ಸಭಾ ಪರ್ವ: ಅರ್ಘ್ಯಾಭಿಹರಣ ಪರ್ವ
೩೪
ಶ್ರೀಕೃಷ್ಣನಿಗೆ ಅರ್ಘ್ಯವನ್ನಿತ್ತುದ್ದಕ್ಕೆ ಶಿಶುಪಾಲನ ಆಕ್ಷೇಪ
ಶಿಶುಪಾಲನು ಆಕ್ಷೇಪಿಸಿ, ಸಭೆಯನ್ನು ತ್ಯಜಿಸಿ ಹೊರಹೋದುದು (೧-೨೩).
02034001a ನಾಯಮರ್ಹತಿ ವಾರ್ಷ್ಣೇಯಸ್ತಿಷ್ಠತ್ಸ್ವಿಹ ಮಹಾತ್ಮಸು|
02034001c ಮಹೀಪತಿಷು ಕೌರವ್ಯ ರಾಜವತ್ಪಾರ್ಥಿವಾರ್ಹಣಂ||
ಶಿಶುಪಾಲನು ಹೇಳಿದನು: “ಕೌರವ್ಯ! ಮಹಾತ್ಮ ಮಹೀಪತಿಗಳು ಇಲ್ಲಿರವಾಗ ಪಾರ್ಥಿವನಿಗೆ ಸಲ್ಲಬೇಕಾದ ರಾಜ ಗೌರವಕ್ಕೆ ರಾಜನಲ್ಲದ ವಾರ್ಷ್ಣೇಯನು[1] ಅರ್ಹನಲ್ಲ.
02034002a ನಾಯಂ ಯುಕ್ತಃ ಸಮಾಚಾರಃ ಪಾಂಡವೇಷು ಮಹಾತ್ಮಸು|
02034002c ಯತ್ಕಾಮಾತ್ಪುಂಡರೀಕಾಕ್ಷಂ ಪಾಂಡವಾರ್ಚಿತವಾನಸಿ||
ಪಾಂಡವ! ನಿಮಗಿಷ್ಟ ಬಂದಹಾಗೆ ಈ ಪುಂಡರೀಕಾಕ್ಷನನ್ನು ಅರ್ಚಿಸುವುದು ಮಹಾತ್ಮ ಪಾಂಡವರಿಗೆ ತಕ್ಕುದಲ್ಲ!
02034003a ಬಾಲಾ ಯೂಯಂ ನ ಜಾನೀಧ್ವಂ ಧರ್ಮಃ ಸೂಕ್ಷ್ಮೋ ಹಿ ಪಾಂಡವಾಃ|
02034003c ಅಯಂ ತತ್ರಾಭ್ಯತಿಕ್ರಾಂತ ಆಪಗೇಯೋಽಲ್ಪದರ್ಶನಃ||
02034004a ತ್ವಾದೃಶೋ ಧರ್ಮಯುಕ್ತೋ ಹಿ ಕುರ್ವಾಣಃ ಪ್ರಿಯಕಾಮ್ಯಯಾ|
02034004c ಭವತ್ಯಭ್ಯಧಿಕಂ ಭೀಷ್ಮೋ ಲೋಕೇಷ್ವವಮತಃ ಸತಾಂ||
ಪಾಂಡವರೇ! ಸೂಕ್ಷ್ಮವಾದ ಧರ್ಮವು ನಿಮ್ಮಂಥ ಬಾಲಕರಿಗೆ ಅರ್ಥವಾಗುವುದಿಲ್ಲ! ಆದರೆ ಈ ದೂರದೃಷ್ಟಿಯಿಲ್ಲದ ನದಿಯ ಪುತ್ರ ಭೀಷ್ಮನು ಧರ್ಮಯುಕ್ತನಾಗಿದ್ದರೂ ಧರ್ಮವನ್ನು ಉಲ್ಲಂಘಿಸಿ ತನಗಿಷ್ಟಬಂದಹಾಗೆ ಮಾಡುತ್ತಾನೆಂದಾದರೆ ಅವನೇ ಈ ಲೋಕದ ಸಂತರಿಂದ ಹೆಚ್ಚು ಹೀಳಾಯಿಸಿಕೊಳ್ಳುತ್ತಾನೆ.
