Shalya Parva: Chapter 46

ಶಲ್ಯಪರ್ವ: ಸಾರಸ್ವತಪರ್ವ

೪೬

ವರುಣನ ಅಭಿಷೇಕ (೧-೧೧). ಅಗ್ನಿತೀರ್ಥದ ಚರಿತ್ರೆ (೧೨-೨೦). ಕುಬೇರ ತೀರ್ಥದ ವರ್ಣನೆ (೨೧-೨೯).

09046001 ಜನಮೇಜಯ ಉವಾಚ

09046001a ಅತ್ಯದ್ಭುತಮಿದಂ ಬ್ರಹ್ಮನ್ ಶ್ರುತವಾನಸ್ಮಿ ತತ್ತ್ವತಃ|

09046001c ಅಭಿಷೇಕಂ ಕುಮಾರಸ್ಯ ವಿಸ್ತರೇಣ ಯಥಾವಿಧಿ||

ಜನಮೇಜಯನು ಹೇಳಿದನು: “ಬ್ರಹ್ಮನ್! ನಿಜವಾಗಿಯೂ ನಾನು ವಿಸ್ತಾರವಾಗಿ ಯಥಾವಿಧಿಯಾಗಿ ಮಾಡಿದ ಕುಮಾರನ ಅಭಿಷೇಕದ ಕುರಿತು ಕೇಳಿದುದು ಅತಿ ಅದ್ಭುತವಾಗಿದೆ.

09046002a ಯಚ್ಚ್ರುತ್ವಾ ಪೂತಮಾತ್ಮಾನಂ ವಿಜಾನಾಮಿ ತಪೋಧನ|

09046002c ಪ್ರಹೃಷ್ಟಾನಿ ಚ ರೋಮಾಣಿ ಪ್ರಸನ್ನಂ ಚ ಮನೋ ಮಮ||

ತಪೋಧನ! ಅದನ್ನು ಕೇಳಿ ನಾನು ಪವಿತ್ರನಾದೆನೆಂದು ತಿಳಿಯುತ್ತೇನೆ. ಪ್ರಸನ್ನನಾಗಿ ನನ್ನ ರೋಮಗಳು ನಿಮಿರಿ ನಿಂತಿವೆ.

09046003a ಅಭಿಷೇಕಂ ಕುಮಾರಸ್ಯ ದೈತ್ಯಾನಾಂ ಚ ವಧಂ ತಥಾ|

09046003c ಶ್ರುತ್ವಾ ಮೇ ಪರಮಾ ಪ್ರೀತಿರ್ಭೂಯಃ ಕೌತೂಹಲಂ ಹಿ ಮೇ||

ಕುಮಾರನ ಅಭಿಷೇಕ ಮತ್ತು ದೈತ್ಯರ ವಧೆಯ ಕುರಿತು ಕೇಳಿ ನನಗೆ ಪರಮ ಪ್ರೀತಿಯುಂಟಾಯಿತು. ನನ್ನಲ್ಲಿ ಇನ್ನೂ ಕುತೂಹಲವಿದೆ.

09046004a ಅಪಾಂ ಪತಿಃ ಕಥಂ ಹ್ಯಸ್ಮಿನ್ನಭಿಷಿಕ್ತಃ ಸುರಾಸುರೈಃ|

09046004c ತನ್ಮೇ ಬ್ರೂಹಿ ಮಹಾಪ್ರಾಜ್ಞ ಕುಶಲೋ ಹ್ಯಸಿ ಸತ್ತಮ||

ನೀರಿನ ಒಡೆಯನು ಸುರಾಸುರರಿಂದ ಹೇಗೆ ಅಭಿಷಿಕ್ತನಾದನು? ಮಹಾಪ್ರಾಜ್ಞ! ಸತ್ತಮ! ಕುಶಲನಾಗಿರುವೆ. ಅದರ ಕುರಿತು ನನಗೆ ಹೇಳು!”

