ್ಧೌ ಕಲುಷಭೂತಾಯಾಂ ವಿನಾಶೇ ಪ್ರತ್ಯುಪಸ್ಥಿತೇ|

02072009c ಅನಯೋ ನಯಸಂಕಾಶೋ ಹೃದಯಾನ್ನಾಪಸರ್ಪತಿ||

ವಿನಾಶವು ನಿಶ್ಚಿತವಾದಾಗ ಮತ್ತು ಬುದ್ಧಿಯು ಕಲುಷಿತವಾದಾಗ ಅನ್ಯಾಯವೂ ನ್ಯಾಯವೆಂದೇ ತೋರುತ್ತದೆ ಮತ್ತು ಅದನ್ನಲ್ಲದೇ ಬೇರೆ ಏನನ್ನೂ ಹೃದಯವು ಬಯಸುವುದಿಲ್ಲ.

02072010a ಅನರ್ಥಾಶ್ಚಾರ್ಥರೂಪೇಣ ಅರ್ಥಾಶ್ಚಾನರ್ಥರೂಪಿಣಃ|

02072010c ಉತ್ತಿಷ್ಠಂತಿ ವಿನಾಶಾಂತೇ ನರಂ ತಚ್ಚಾಸ್ಯ ರೋಚತೇ||

ವಿನಾಶವು ಹತ್ತಿರವಾದಾಗ ಕೆಟ್ಟದ್ದು ಒಳ್ಳೆಯದಾಗಿಯೂ ಒಳ್ಳೆಯದು ಕೆಟ್ಟದ್ದಾಗಿಯೂ ತೋರುತ್ತದೆ ಮತ್ತು ಮನುಷ್ಯನು ತನಗೆ ಕಂಡದ್ದನ್ನೇ ಸ್ವೀಕರಿಸುತ್ತಾನೆ. 

02072011a ಕಾಲೋ ದಂಡಮುದ್ಯಮ್ಯ ಶಿರಃ ಕೃಂತತಿ ಕಸ್ಯ ಚಿತ್|

02072011c ಕಾಲಸ್ಯ ಬಲಮೇತಾವದ್ವಿಪರೀತಾರ್ಥದರ್ಶನಂ||

ಕಾಲವು ದಂಡವನ್ನೆತ್ತಿ ಶಿರವನ್ನೆಂದೂ ಒಡೆಯುವುದಿಲ್ಲ[1]. ಈ ರೀತಿಯ ವಿಪರೀತ ಅರ್ಥಗಳನ್ನು ತೋರಿಸುವುದೇ ಕಾಲದ ಬಲ.

02072012a ಆಸಾದಿತಮಿದಂ ಘೋರಂ ತುಮುಲಂ ಲೋಮಹರ್ಷಣ|

02072012c ಪಾಂಚಾಲೀಮಪಕರ್ಷದ್ಭಿಃ ಸಭಾಮಧ್ಯೇ ತಪಸ್ವಿನೀಂ||

ಮೈನವಿರೇಳಿಸುವ ಈ ಘೋರ ತುಮುಲವು ತಪಸ್ವಿನೀ ಪಾಂಚಾಲಿಯನ್ನು ಸಭಾಮಧ್ಯದಲ್ಲಿ ಎಳೆದು ತಂದಿರುವುದರಿಂದ ಆಗಿದ್ದುದು.

02072013a ಅಯೋನಿಜಾಂ ರೂಪವತೀಂ ಕುಲೇ ಜಾತಾಂ ವಿಭಾವರೀಂ|

02072013c ಕೋ ನು ತಾಂ ಸರ್ವಧರ್ಮಜ್ಞಾಂ ಪರಿಭೂಯ ಯಶಸ್ವಿನೀಂ||

02072014a ಪರ್ಯಾನಯೇತ್ಸಭಾಮಧ್ಯಮೃತೇ ದುರ್ದ್ಯೂತದೇವಿನಂ|

ಕೆಟ್ಟ ಜೂಜಾಡುವವನಲ್ಲದೇ ಬೇರೆ ಯಾರು ತಾನೆ ಆ ಅಯೋನಿಜೆ, ರೂಪವತಿ, ಉತ್ತಮ ಕುಲದಲ್ಲಿ ಹುಟ್ಟಿದ, ವಿಭಾವರೀ, ಸರ್ವಧರ್ಮಜ್ಞೆ, ಯಶಸ್ವಿನಿಯನ್ನು ಬಲವಂತವಾಗಿ ಸಭಾಮಧ್ಯದಲ್ಲಿ ಎಳೆದು ತಂದಾರು?