02034005a ಕಥಂ ಹ್ಯರಾಜಾ ದಾಶಾರ್ಹೋ ಮಧ್ಯೇ ಸರ್ವಮಹೀಕ್ಷಿತಾಂ|
02034005c ಅರ್ಹಣಾಮರ್ಹತಿ ತಥಾ ಯಥಾ ಯುಷ್ಮಾಭಿರರ್ಚಿತಃ||
ರಾಜನಲ್ಲದ ದಾಶಾರ್ಹನು ಸರ್ವ ಮಹೀಕ್ಷಿತರ ಮಧ್ಯೆ ಹೇಗೆ ನೀವು ಅರ್ಚಿಸಿದಂತೆ ಅಗ್ರಪೂಜೆಗೆ ಅರ್ಹನಾಗುತ್ತಾನೆ?
02034006a ಅಥ ವಾ ಮನ್ಯಸೇ ಕೃಷ್ಣಂ ಸ್ಥವಿರಂ ಭರತರ್ಷಭ|
02034006c ವಸುದೇವೇ ಸ್ಥಿತೇ ವೃದ್ಧೇ ಕಥಮರ್ಹತಿ ತತ್ಸುತಃ||
ಅಥವಾ ಕೃಷ್ಣನು ಹಿರಿಯವನೆಂದು ನೀವು ಪರಿಗಣಿಸಿದರೆ, ಭರತರ್ಷಭ! ವಸುದೇವನೇ ಇಲ್ಲಿರುವಾಗ ಅವನ ಮಗನು ಹೇಗೆ ಹಿರಿಯವನಾಗುತ್ತಾನೆ?
02034007a ಅಥ ವಾ ವಾಸುದೇವೋಽಪಿ ಪ್ರಿಯಕಾಮೋಽನುವೃತ್ತವಾನ್|
02034007c ದ್ರುಪದೇ ತಿಷ್ಠತಿ ಕಥಂ ಮಾಧವೋಽರ್ಹತಿ ಪೂಜನಂ||
ಅಥವಾ ವಾಸುದೇವನು ನಿಮ್ಮ ಪ್ರಿಯಕರ, ಬೇಕಾದುದನ್ನು ಮಾಡಿಕೊಡುತ್ತಾನೆ ಎಂದಿದ್ದರೆ ದ್ರುಪದನೇ ಇಲ್ಲಿ ಇರುವಾಗ ಮಾಧವನು ಹೇಗೆ ಈ ಪೂಜೆಗೆ ಅರ್ಹನಾಗುತ್ತಾನೆ?
02034008a ಆಚಾರ್ಯಂ ಮನ್ಯಸೇ ಕೃಷ್ಣಮಥ ವಾ ಕುರುಪುಂಗವ|
02034008c ದ್ರೋಣೇ ತಿಷ್ಠತಿ ವಾರ್ಷ್ಣೇಯಂ ಕಸ್ಮಾದರ್ಚಿತವಾನಸಿ||
ಕುರುಪುಂಗವ! ಅಥವಾ ಕೃಷ್ಣನನ್ನು ಆಚಾರ್ಯನೆಂದು ಮನ್ನಿಸಿದೆಯಾದರೆ, ದ್ರೋಣನೇ ಇಲ್ಲಿರುವಾಗ ವಾರ್ಷ್ಣೇಯನು ಹೇಗೆ ಪೂಜೆಗರ್ಹನಾಗುತ್ತಾನೆ?
02034009a ಋತ್ವಿಜಂ ಮನ್ಯಸೇ ಕೃಷ್ಣಮಥ ವಾ ಕುರುನಂದನ|
02034009c ದ್ವೈಪಾಯನೇ ಸ್ಥಿತೇ ವಿಪ್ರೇ ಕಥಂ ಕೃಷ್ಣೋಽರ್ಚಿತಸ್ತ್ವಯಾ||
ಕುರುನಂದನ! ಅಥವಾ ಕೃಷ್ಣನನ್ನು ಋತ್ವಿಜನೆಂದು ಮನ್ನಿಸಿದೆಯಾದರೆ ವಿಪ್ರ ದ್ವೈಪಾಯನನೇ ಇಲ್ಲಿರುವಾಗ ಕೃಷ್ಣನು ಹೇಗೆ ಪೂಜೆಗರ್ಹನಾಗುತ್ತಾನೆ?
02034010a ನೈವ ಋತ್ವಿಮ್ನ ಚಾಚಾರ್ಯೋ ನ ರಾಜಾ ಮಧುಸೂದನಃ|
02034010c ಅರ್ಚಿತಶ್ಚ ಕುರುಶ್ರೇಷ್ಠ ಕಿಮನ್ಯತ್ಪ್ರಿಯಕಾಮ್ಯಯಾ||
ಈ ಮಧುಸೂದನನು ಋತ್ವಿಜನೂ ಅಲ್ಲ, ಆಚಾರ್ಯನೂ ಅಲ್ಲ, ರಾಜನೂ ಅಲ್ಲ. ಕುರುಶ್ರೇಷ್ಠ! ಅಂಥವನನ್ನು ನೀನು ಪೂಜೆಸಿದ್ದೀಯೆಂದರೆ ಇದು ಕೇವಲ ನಿನಗಿಷ್ಟಬಂದಹಾಗೆ ಮಾಡಿದಹಾಗಾಗಲಿಲ್ಲವೇ?