09046005 ವೈಶಂಪಾಯನ ಉವಾಚ

09046005a ಶೃಣು ರಾಜನ್ನಿದಂ ಚಿತ್ರಂ ಪೂರ್ವಕಲ್ಪೇ ಯಥಾತಥಂ|

09046005c ಆದೌ ಕೃತಯುಗೇ ತಸ್ಮಿನ್ವರ್ತಮಾನೇ ಯಥಾವಿಧಿ|

09046005e ವರುಣಂ ದೇವತಾಃ ಸರ್ವಾಃ ಸಮೇತ್ಯೇದಮಥಾಬ್ರುವನ್||

ವೈಶಂಪಾಯನನು ಹೇಳಿದನು: “ರಾಜನ್! ಹಿಂದಿನ ಕಲ್ಪದ ಮೊದಲನೆಯ ಕೃತಯುಗದಲ್ಲಿ ನಡೆದ ಈ ವಿಚಿತ್ರ ಘಟನೆಯನ್ನು ನಡೆದಹಾಗೆ ಯಥಾವಿಧಿಯಾಗಿ ಕೇಳು. ದೇವತೆಗಳೆಲ್ಲರೂ ಒಟ್ಟಾಗಿ ವರುಣನಿಗೆ ಹೇಳಿದರು:

09046006a ಯಥಾಸ್ಮಾನ್ಸುರರಾಟ್ ಶಕ್ರೋ ಭಯೇಭ್ಯಃ ಪಾತಿ ಸರ್ವದಾ|

09046006c ತಥಾ ತ್ವಮಪಿ ಸರ್ವಾಸಾಂ ಸರಿತಾಂ ವೈ ಪತಿರ್ಭವ||

“ಶಕ್ರನು ಹೇಗೆ ನಮ್ಮನ್ನು ಸರ್ವದಾ ಭಯದಿಂದ ರಕ್ಷಿಸುತ್ತಾನೋ ಹಾಗೆ ನೀನೂ ಕೂಡ ಸರ್ವ ಸರಿತ್ತುಗಳ ಒಡೆಯನಾಗು!

09046007a ವಾಸಶ್ಚ ತೇ ಸದಾ ದೇವ ಸಾಗರೇ ಮಕರಾಲಯೇ|

09046007c ಸಮುದ್ರೋಽಯಂ ತವ ವಶೇ ಭವಿಷ್ಯತಿ ನದೀಪತಿಃ||

ದೇವ! ಮಕರಾಲಯ ಸಾಗರದಲ್ಲಿಯೇ ನೀನು ಸದಾ ವಾಸವಾಗಿರು. ನದೀಪತಿ ಸಮುದ್ರನು ನಿನ್ನ ವಶನಾಗುತ್ತಾನೆ.

09046008a ಸೋಮೇನ ಸಾರ್ಧಂ ಚ ತವ ಹಾನಿವೃದ್ಧೀ ಭವಿಷ್ಯತಃ|

09046008c ಏವಮಸ್ತ್ವಿತಿ ತಾನ್ದೇವಾನ್ವರುಣೋ ವಾಕ್ಯಮಬ್ರವೀತ್||

ಸೋಮನೊಂದಿಗೆ ನಿನ್ನ ಹಾನಿ-ವೃದ್ಧಿಗಳು ಕೂಡ ನಡೆಯುತ್ತಿರುತ್ತವೆ.” “ಹಾಗೆಯೇ ಆಗಲಿ!” ಎಂದು ವರುಣನು ಆ ದೇವತೆಗಳಿಗೆ ಹೇಳಿದನು.

09046009a ಸಮಾಗಮ್ಯ ತತಃ ಸರ್ವೇ ವರುಣಂ ಸಾಗರಾಲಯಂ|

09046009c ಅಪಾಂ ಪತಿಂ ಪ್ರಚಕ್ರುರ್ಹಿ ವಿಧಿದೃಷ್ಟೇನ ಕರ್ಮಣಾ||

ಅನಂತರ ಅವರೆಲ್ಲರೂ ಸೇರಿ ವಿಧಿ-ದೃಷ್ಟ ಕರ್ಮಗಳಿಂದ ಸಾಗರಾಲಯ ವರುಣನನ್ನು ನೀರಿನ ಒಡೆಯನನ್ನಾಗಿ ಮಾಡಿದರು.

09046010a ಅಭಿಷಿಚ್ಯ ತತೋ ದೇವಾ ವರುಣಂ ಯಾದಸಾಂ ಪತಿಂ|

09046010c ಜಗ್ಮುಃ ಸ್ವಾನ್ಯೇವ ಸ್ಥಾನಾನಿ ಪೂಜಯಿತ್ವಾ ಜಲೇಶ್ವರಂ||

ವರುಣನನ್ನು ಜಲಾಧಿಪತಿಯ ಸ್ಥಾನದಲ್ಲಿ ಅಭಿಷೇಕಿಸಿ, ಜಲೇಶ್ವರನನ್ನು ಪೂಜಿಸಿ, ದೇವತೆಗಳು ತಮ್ಮ ತಮ್ಮ ಸ್ಥಾನಗಳಿಗೆ ಹೊರಟು ಹೋದರು.