02072014c ಸ್ತ್ರೀಧರ್ಮಿಣೀಂ ವರಾರೋಹಾಂ ಶೋಣಿತೇನ ಸಮುಕ್ಷಿತಾಂ||

02072015a ಏಕವಸ್ತ್ರಾಂ ಚ ಪಾಂಚಾಲೀಂ ಪಾಂಡವಾನಭ್ಯವೇಕ್ಷತೀಂ|

02072015c ಹೃತಸ್ವಾನ್ಭ್ರಷ್ಟಚಿತ್ತಾಂಸ್ತಾನ್ ಹೃತದಾರಾನ್ ಹೃತಶ್ರಿಯಃ||

02072016a ವಿಹೀನಾನ್ಸರ್ವಕಾಮೇಭ್ಯೋ ದಾಸಭಾವವಶಂ ಗತಾನ್|

02072016c ಧರ್ಮಪಾಶಪರಿಕ್ಷಿಪ್ತಾನಶಕ್ತಾನಿವ ವಿಕ್ರಮೇ||

ಆ ಸ್ತ್ರೀಧರ್ಮಿಣೀ, ವರಾರೋಹೆ, ರಕ್ತದಿಂದ ತೋಯ್ದ ಏಕ ವಸ್ತ್ರಧಾರಿಣಿ ಪಾಂಚಾಲಿಯು ಸೋತ, ಭ್ರಷ್ಟಚಿತ್ತ, ಪತ್ನಿಯನ್ನು ಕಳೆದುಕೊಂಡ, ಸಂಪತ್ತನ್ನು ಕಳೆದುಕೊಂಡ, ಸರ್ವಕಾಮಗಳಿಂದ ವಂಚಿತರಾದ, ದಾಸಭಾವವನ್ನು ಹೊಂದಿದ, ಧರ್ಮಪಾಶದಲ್ಲಿ ಸಿಲುಕಿಕೊಂಡ, ವಿಕ್ರಮದಲ್ಲಿ ಅಶಕ್ತರಂತಿರುವ ಪಾಂಡವರನ್ನು ನೋಡಿದಳು.

02072017a ಕ್ರುದ್ಧಾಮಮರ್ಷಿತಾಂ ಕೃಷ್ಣಾಂ ದುಃಖಿತಾಂ ಕುರುಸಂಸದಿ|

02072017c ದುರ್ಯೋಧನಶ್ಚ ಕರ್ಣಶ್ಚ ಕಟುಕಾನ್ಯಭ್ಯಭಾಷತಾಂ||

ಕೃದ್ಧಳೂ, ಅಸಹಾಯಕಳೂ. ದುಃಖಿತಳೂ ಆಗಿದ್ದ ಕೃಷ್ಣೆಯನ್ನು ದುರ್ಯೋಧನ ಕರ್ಣರು ಕಟು ಮಾತುಗಳಿಂದ ಅವಮಾನಿಸಿದರು.

02072018a ತಸ್ಯಾಃ ಕೃಪಣಚಕ್ಷುರ್ಭ್ಯಾಂ ಪ್ರದಹ್ಯೇತಾಪಿ ಮೇದಿನೀ|

02072018c ಅಪಿ ಶೇಷಂ ಭವೇದದ್ಯ ಪುತ್ರಾಣಾಂ ಮಮ ಸಂಜಯ||

ಸಂಜಯ! ಅವಳ ದೀನ ಕಣ್ಣುಗಳಿಂದ ಇಡೀ ಭೂಮಿಯೇ ಸುಟ್ಟುಹೋಗಬಹುದಾಗಿತ್ತು. ಇನ್ನು ನನ್ನ ಪುತ್ರರು ಉಳಿಯುವರೇ?