02034011a ಅಥ ವಾಪ್ಯರ್ಚನೀಯೋಽಯಂ ಯುಷ್ಮಾಕಂ ಮಧುಸೂದನಃ|
02034011c ಕಿಂ ರಾಜಭಿರಿಹಾನೀತೈರವಮಾನಾಯ ಭಾರತ||
ಭಾರತ! ನಿನಗೆ ಮಧುಸೂದನನನ್ನೇ ಪೂಜಿಸಬೇಕೆಂದಿದ್ದಿದ್ದರೆ ಈ ರಾಜರೆನ್ನೆಲ್ಲಾ ಇಲ್ಲಿಗೆ ಕರೆದಿದ್ದೇಕೆ? ಅವಮಾನ ಮಾಡಲಿಕ್ಕೆಂದೇ?
02034012a ವಯಂ ತು ನ ಭಯಾದಸ್ಯ ಕೌಂತೇಯಸ್ಯ ಮಹಾತ್ಮನಃ|
02034012c ಪ್ರಯಚ್ಛಾಮಃ ಕರಾನ್ಸರ್ವೇ ನ ಲೋಭಾನ್ನ ಚ ಸಾಂತ್ವನಾತ್||
ನಾವೆಲ್ಲ ಮಹಾತ್ಮ ಕೌಂತೇಯನಿಗೆ ಕರವನ್ನು ಕೊಟ್ಟಿದ್ದುದು ಭಯದಿಂದಲ್ಲ, ಲೋಭದಿಂದಲೂ ಅಲ್ಲ ಅಥವಾ ನಿನ್ನನ್ನು ಮೆಚ್ಚಿಸಬೇಕೆಂದೂ ಅಲ್ಲ.
02034013a ಅಸ್ಯ ಧರ್ಮಪ್ರವೃತ್ತಸ್ಯ ಪಾರ್ಥಿವತ್ವಂ ಚಿಕೀರ್ಷತಃ|
02034013c ಕರಾನಸ್ಮೈ ಪ್ರಯಚ್ಛಾಮಃ ಸೋಽಯಮಸ್ಮಾನ್ನ ಮನ್ಯತೇ||
ಈ ಧರ್ಮಪ್ರವೃತ್ತನು ಪಾರ್ಥಿವತ್ವವನ್ನು ಬಯಸಿದನು. ಆದುದರಿಂದ ಅವನಿಗೆ ಕರವನಿತ್ತೆವು. ಆದರೆ ಈಗ ಅವನು ನಮ್ಮನ್ನು ಪರಿಗಣಿಸುವುದೇ ಇಲ್ಲ!
02034014a ಕಿಮನ್ಯದವಮಾನಾದ್ಧಿ ಯದಿಮಂ ರಾಜಸಂಸದಿ|
02034014c ಅಪ್ರಾಪ್ತಲಕ್ಷಣಂ ಕೃಷ್ಣಮರ್ಘ್ಯೇಣಾರ್ಚಿತವಾನಸಿ||
ಈ ರಾಜ ಸಂಸದಿಯಲ್ಲಿ ಅದರ ಚಿಹ್ನೆಯೇ ಇಲ್ಲದ ಕೃಷ್ಣನಿಗೆ ಅರ್ಘ್ಯವನ್ನಿತ್ತು ಪೂಜಿಸಿದ್ದೀಯೆಂದರೆ ಇದು ನಮ್ಮನ್ನು ಅವಮಾನಿಸುವ ಬುದ್ಧಿಯಿಂದಲ್ಲದೇ ಮತ್ತ್ಯಾವ ಕಾರಣದಿಂದ?