09046011a ಅಭಿಷಿಕ್ತಸ್ತತೋ ದೇವೈರ್ವರುಣೋಽಪಿ ಮಹಾಯಶಾಃ|

09046011c ಸರಿತಃ ಸಾಗರಾಂಶ್ಚೈವ ನದಾಂಶ್ಚೈವ ಸರಾಂಸಿ ಚ|

09046011e ಪಾಲಯಾಮಾಸ ವಿಧಿನಾ ಯಥಾ ದೇವಾನ್ ಶತಕ್ರತುಃ||

ದೇವತೆಗಳಿಂದ ಅಭಿಷಿಕ್ತನಾದ ಮಹಾಯಶಸ್ವಿ ವರುಣನೂ ಕೂಡ ಸರಿತ್ತು-ಸಾಗರ-ನದೀ-ಸರೋವರಗಳನ್ನು ವಿಧಿವತ್ತಾಗಿ ಶತಕ್ರತುವು ದೇವತೆಗಳನ್ನು ಹೇಗೋ ಹಾಗೆ ಪಾಲಿಸತೊಡಗಿದನು.

09046012a ತತಸ್ತತ್ರಾಪ್ಯುಪಸ್ಪೃಶ್ಯ ದತ್ತ್ವಾ ಚ ವಿವಿಧಂ ವಸು|

09046012c ಅಗ್ನಿತೀರ್ಥಂ ಮಹಾಪ್ರಾಜ್ಞಃ ಸ ಜಗಾಮ ಪ್ರಲಂಬಹಾ|

09046012e ನಷ್ಟೋ ನ ದೃಶ್ಯತೇ ಯತ್ರ ಶಮೀಗರ್ಭೇ ಹುತಾಶನಃ||

ಮಹಾಪ್ರಾಜ್ಞ ಪ್ರಲಂಬಹ ರಾಮನು ಅಲ್ಲಿ ಕೂಡ ಸ್ನಾನಮಾಡಿ, ವಿವಿಧ ಸಂಪತ್ತುಗಳನ್ನು ದಾನವನ್ನಾಗಿತ್ತು, ಅಗ್ನಿಯು ಶಮೀ ಮರದಲ್ಲಿ ಕಾಣದಂತೆ ಅಡಗಿಕೊಂಡಿದ್ದ ಆ ಅಗ್ನಿತೀರ್ಥಕ್ಕೆ ಹೋದನು.

09046013a ಲೋಕಾಲೋಕವಿನಾಶೇ ಚ ಪ್ರಾದುರ್ಭೂತೇ ತದಾನಘ|

09046013c ಉಪತಸ್ಥುರ್ಮಹಾತ್ಮಾನಂ ಸರ್ವಲೋಕಪಿತಾಮಹಂ||

ಅನಘ! ಲೋಕಾಲೋಕಗಳು ವಿನಾಶವಾಗತೊಡಗಿದಾಗ ದೇವತೆಗಳೆಲ್ಲರೂ ಸೇರಿ ಸರ್ವಲೋಕಪಿತಾಮಹ ಮಹಾತ್ಮನ ಬಳಿಸಾರಿ ಹೇಳಿದರು:

09046014a ಅಗ್ನಿಃ ಪ್ರನಷ್ಟೋ ಭಗವಾನ್ಕಾರಣಂ ಚ ನ ವಿದ್ಮಹೇ|

09046014c ಸರ್ವಲೋಕಕ್ಷಯೋ ಮಾ ಭೂತ್ಸಂಪಾದಯತು ನೋಽನಲಂ||

“ಭಗವಾನ್! ಅಗ್ನಿಯು ಕಾಣದಂತಾಗಿದ್ದಾನೆ. ಕಾರಣವೇನೆಂದು ತಿಳಿಯದು! ಸರ್ವಲೋಕಗಳ ಕ್ಷಯವಾಗಬಾರದೆಂದು ಅಗ್ನಿಯನ್ನು ಹುಡುಕಿಕೊಡಬೇಕು!””