02072019a ಭಾರತಾನಾಂ ಸ್ತ್ರಿಯಃ ಸರ್ವಾ ಗಾಂಧಾರ್ಯಾ ಸಹ ಸಂಗತಾಃ|

02072019c ಪ್ರಾಕ್ರೋಶನ್ಭೈರವಂ ತತ್ರ ದೃಷ್ಟ್ವಾ ಕೃಷ್ಣಾಂ ಸಭಾಗತಾಂ||

ಅಲ್ಲಿ ಸೇರಿದ್ದ ಗಾಂಧಾರಿಯನ್ನೂ ಸೇರಿ ಸರ್ವ ಭಾರತ ಸ್ತ್ರೀಯರು ಕೃಷ್ಣೆಯನ್ನು ಸಭೆಗೆ ಕರಿಸಿದ್ದುದನ್ನು ನೋಡಿ ಭೈರವವಾಗಿ ಕೂಗಿಕೊಂಡರು.

02072020a ಅಗ್ನಿಹೋತ್ರಾಣಿ ಸಾಯಾಹ್ನೇ ನ ಚಾಹೂಯಂತ ಸರ್ವಶಃ|

02072020c ಬ್ರಾಹ್ಮಣಾಃ ಕುಪಿತಾಶ್ಚಾಸನ್ದ್ರೌಪದ್ಯಾಃ ಪರಿಕರ್ಷಣೇ||

ಸರ್ವ ಬ್ರಾಹ್ಮಣರೂ ದ್ರೌಪದಿಯ ಬಲಾತ್ಕಾರದಿಂದ ಕುಪಿತರಾಗಿ ಅಂದಿನ ಸಂಜೆ ಅಗ್ನಿಹೋತ್ರಗಳು ಉರಿಯಲಿಲ್ಲ.

02072021a ಆಸೀನ್ನಿಷ್ಟಾನಕೋ ಘೋರೋ ನಿರ್ಘಾತಶ್ಚ ಮಹಾನಭೂತ್|

02072021c ದಿವೋಲ್ಕಾಶ್ಚಾಪತನ್ಘೋರಾ ರಾಹುಶ್ಚಾರ್ಕಮುಪಾಗ್ರಸತ್|

02072021e ಅಪರ್ವಣಿ ಮಹಾಘೋರಂ ಪ್ರಜಾನಾಂ ಜನಯನ್ಭಯಂ||

ಅನಿಷ್ಟ ಘೋರ ಭೂಕಂಪನದ ಧ್ವನಿಯು ಕೇಳಿಬಂದಿತು. ಆಕಾಶದಿಂದ ಘೋರ ಉಲ್ಕೆಗಳು ಬಿದ್ದವು. ಗ್ರಹಣ ಕಾಲವಲ್ಲದಿದ್ದರೂ ಮಹಾಘೋರ ರಾಹುವು ಸೂರ್ಯಗ್ರಹಣ ಮಾಡಿ ಪ್ರಜೆಗಳಲ್ಲಿ ಭಯವನ್ನುಂಟು ಮಾಡಿದನು.

02072022a ತಥೈವ ರಥಶಾಲಾಸು ಪ್ರಾದುರಾಸೀದ್ಧುತಾಶನಃ|

02072022c ಧ್ವಜಾಶ್ಚ ವ್ಯವಶೀರ್ಯಂತ ಭರತಾನಾಮಭೂತಯೇ||

ಹಾಗೆಯೇ ಭಾರತರ ವಿನಾಶವನ್ನು ಸೂಚಿಸುವಂತೆ ರಥಶಾಲೆಗಳಲ್ಲಿ ಬೆಂಕಿಯು ಕಾಣಿಸಿಕೊಂಡಿತು ಮತ್ತು ಧ್ವಜಸ್ಥಂಭಗಳು ತಾವಾಗಿಯೇ ಮುರಿದು ಬಿದ್ದವು.

02072023a ದುರ್ಯೋಧನಸ್ಯಾಗ್ನಿಹೋತ್ರೇ ಪ್ರಾಕ್ರೋಶನ್ಭೈರವಂ ಶಿವಾಃ|

02072023c ತಾಸ್ತದಾ ಪ್ರತ್ಯಭಾಷಂತ ರಾಸಭಾಃ ಸರ್ವತೋದಿಶಂ||

ದುರ್ಯೋಧನನ ಅಗ್ನಿಹೋತ್ರದಲ್ಲಿ ನರಿಗಳು ಭೈರವವಾಗಿ ಕೂಗಿದವು, ಅದಕ್ಕೆ ಪ್ರತ್ಯುತ್ತರವಾಗಿ ಎಲ್ಲ ದಿಕ್ಕುಗಳಿಂದಲೂ ಕತ್ತೆಗಳು ಕೂಗಿದವು.