02034015a ಅಕಸ್ಮಾದ್ಧರ್ಮಪುತ್ರಸ್ಯ ಧರ್ಮಾತ್ಮೇತಿ ಯಶೋ ಗತಂ|
02034015c ಕೋ ಹಿ ಧರ್ಮಚ್ಯುತೇ ಪೂಜಾಮೇವಂ ಯುಕ್ತಾಂ ಪ್ರಯೋಜಯೇತ್|
02034015e ಯೋಽಯಂ ವೃಷ್ಣಿಕುಲೇ ಜಾತೋ ರಾಜಾನಂ ಹತವಾನ್ಪುರಾ||
ಅಕಸ್ಮಾತ್ ಧರ್ಮಪುತ್ರನ ಧರ್ಮಾತ್ಮನೆನ್ನುವ ಯಶಸ್ಸು ಹೊರಟುಹೋಯಿತು! ವೃಷ್ಣಿಕುಲದಲ್ಲಿ ಹುಟ್ಟಿ ಹಿಂದೆ ರಾಜನನ್ನು ಕೊಂದ ಧರ್ಮಚ್ಯುತನಿಗೆ ಯಾರುತಾನೇ ಈ ರೀತಿಯ ಗೌರವವನ್ನಿತ್ತು ಪೂಜಿಸುತ್ತಾರೆ?
02034016a ಅದ್ಯ ಧರ್ಮಾತ್ಮತಾ ಚೈವ ವ್ಯಪಕೃಷ್ಟಾ ಯುಧಿಷ್ಠಿರಾತ್|
02034016c ಕೃಪಣತ್ವಂ ನಿವಿಷ್ಟಂ ಚ ಕೃಷ್ಣೇಽರ್ಘ್ಯಸ್ಯ ನಿವೇದನಾತ್||
ಕೃಷ್ಣನಿಗೆ ಅರ್ಘ್ಯವನ್ನು ನೀಡುವುದರಿಂದ ಇಂದು ಯುಧಿಷ್ಠಿರನ ಧರ್ಮಾತ್ಮತೆಯು ಹರಿದು ಚಿಂದಿಯಾಗಿ ಹೋಗಿ ಅವನ ಕೃಪಣತ್ವವು ತೋರಿಸಿಕೊಂಡಿತು!
02034017a ಯದಿ ಭೀತಾಶ್ಚ ಕೌಂತೇಯಾಃ ಕೃಪಣಾಶ್ಚ ತಪಸ್ವಿನಃ|
02034017c ನನು ತ್ವಯಾಪಿ ಬೋದ್ಧವ್ಯಂ ಯಾಂ ಪೂಜಾಂ ಮಾಧವೋಽರ್ಹತಿ||
ಒಂದು ವೇಳೆ ಕೌಂತೇಯರು ಭೀತರೂ, ಕೃಪಣರೂ, ಬೆಂದವರೂ ಆಗಿದ್ದಾರೆಂದರೆ ಮಾಧವ! ಅವರಿಗೆ ನೀನಾದರೂ ಎಂಥವರು ಪೂಜೆಗೆ ಅರ್ಹರು ಎಂದು ತಿಳಿಸಿಕೊಡಬಹುದಿದ್ದಲ್ಲವೇ?
02034018a ಅಥ ವಾ ಕೃಪಣೈರೇತಾಮುಪನೀತಾಂ ಜನಾರ್ದನ|
02034018c ಪೂಜಾಮನರ್ಹಃ ಕಸ್ಮಾತ್ತ್ವಮಭ್ಯನುಜ್ಞಾತವಾನಸಿ||
ಅಥವಾ ತಮ್ಮ ಸಣ್ಣಬುದ್ಧಿಯಿಂದ ಅನರ್ಹನಾದ ನಿನಗೆ ಪೂಜೆಯನ್ನಿತ್ತರೂ ಜನಾರ್ದನ! ನೀನು ಹೇಗೆ ಅದನ್ನು ಒಪ್ಪಿಕೊಂಡು ಸ್ವೀಕರಿಸಿದೆ?
02034019a ಅಯುಕ್ತಾಮಾತ್ಮನಃ ಪೂಜಾಂ ತ್ವಂ ಪುನರ್ಬಹು ಮನ್ಯಸೇ|
02034019c ಹವಿಷಃ ಪ್ರಾಪ್ಯ ನಿಷ್ಯಂದಂ ಪ್ರಾಶಿತುಂ ಶ್ವೇವ ನಿರ್ಜನೇ||
ಇಲ್ಲ! ಚೆಲ್ಲಿದ ಹವಿಸ್ಸನ್ನು ಎತ್ತಿಕೊಂಡು ಹೋಗಿ ನಿರ್ಜನ ಪ್ರದೇಶದಲ್ಲಿ ತಿಂದು ಸಂತೋಷಪಡುವ ನಾಯಿಯ ಹಾಗೆ ನೀನು ನಿನಗರ್ಹವಾಗಿರದ ಪೂಜೆಯನ್ನು ಉತ್ತಮ ಉಡುಗೊರೆಯೆಂದು ಸಂತೋಷಪಡುತ್ತಿದ್ದೀಯೆ!