09046015 ಜನಮೇಜಯ ಉವಾಚ

09046015a ಕಿಮರ್ಥಂ ಭಗವಾನಗ್ನಿಃ ಪ್ರನಷ್ಟೋ ಲೋಕಭಾವನಃ|

09046015c ವಿಜ್ಞಾತಶ್ಚ ಕಥಂ ದೇವೈಸ್ತನ್ಮಮಾಚಕ್ಷ್ವ ತತ್ತ್ವತಃ||

ಜನಮೇಜಯನು ಹೇಳಿದನು: “ಲೋಕಭಾವನ ಭಗವಾನ್ ಅಗ್ನಿಯು ಯಾವ ಕಾರಣಕ್ಕಾಗಿ ಕಳೆದುಹೋಗಿದ್ದನು? ಅವನಿರುವ ಸ್ಥಳವು ದೇವತೆಗಳಿಗೆ ಹೇಗೆ ತಿಳಿಯಿತು? ಅದನ್ನು ಇದ್ದಹಾಗೆ ನನಗೆ ಹೇಳು!”

09046016 ವೈಶಂಪಾಯನ ಉವಾಚ

09046016a ಭೃಗೋಃ ಶಾಪಾದ್ಭೃಶಂ ಭೀತೋ ಜಾತವೇದಾಃ ಪ್ರತಾಪವಾನ್|

09046016c ಶಮೀಗರ್ಭಮಥಾಸಾದ್ಯ ನನಾಶ ಭಗವಾಂಸ್ತತಃ||

ವೈಶಂಪಾಯನನು ಹೇಳಿದನು: “ಭೃಗುವಿನ ಶಾಪದಿಂದ ಅತ್ಯಂತ ಭೀತನಾಗಿ ಪ್ರತಾಪವಾನ್ ಭಗವಾನ್ ಜಾತವೇದನು ಶಮೀವೃಕ್ಷದಲ್ಲಿ ಸೇರಿಕೊಂಡು ಅದೃಶ್ಯನಾಗಿಬಿಟ್ಟಿದ್ದನು.

09046017a ಪ್ರನಷ್ಟೇ ತು ತದಾ ವಹ್ನೌ ದೇವಾಃ ಸರ್ವೇ ಸವಾಸವಾಃ|

09046017c ಅನ್ವೇಷಂತ ತದಾ ನಷ್ಟಂ ಜ್ವಲನಂ ಭೃಶದುಃಖಿತಾಃ||

ವಹ್ನಿಯು ಹಾಗೆ ಪ್ರನಷ್ಟನಾಗಲು ವಾಸವನೊಂದಿಗೆ ಸರ್ವ ದೇವತೆಗಳೂ ತುಂಬಾ ದುಃಖಿತರಾಗಿ ನಷ್ಟನಾದ ಅಗ್ನಿಯನ್ನು ಹುಡುಕಿದರು.

09046018a ತತೋಽಗ್ನಿತೀರ್ಥಮಾಸಾದ್ಯ ಶಮೀಗರ್ಭಸ್ಥಮೇವ ಹಿ|

09046018c ದದೃಶುರ್ಜ್ವಲನಂ ತತ್ರ ವಸಮಾನಂ ಯಥಾವಿಧಿ||

ಅನಂತರ ಅಗ್ನಿತೀರ್ಥಕ್ಕೆ ಬಂದು ಅಲ್ಲಿ ಶಮೀವೃಕ್ಷದ ಪೊಟರೆಯಲ್ಲಿ ಯಥಾವಿಧಿಯಾಗಿ ವಾಸಿಸುತ್ತಿದ್ದ ಜ್ವಲನನನ್ನು ನೋಡಿದರು.

09046019a ದೇವಾಃ ಸರ್ವೇ ನರವ್ಯಾಘ್ರ ಬೃಹಸ್ಪತಿಪುರೋಗಮಾಃ|

09046019c ಜ್ವಲನಂ ತಂ ಸಮಾಸಾದ್ಯ ಪ್ರೀತಾಭೂವನ್ಸವಾಸವಾಃ|

ನರವ್ಯಾಘ್ರ! ವಾಸವನೊಂದಿಗೆ ಬೃಹಸ್ಪತಿಯೇ ಮೊದಲಾದ ಸರ್ವ ದೇವತೆಗಳೂ ಜ್ವಲನನನ್ನು ಕಂಡು ಹರ್ಷಿತರಾದರು.