02072024a ಪ್ರಾತಿಷ್ಠತ ತತೋ ಭೀಷ್ಮೋ ದ್ರೋಣೇನ ಸಹ ಸಂಜಯ|

02072024c ಕೃಪಶ್ಚ ಸೋಮದತ್ತಶ್ಚ ಬಾಹ್ಲೀಕಶ್ಚ ಮಹಾರಥಃ||

ಸಂಜಯ! ಆಗ ಭೀಷ್ಮನು ದ್ರೋಣ, ಕೃಪ, ಸೋಮದತ್ತ, ಮಹಾರಥಿ ಬಾಹ್ಲೀಕರೊಂದಿಗೆ ಸಭೆಯನ್ನು ಬಿಟ್ಟು ಹೊರಟು ಹೋದನು.

02072025a ತತೋಽಹಮಬ್ರುವಂ ತತ್ರ ವಿದುರೇಣ ಪ್ರಚೋದಿತಃ|

02072025c ವರಂ ದದಾನಿ ಕೃಷ್ಣಾಯೈ ಕಾಂಕ್ಷಿತಂ ಯದ್ಯದಿಚ್ಛತಿ||

ಆಗ ನಾನು ವಿದುರನಿಂದ ಪ್ರಚೋದಿತನಾಗಿ ಬೇಡಿದ ವರವನ್ನು ಕೊಡುತ್ತೇನೆ ಎಂದು ಕೃಷ್ಣೆಗೆ ಹೇಳಿದೆನು.

02072026a ಅವೃಣೋತ್ತತ್ರ ಪಾಂಚಾಲೀ ಪಾಂಡವಾನಮಿತೌಜಸಃ|

02072026c ಸರಥಾನ್ಸಧನುಷ್ಕಾಂಶ್ಚಾಪ್ಯನುಜ್ಞಾಸಿಷಮಪ್ಯಹಂ||

ಆಗ ಪಾಂಚಾಲಿಯು ಅಮಿತೌಜಸ ಪಾಂಡವರನ್ನು ಕೇಳಿಕೊಂಡಳು. ನಾನು ರಥ, ಧನುಸ್ಸುಗಳೊಂದಿಗೆ ಅವರಿಗೆ ಹೋಗಲು ಅನುಮತಿಯನ್ನಿತ್ತೆನು.

02072027a ಅಥಾಬ್ರವೀನ್ಮಹಾಪ್ರಾಜ್ಞೋ ವಿದುರಃ ಸರ್ವಧರ್ಮವಿತ್|

02072027c ಏತದಂತಾಃ ಸ್ಥ ಭರತಾ ಯದ್ವಃ ಕೃಷ್ಣಾ ಸಭಾಂ ಗತಾ||

ಆಗ ಮಹಾಪ್ರಾಜ್ಞ, ಸರ್ವಧರ್ಮವಿದು ವಿದುರನು ಹೇಳಿದನು: “ಭಾರತರೇ! ಕೃಷ್ಣೆಯು ಸಭೆಗೆ ಬಂದಿರುವುದು ನಿಮ್ಮ ಅಂತ್ಯವನ್ನು ಸೂಚಿಸುತ್ತದೆ.

02072028a ಏಷಾ ಪಾಂಚಾಲರಾಜಸ್ಯ ಸುತೈಷಾ ಶ್ರೀರನುತ್ತಮಾ|

02072028c ಪಾಂಚಾಲೀ ಪಾಂಡವಾನೇತಾನ್ದೈವಸೃಷ್ಟೋಪಸರ್ಪತಿ||

ಈ ಪಾಂಚಾಲರಾಜನ ಸುತೆ ಪಾಂಚಾಲಿಯು ಪಾಂಡವರಿಗಾಗಿಯೇ ದೇವತೆಗಳು ಸೃಷ್ಟಿಸಿದ ಉತ್ತಮ ಶ್ರೀ.