02034020a ನ ತ್ವಯಂ ಪಾರ್ಥಿವೇಂದ್ರಾಣಾಮವಮಾನಃ ಪ್ರಯುಜ್ಯತೇ|
02034020c ತ್ವಾಮೇವ ಕುರವೋ ವ್ಯಕ್ತಂ ಪ್ರಲಂಭಂತೇ ಜನಾರ್ದನ||
ಜನಾರ್ದನ! ಕೌರವರು ಈ ಪಾರ್ಥಿವೇಂದ್ರರಿಗೆ ಅಪಮಾನ ಮಾಡಿದ್ದುದಲ್ಲದೇ ನಿನ್ನನ್ನು ಪೂಜಿಸಿ ನೀನೂ ಕೂಡ ಎಂಥವನೆಂದು ಪ್ರದರ್ಶಿಸಿದ್ದಾರೆ!
02034021a ಕ್ಲೀಬೇ ದಾರಕ್ರಿಯಾ ಯಾದೃಗಂಧೇ ವಾ ರೂಪದರ್ಶನಂ|
02034021c ಅರಾಜ್ಞೋ ರಾಜವತ್ಪೂಜಾ ತಥಾ ತೇ ಮಧುಸೂದನ||
ಮಧುಸೂದನ! ಶಿಖಂಡಿಗೆ ಮದುವೆಯು ಹೇಗೋ ಹಾಗೆ, ಅಂಧನಿಗೆ ರೂಪದರ್ಶನವು ಹೇಗೋ ಹಾಗೆ, ರಾಜನಲ್ಲದ ನಿನಗೆ ಸಲ್ಲಿಸಿದ ಈ ರಾಜಪೂಜೆ!
02034022a ದೃಷ್ಟೋ ಯುಧಿಷ್ಠಿರೋ ರಾಜಾ ದೃಷ್ಟೋ ಭೀಷ್ಮಶ್ಚ ಯಾದೃಶಃ|
02034022c ವಾಸುದೇವೋಽಪ್ಯಯಂ ದೃಷ್ಟಃ ಸರ್ವಮೇತದ್ಯಥಾತಥಂ||
ರಾಜ ಯುಧಿಷ್ಠಿರನು ಎಂಥವನು ಎಂದು ನೋಡಿದೆವು, ಭೀಷ್ಮನೂ ಎಂಥವನೆಂದು ನೋಡಿದೆವು, ಮತ್ತು ವಾಸುದೇವನನ್ನೂ ಇಂದು ನಾವೆಲ್ಲರೂ ನೋಡಿಯಾಯಿತು.”
02034023a ಇತ್ಯುಕ್ತ್ವಾ ಶಿಶುಪಾಲಸ್ತಾನುತ್ಥಾಯ ಪರಮಾಸನಾತ್|
02034023c ನಿರ್ಯಯೌ ಸದಸಸ್ತಸ್ಮಾತ್ಸಹಿತೋ ರಾಜಭಿಸ್ತದಾ||
ಹೀಗೆ ಹೇಳಿ ಶಿಶುಪಾಲನು ಉನ್ನತ ಆಸನದಿಂದ ಮೇಲೆದ್ದು ಕೆಲವು ರಾಜರೊಂದಿಗೆ ಸಭೆಯನ್ನು ಬಿಟ್ಟು ಹೊರಟನು.”
ಇತಿ ಶ್ರೀ ಮಹಾಭಾರತೇ ಸಭಾಪರ್ವಣಿ ಅರ್ಘಾಭಿಹರಣಪರ್ವಣಿ ಶಿಶುಪಾಲಕ್ರೋಧೇ ಚತುಸ್ತ್ರಿಂಶೋಽಧ್ಯಾಯಃ||
ಇದು ಶ್ರೀ ಮಹಾಭಾರತದಲ್ಲಿ ಸಭಾಪರ್ವದಲ್ಲಿ ಅರ್ಘಾಭಿಹರಣಪರ್ವದಲ್ಲಿ ಶಿಶುಪಾಲಕ್ರೋಧ ಎನ್ನುವ ಮೂವತ್ನಾಲ್ಕನೆಯ ಅಧ್ಯಾಯವು.
[1]ಯದುಕುಲದಲ್ಲಿ ಹುಟ್ಟಿದ ಶ್ರೀಕೃಷ್ಣನು ರಾಜನಲ್ಲ. ಯಯಾತಿಯ ಶಾಪದಿಂದ ಯಾದವರು ರಾಜ್ಯಭ್ರಷ್ಟರಾಗಿದ್ದರು.