09046019e ಪುನರ್ಯಥಾಗತಂ ಜಗ್ಮುಃ ಸರ್ವಭಕ್ಷಶ್ಚ ಸೋಽಭವತ್||

09046020a ಭೃಗೋಃ ಶಾಪಾನ್ಮಹೀಪಾಲ ಯದುಕ್ತಂ ಬ್ರಹ್ಮವಾದಿನಾ|

ಮಹೀಪಾಲ! ಅವರು ಪುನಃ ಹಿಂದಿರುಗಲು, ಬ್ರಹ್ಮವಾದಿ ಭೃಗುವು ಏನು ಹೇಳಿ ಶಾಪವನ್ನಿತ್ತಿದ್ದನೋ ಹಾಗೆಯೇ ಅಗ್ನಿಯು ಸರ್ವಭಕ್ಷಕನಾದನು.

09046020c ತತ್ರಾಪ್ಯಾಪ್ಲುತ್ಯ ಮತಿಮಾನ್ಬ್ರಹ್ಮಯೋನಿಂ ಜಗಾಮ ಹ||

09046021a ಸಸರ್ಜ ಭಗವಾನ್ಯತ್ರ ಸರ್ವಲೋಕಪಿತಾಮಹಃ|

ಮತಿಮಾನ್ ಬಲರಾಮನು ಅಲ್ಲಿ ಸ್ನಾನಮಾಡಿ ಎಲ್ಲಿ ಸರ್ವಲೋಕಪಿತಾಮಹ ಭಗವಾನನು ಸೃಷ್ಟಿಸಿದನೋ ಆ ಬ್ರಹ್ಮಯೋನಿಗೆ ಹೋದನು.

09046021c ತತ್ರಾಪ್ಲುತ್ಯ ತತೋ ಬ್ರಹ್ಮ ಸಹ ದೇವೈಃ ಪ್ರಭುಃ ಪುರಾ|

09046021e ಸಸರ್ಜ ಚಾನ್ನಾನಿ ತಥಾ ದೇವತಾನಾಂ ಯಥಾವಿಧಿ||

ಹಿಂದೆ ಪ್ರಭು ಬ್ರಹ್ಮನು ದೇವತೆಗಳೊಂದಿಗೆ ಅಲ್ಲಿ ಸ್ನಾನಮಾಡಿ ಯಥಾವಿಧಿಯಾಗಿ ದೇವತೆಗಳ ಆಹಾರಗಳನ್ನು ಸೃಷ್ಟಿಸಿದ್ದನು.

09046022a ತತ್ರ ಸ್ನಾತ್ವಾ ಚ ದತ್ತ್ವಾ ಚ ವಸೂನಿ ವಿವಿಧಾನಿ ಚ|

09046022c ಕೌಬೇರಂ ಪ್ರಯಯೌ ತೀರ್ಥಂ ತತ್ರ ತಪ್ತ್ವಾ ಮಹತ್ತಪಃ|

09046022e ಧನಾಧಿಪತ್ಯಂ ಸಂಪ್ರಾಪ್ತೋ ರಾಜನ್ನೈಲಬಿಲಃ ಪ್ರಭುಃ||

ಅಲ್ಲಿ ಸ್ನಾನಮಾಡಿ ವಿವಿಧ ಸಂಪತ್ತುಗಳನ್ನು ದಾನವಾಗಿತ್ತು ಬಲರಾಮನು ಕುಬೇರತೀರ್ಥಕ್ಕೆ ಹೋದನು. ರಾಜನ್! ಅಲ್ಲಿ ಪ್ರಭು ಐಲಬಿಲ ಕುಬೇರನು ಮಹಾ ತಪಸ್ಸನ್ನು ತಪಿಸಿ ಧನಾಧಿಪತ್ಯವನ್ನು ಪಡೆದಿದ್ದನು.