02072029a ತಸ್ಯಾಃ ಪಾರ್ಥಾಃ ಪರಿಕ್ಲೇಶಂ ನ ಕ್ಷಂಸ್ಯಂತೇಽತ್ಯಮರ್ಷಣಾಃ|

02072029c ವೃಷ್ಣಯೋ ವಾ ಮಹೇಷ್ವಾಸಾಃ ಪಾಂಚಾಲಾ ವಾ ಮಹೌಜಸಃ||

ಅವಳ ಅಪಮಾನವನ್ನು ಸಿಟ್ಟಿಗೆದ್ದ ಪಾಂಡವರಾಗಲೀ, ಮಹೇಷ್ವಾಸ ವೃಷ್ಣಿಗಳಾಗಲೀ, ಅಥವಾ ಮಹೌಜಸ ಪಾಂಚಾಲರಾಗಲೀ ಸಹಿಸುವುದಿಲ್ಲ.

02072030a ತೇನ ಸತ್ಯಾಭಿಸಂಧೇನ ವಾಸುದೇವೇನ ರಕ್ಷಿತಾಃ|

02072030c ಆಗಮಿಷ್ಯತಿ ಬೀಭತ್ಸುಃ ಪಾಂಚಾಲೈರಭಿರಕ್ಷಿತಃ||

ಅವರು ಸತ್ಯಾಭಿಸಂಧ ವಾಸುದೇವನ ರಕ್ಷಣೆಯಲ್ಲಿದ್ದಾರೆ. ಪಾಂಚಾಲರಿಂದ ರಕ್ಷಿತನಾದ ಬೀಭತ್ಸುವು ಬರುತ್ತಾನೆ.

02072031a ತೇಷಾಂ ಮಧ್ಯೇ ಮಹೇಷ್ವಾಸೋ ಭೀಮಸೇನೋ ಮಹಾಬಲಃ|

02072031c ಆಗಮಿಷ್ಯತಿ ಧುನ್ವಾನೋ ಗದಾಂ ದಂಡಮಿವಾಂತಕಃ||

ಅವರ ಮಧ್ಯದಲ್ಲಿ ಮಹೇಷ್ವಾಸ ಮಹಾಬಲ ಭೀಮಸೇನನು ಅಂತಕನ ದಂಡದಂತಿರುವ ಗದೆಯನ್ನು ಬೀಸುತ್ತಾ ಬರುತ್ತಾನೆ.

02072032a ತತೋ ಗಾಂಡೀವನಿರ್ಘೋಷಂ ಶ್ರುತ್ವಾ ಪಾರ್ಥಸ್ಯ ಧೀಮತಃ|

02072032c ಗದಾವೇಗಂ ಚ ಭೀಮಸ್ಯ ನಾಲಂ ಸೋಢುಂ ನರಾಧಿಪಾಃ||

ಧೀಮತ ಪಾರ್ಥನ ಗಾಂಡೀವದ ಘೋಷವನ್ನಾಗಲೀ, ಭೀಮನ ಗದಾಪ್ರಹಾರದ ರಭಸವನ್ನಾಗಲೀ ಕೇಳಲು ನರಾಧಿಪರಿಗಾಗಲಿಕ್ಕಿಲ್ಲ.

02072033a ತತ್ರ ಮೇ ರೋಚತೇ ನಿತ್ಯಂ ಪಾರ್ಥೈಃ ಸಾರ್ಧಂ ನ ವಿಗ್ರಹಃ|

02072033c ಕುರುಭ್ಯೋ ಹಿ ಸದಾ ಮನ್ಯೇ ಪಾಂಡವಾಂ ಶಕ್ತಿಮತ್ತರಾನ್||

ಆದುದರಿಂದ ಪಾರ್ಥರೊಂದಿಗೆ ಎಂದೂ ಯುದ್ಧವನ್ನು ಬಯಸಬಾರದು ಎಂದು ನನಗನ್ನಿಸುತ್ತದೆ. ಕುರುಗಳಿಗಿಂತ ಪಾಂಡವರೇ ಹೆಚ್ಚು ಶಕ್ತಿವಂತರು ಎಂದು ಸದಾ ನನ್ನ ಅಭಿಪ್ರಾಯ.

02072034a ತಥಾ ಹಿ ಬಲವಾನ್ರಾಜಾ ಜರಾಸಂಧೋ ಮಹಾದ್ಯುತಿಃ|

02072034c ಬಾಹುಪ್ರಹರಣೇನೈವ ಭೀಮೇನ ನಿಹತೋ ಯುಧಿ||

ಮಹಾದ್ಯುತಿ ರಾಜ ಜರಾಸಂಧನು ಬಲಶಾಲಿಯಾಗಿದ್ದರೂ ಅವನನ್ನು ಭೀಮನು ಕೇವಲ ಬಾಹುಪ್ರಹಾರದಿಂದಲೇ ಕೊಂದನು.

02072035a ತಸ್ಯ ತೇ ಶಮ ಏವಾಸ್ತು ಪಾಂಡವೈರ್ಭರತರ್ಷಭ|

02072035c ಉಭಯೋಃ ಪಕ್ಷಯೋರ್ಯುಕ್ತಂ ಕ್ರಿಯತಾಮವಿಶಂಕಯಾ||

ಭರತರ್ಷಭ! ಪಾಂಡವರೊಂದಿಗೆ ಶಾಂತಿಯಿಂದಿರು ಮತ್ತು ಎರಡೂ ಪಕ್ಷಗಳಿಗೂ ಯುಕ್ತವಾಗಿರುವ ಕಾರ್ಯವನ್ನು ಶೀಘ್ರವೇ ಕೈಗೊಳ್ಳು!”

02072036a ಏವಂ ಗಾವಲ್ಗಣೇ ಕ್ಷತ್ತಾ ಧರ್ಮಾರ್ಥಸಹಿತಂ ವಚಃ|

02072036c ಉಕ್ತವಾನ್ನ ಗೃಹೀತಂ ಚ ಮಯಾ ಪುತ್ರಹಿತೇಪ್ಸಯಾ||

ಗಾವಲ್ಗಣಿ! ಪುತ್ರನಿಗೆ ಹಿತವನ್ನುಂಟುಮಾಡಲು ಬಯಸಿದ ನಾನು ಕ್ಷತ್ತನು ಈ ರೀತಿ ಧರ್ಮಾರ್ಥಸಂಹಿತ ಮಾತುಗಳನ್ನು ಹೇಳಿದರೂ ಸ್ವೀಕರಿಸಲಿಲ್ಲ!””

ಇತಿ ಶ್ರೀ ಮಹಾಭಾರತೇ ಶತಸಹಸ್ರ್ಯಾಂ ಸಂಹಿತಾಯಾಂ ಸಭಾಪರ್ವಣಿ ಅನುದ್ಯೂತಪರ್ವಣಿ ಧೃತರಾಷ್ಟ್ರಸಂಜಯಸಂವಾದೇ ದ್ವಿಸಪ್ತತಿತಮೋಽಧ್ಯಾಯಃ||

ಇದು ಒಂದು ಲಕ್ಷ ಶ್ಲೋಕಗಳ ಸಂಹಿತೆ ಶ್ರೀ ಮಹಾಭಾರತದಲ್ಲಿ ಸಭಾಪರ್ವದಲ್ಲಿ ಅನುದ್ಯೂತಪರ್ವದಲ್ಲಿ ಧೃತರಾಷ್ಟ್ರಸಂಜಯಸಂವಾದ ಎನ್ನುವ ಎಪ್ಪತ್ತೆರಡನೆಯ ಅಧ್ಯಾಯವು.

ಇತಿ ಶ್ರೀ ಮಹಾಭಾರತೇ ಶತಸಹಸ್ರ್ಯಾಂ ಸಂಹಿತಾಯಾಂ ಸಭಾಪರ್ವಣಿ ಅನುದ್ಯೂತಪರ್ವಃ||

ಇದು ಒಂದು ಲಕ್ಷ ಶ್ಲೋಕಗಳ ಸಂಹಿತೆ ಶ್ರೀ ಮಹಾಭಾರತದಲ್ಲಿ ಸಭಾಪರ್ವದಲ್ಲಿ ಅನುದ್ಯೂತಪರ್ವವು.

ಇತಿ ಶ್ರೀ ಮಹಾಭಾರತೇ ಶತಸಹಸ್ರ್ಯಾಂ ಸಂಹಿತಾಯಾಂ ಸಭಾಪರ್ವಃ||

ಇದು ಒಂದು ಲಕ್ಷ ಶ್ಲೋಕಗಳ ಸಂಹಿತೆ ಶ್ರೀ ಮಹಾಭಾರತದಲ್ಲಿ ಸಭಾಪರ್ವವು.