09046023a ತತ್ರಸ್ಥಮೇವ ತಂ ರಾಜನ್ಧನಾನಿ ನಿಧಯಸ್ತಥಾ|

09046023c ಉಪತಸ್ಥುರ್ನರಶ್ರೇಷ್ಠ ತತ್ತೀರ್ಥಂ ಲಾಂಗಲೀ ತತಃ|

09046023e ಗತ್ವಾ ಸ್ನಾತ್ವಾ ಚ ವಿಧಿವದ್ಬ್ರಾಹ್ಮಣೇಭ್ಯೋ ಧನಂ ದದೌ||

ರಾಜನ್! ನರಶ್ರೇಷ್ಠ! ಅಲ್ಲಿಯೇ ಧನ-ನಿಧಿಗಳು ಕುಬೇರನನ್ನು ಸೇವಿಸತೊಡಗಿದವು. ಲಾಂಗಲಿಯು ಅಲ್ಲಿ ಹೋಗಿ ಸ್ನಾನಮಾಡಿ ವಿಧಿವತ್ತಾಗಿ ಬ್ರಾಹ್ಮಣರಿಗೆ ಧನವನ್ನಿತ್ತನು.

09046024a ದದೃಶೇ ತತ್ರ ತತ್ ಸ್ಥಾನಂ ಕೌಬೇರೇ ಕಾನನೋತ್ತಮೇ|

09046024c ಪುರಾ ಯತ್ರ ತಪಸ್ತಪ್ತಂ ವಿಪುಲಂ ಸುಮಹಾತ್ಮನಾ||

ಅಲ್ಲಿಯೇ ಅವನು ಹಿಂದೆ ಸುಮಹಾತ್ಮ ಕುಬೇರನು ವಿಪುಲ ತಪಸ್ಸನ್ನು ತಪಿಸಿದ್ದ ಉತ್ತಮ ಕಾನನವನ್ನು ನೋಡಿದನು.

09046025a ಯತ್ರ ರಾಜ್ಞಾ ಕುಬೇರೇಣ ವರಾ ಲಬ್ಧಾಶ್ಚ ಪುಷ್ಕಲಾಃ|

09046025c ಧನಾಧಿಪತ್ಯಂ ಸಖ್ಯಂ ಚ ರುದ್ರೇಣಾಮಿತತೇಜಸಾ||

ಅಲ್ಲಿಯೇ ರಾಜಾ ಕುಬೇರನು ಧನಾಧಿಪತ್ಯವನ್ನೂ ಅಮಿತತೇಜಸ್ವಿ ರುದ್ರನೊಂದಿಗೆ ಸಖ್ಯವನ್ನೂ ಪಡೆದಿದ್ದನು.

09046026a ಸುರತ್ವಂ ಲೋಕಪಾಲತ್ವಂ ಪುತ್ರಂ ಚ ನಲಕೂಬರಂ|

09046026c ಯತ್ರ ಲೇಭೇ ಮಹಾಬಾಹೋ ಧನಾಧಿಪತಿರಂಜಸಾ||

ಅಲ್ಲಿಯೇ ಮಹಾಬಾಹು ಧನಪತಿಯು ಸುರತ್ವವನ್ನೂ, ಲೋಕಪಾಲತ್ವವನ್ನೂ, ನಲಕೂಬರನೆನ್ನುವ ಪುತ್ರನನ್ನೂ ಪಡೆದಿದ್ದನು.

09046027a ಅಭಿಷಿಕ್ತಶ್ಚ ತತ್ರೈವ ಸಮಾಗಮ್ಯ ಮರುದ್ಗಣೈಃ|

09046027c ವಾಹನಂ ಚಾಸ್ಯ ತದ್ದತ್ತಂ ಹಂಸಯುಕ್ತಂ ಮನೋರಮಂ|

09046027e ವಿಮಾನಂ ಪುಷ್ಪಕಂ ದಿವ್ಯಂ ನೈರೃತೈಶ್ವರ್ಯಮೇವ ಚ||

ಅಲ್ಲಿಯೇ ಮರುದ್ಗಣಗಳಿಂದ ಅಭಿಷಿಕ್ತನಾದ ಅವನು ನೈರುತ್ಯದ ಮತ್ತು ಐಶ್ವರ್ಯಗಳ ಅಧಿಪತ್ಯವನ್ನೂ, ಹಂಸಯುಕ್ತ-ಮನೋರಮ-ದಿವ್ಯ ಪುಷ್ಪಕ ವಿಮಾನವನ್ನು ಪಡೆದನು.