ಇದೂವರೆಗಿನ ಒಟ್ಟು ಮಹಾಪರ್ವಗಳು-೨/೧೮, ಉಪಪರ್ವಗಳು-೨೯/೧೦೦, ಅಧ್ಯಾಯಗಳು-೨೯೭, ಶ್ಲೋಕಗಳು-೯೫೮೦.

ಇತಿ ಶ್ರೀ ಮಹಾಭಾರತೇ ಸಭಾಪರ್ವಣಿ ಅನುದ್ಯೂತಪರ್ವಃ||

ಇದು ಶ್ರೀ ಮಹಾಭಾರತದಲ್ಲಿ ಸಭಾಪರ್ವದಲ್ಲಿ ಅನುದ್ಯೂತಪರ್ವವು.

ಇತಿ ಶ್ರೀ ಮಹಾಭಾರತೇ ಸಭಾಪರ್ವಃ||

ಇದು ಶ್ರೀ ಮಹಾಭಾರತದಲ್ಲಿ ಸಭಾಪರ್ವವು.

ಇದೂವರೆಗಿನ ಒಟ್ಟು ಮಹಾಪರ್ವಗಳು-೨/೧೮, ಉಪಪರ್ವಗಳು-೨೮/೧೦೦, ಅಧ್ಯಾಯಗಳು-೨೯೭/೧೯೯೫, ಶ್ಲೋಕಗಳು-೯೫೮೦/೭೩೭೮೪

ಸ್ವಸ್ತಿಪ್ರಜಾಭ್ಯಃ ಪರಿಪಾಲಯಂತಾಮ್

ನ್ಯಾಯೇನ ಮಾರ್ಗೇಣ ಮಹೀಂ ಮಹೀಶಾಃ|

ಗೋಬ್ರಾಹ್ಮಣೇಭ್ಯಃ ಶುಭಮಸ್ತು ನಿತ್ಯಂ

ಲೋಕಾಃ ಸಮಸ್ತಾಃ ಸುಖಿನೋ ಭವಂತು||

ಕಾಲೇ ವರ್ಷತು ಪರ್ಜನ್ಯಃ ಪೃಥಿವೀ ಸಸ್ಯಶಾಲಿನೀ|

ದೇಶೋಽಯಂ ಕ್ಷೋಭರಹಿತೋ ಬ್ರಾಹ್ಮಣಾಃ ಸಂತು ನಿರ್ಭಯಾಃ||

ಅಪುತ್ರಾಃ ಪುತ್ರಿಣಃ ಸಂತು ಪುತ್ರಿಣಃ ಸಂತು ಪೌತ್ರಿಣಃ|

ಅಧನಾಃ ಸಧನಾಃ ಸಂತು ಜೀವಂತು ಶರದಾಂ ಶತಮ್||

ಕಾಯೇನ ವಾಚಾ ಮನಸೇಂದ್ರಿಯೈರ್ವಾ

ಬುದ್ಧ್ಯಾತ್ಮನಾ ವಾ ಪ್ರಕೃತೇಃ ಸ್ವಭಾವಾತ್|

ಕರೋಮಿ ಯದ್ಯತ್ಸಕಲಂ ಪರಸ್ಮೈ

ನಾರಾಯಣಾಯೇತಿ ಸಮರ್ಪಯಾಮಿ||

ಯದಕ್ಷರಪದಭ್ರಷ್ಟಂ ಮಾತ್ರಾಹೀನಂ ತು ಯದ್ಭವೇತ್|

ತತ್ಸರ್ವಂ ಕ್ಷಮ್ಯತಾಂ ದೇವ ನಾರಾಯಣ ನಮೋಽಸ್ತು ತೇ||

|| ಹರಿಃ ಓಂ ಕೃಷ್ಣಾರ್ಪಣಮಸ್ತು ||

Traditional Oriental Ethnic Motif Of India Mogul, Bunch Isolated On White  Background, Floral, Print Background Image for Free Download

[1]ಅಂದರೆ ಕಾಲವು ಒಂದೇ ಸಮನೆ ಮನುಷ್ಯನನ್ನು ನಾಶಗೊಳಿಸುವುದಿಲ್ಲ. ಅವನನ್ನು ನಿಧಾನವಾಗಿ, ವಿಪರೀತ ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ಮಾಡಿ, ಕೊಲ್ಲುತ್ತದೆ.

Comments are closed.