09046028a ತತ್ರಾಪ್ಲುತ್ಯ ಬಲೋ ರಾಜನ್ದತ್ತ್ವಾ ದಾಯಾಂಶ್ಚ ಪುಷ್ಕಲಾನ್|

09046028c ಜಗಾಮ ತ್ವರಿತೋ ರಾಮಸ್ತೀರ್ಥಂ ಶ್ವೇತಾನುಲೇಪನಃ||

ರಾಜನ್! ಶ್ವೇತಗಂಧಾನುಲಿಪ್ತ ಬಲರಾಮನು ಅಲ್ಲಿ ಸ್ನಾನಮಾಡಿ, ಪುಷ್ಕಲ ದಾನಗಳನ್ನಿತ್ತು ತ್ವರೆಮಾಡಿ ರಾಮತೀರ್ಥಕ್ಕೆ ಹೋದನು.

09046029a ನಿಷೇವಿತಂ ಸರ್ವಸತ್ತ್ವೈರ್ನಾಮ್ನಾ ಬದರಪಾಚನಂ|

09046029c ನಾನರ್ತುಕವನೋಪೇತಂ ಸದಾಪುಷ್ಪಫಲಂ ಶುಭಂ||

ಬದರಪಾಚನವೆಂಬ ಹೆಸರಿದ್ದ ಅದು ಸರ್ವ ಸತ್ತ್ವಗಳಿಂದ ಕೂಡಿತ್ತು. ಸದಾ ಶುಭ ಪುಷ್ಪ-ಫಲಬರಿತವಾಗಿದ್ದ ಆ ತೀರ್ಥವನ್ನು ಅವನು ಸೇರಿದನು.”

ಇತಿ ಶ್ರೀಮಹಾಭಾರತೇ ಶಲ್ಯಪರ್ವಣಿ ಸಾರಸ್ವತಪರ್ವಣಿ ಬಲದೇವತಿರ್ಥಯಾತ್ರಾಯಾಂ ಷಟ್ಚತ್ವಾರಿಂಶೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಲ್ಯಪರ್ವದಲ್ಲಿ ಸಾರಸ್ವತಪರ್ವದಲ್ಲಿ ಬಲದೇವತೀರ್ಥಯಾತ್ರೆ ಎನ್ನುವ ನಲ್ವತ್ತಾರನೇ ಅಧ್ಯಾಯವು.

ಸಾರಸ್ವತ ಪರ್ವದ ಇತರ ಅಧ್ಯಾಯಗಳು:

  1. ಪಾಂಡವಾನಾಂ ಸರೋವರಾಗಮನ
  2. ಸುಯೋಧನಯುಧಿಷ್ಠಿರಸಂವಾದ
  3. ಸುಯೋಧನಯುಧಿಷ್ಠಿರಸಂವಾದ
  4. ಭೀಮಸೇನದುರ್ಯೋಧನಸಂವಾದ
  5. ಬಲದೇವಾಗಮನ
  6. ಬಲದೇವತೀರ್ಥಯಾತ್ರಾಯಾಂ ಪ್ರಭಾಸೋತ್ಪತ್ತಿಕಥನ
  7. ಬಲದೇವತೀರ್ಥಯಾತ್ರಾಯಾಂ ತ್ರಿತಾಖ್ಯಾನ
  8. ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
  9. ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
  10. ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
  11. ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
  12. ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
  13. ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
  14. ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
  15. ಬಲದೇವತೀರ್ಥಯಾತ್ರಾಯಾಂ ಕುಮಾರಾಭಿಷೇಕಕ್ರಮ
  16. ಬಲದೇವತೀರ್ಥಯಾತ್ರಾಯಾಂ ಸ್ಕಂದಾಭಿಷೇಕ
  17. ಬಲದೇವತೀರ್ಥಯಾತ್ರಾಯಾಂ ತಾರಕವಧ
  18. ಬಲದೇವತೀರ್ಥಯಾತ್ರಾ
  19. ಬಲದೇವತೀರ್ಥಯಾತ್ರಾಯಾಂ ಬದರಪಾಚನತೀರ್ಥಕಥನ
  20. ಬಲದೇವತೀರ್ಥಯಾತ್ರಾ
  21. ಬಲದೇವತೀರ್ಥಯಾತ್ರಾ
  22. ಬಲದೇವತೀರ್ಥಯಾತ್ರಾ
  23. ಬಲದೇವತೀರ್ಥಯಾತ್ರಾ
  24. ಬಲದೇವತೀರ್ಥಯಾತ್ರಾಯಾಂ ಕುರುಕ್ಷೇತ್ರಕಥನ
  25. ಬಲದೇವತೀರ್ಥಯಾತ್ರಾ

Comments are closed.